ಕೆಸರಲ್ಲಿ ಕುಳಿತರೆ ಕೊರೊನಾ ಬರಲ್ಲ ಎಂದವರಿಗೂ ಸೋಂಕು !

15-09-20 12:05 pm       Headline Karnataka News Network   ದೇಶ - ವಿದೇಶ

ಕೆಸರಲ್ಲಿ ಕುಳಿತು ಶಂಖ ಊದಿದರೆ ಕೊರೊನಾ ಬರಲ್ಲ ಎಂದು ಹೇಳಿ ಸುದ್ದಿಯಾಗಿದ್ದ ರಾಜಸ್ಥಾನದ ಬಿಜೆಪಿ ಸಂಸದ ಸುಖ್ ಬೀರ್ ಸಿಂಗ್ ಅದೇ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. 

ನವದೆಹಲಿ, ಸೆಪ್ಟೆಂಬರ್ 15: ಕೆಸರಲ್ಲಿ ಕುಳಿತು ಶಂಖ ಊದಿದರೆ ಕೊರೊನಾ ಬರಲ್ಲ ಎಂದು ಹೇಳಿ ಸುದ್ದಿಯಾಗಿದ್ದ ರಾಜಸ್ಥಾನದ ಬಿಜೆಪಿ ಸಂಸದ ಸುಖ್ ಬೀರ್ ಸಿಂಗ್ ಅದೇ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. 

ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನ ನಡೆದ ಪರೀಕ್ಷೆಯಲ್ಲಿ ಕೋವಿಡ್ ಪರೀಕ್ಷೆಯಲ್ಲಿ 29 ಸಂಸದರಿಗೆ ಸೋಂಕು ದೃಢಪಟ್ಟಿದ್ದು ಅದರಲ್ಲಿ ಸುಖ್ ಬೀರ್ ಕೂಡ ಒಬ್ಬರಾಗಿದ್ದಾರೆ. 

ಆಗಸ್ಟ್ ತಿಂಗಳಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದ ಸುಖ್ ಬೀರ್ ಸಿಂಗ್, ಕೆಸರಿನಲ್ಲಿ ಕುಳಿತು ಪೋಸು ನೀಡಿದ್ದರು. ಅಲ್ಲದೆ, ಕೆಸರಿನಲ್ಲಿ ಕುಳಿತು ಗಟ್ಟಿಯಾಗಿ ಶಂಖ ಊದಿದರೆ ಕೊರೋನ ಹತ್ತಿರ ಸುಳಿಯಲ್ಲ ಎಂದಿದ್ದು ಭಾರೀ ವೈರಲ್ ಆಗಿತ್ತು.

ಕೆಸರಿನಲ್ಲಿ ಕುಳಿತು, ಮೈಗೆ ಮಣ್ಣಿನ ಲೇಪ ಮಾಡಿಕೊಳ್ಳಬೇಕು. ಹಾಗೆಯೇ ಶಂಖ ಊದುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಹೇಳಿದ್ದರು. ಈಗ ಅವರನ್ನೇ ಸೋಂಕು ಆವರಿಸಿಕೊಂಡಿದ್ದು ನಗೆಪಾಟಲಿಗೀಡಾಗಿದ್ದಾರೆ.

Join our WhatsApp group for latest news updates