ಬ್ರೇಕಿಂಗ್ ನ್ಯೂಸ್
24-09-20 05:00 pm Headline Karnataka News Network ದೇಶ - ವಿದೇಶ
ಮುಂಬೈ, ಸೆಪ್ಟಂಬರ್ 24: ಮುಂಬೈ ಪೊಲೀಸರು ಬಾಲಿವುಡ್ ಡ್ರಗ್ ನಂಟಿನ ಹಿಂದೆ ಬಿದ್ದಿರುವಾಗಲೇ ಬಾಲಿವುಡ್ ನಟಿ, ಶೆರ್ಲಿನ್ ಚೋಪ್ರಾ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ. ಐಪಿಎಲ್ ಪಂದ್ಯಾಟದ ಬಳಿಕ ನಡೆಯುವ ಪಾರ್ಟಿಯಲ್ಲಿ ಕ್ರಿಕೆಟಿಗರ ಪತ್ನಿಯರು ಮತ್ತು ಬಾಲಿವುಡ್ ತಾರೆಯರು ಕೊಕೇನ್ ಸೇವಿಸುತ್ತಿದ್ದರು. ಈ ಬಗ್ಗೆ ಮುಂಬೈ ಪೊಲೀಸರು ಬಯಸಿದರೆ ಮಾಹಿತಿ ನೀಡಲು ರೆಡಿ ಇದ್ದೇನೆ ಎಂದಿದ್ದಾರೆ.
‘ನಾನೊಮ್ಮೆ ಕೊಲ್ಕತಾದಲ್ಲಿ ಕೆಕೆಆರ್ ತಂಡದ ಐಪಿಎಲ್ ಪಂದ್ಯ ನಡೆಯುತ್ತಿದ್ದಾಗ ವೀಕ್ಷಣೆಗೆ ಹೋಗಿದ್ದೆ. ಕ್ರಿಕೆಟ್ ಮುಗಿದ ಬಳಿಕ ಪಾರ್ಟಿ ನಡೆದಿದ್ದು, ನನಗೂ ಆಹ್ವಾನ ನೀಡಿದ್ದರು. ಹಾಗೇ ನಾನೂ ಹೋಗಿದ್ದೆ. ಬಾಲಿವುಡ್ ತಾರೆಯರು ಮತ್ತು ಕ್ರಿಕೆಟರ್ ಗಳ ಪತ್ನಿಯರು ಕೂಡ ಪಾಲ್ಗೊಂಡಿದ್ದರು. ಆದರೆ ಅಲ್ಲಿ ಹೋಗಿದ್ದ ನನಗೆ ಶಾಕ್ ಆಗಿತ್ತು. ಪಾರ್ಟಿಯಲ್ಲಿ ಕುಣಿದು ದಣಿದ ಬಳಿಕ ನಾನು ಲೇಡಿಸ್ ವಾಶ್ ರೂಂ ಹೋಗಿದ್ದೆ. ಅಲ್ಲಿ ನೋಡಿದಾಗ, ಕ್ರಿಕೆಟಿಗರ ಪತ್ನಿಯರು ಕೊಕೇನ್ ಸೇವಿಸುತ್ತಿದ್ದರು. ನನ್ನತ್ತ ನೋಡಿ, ಕಿರುನಗೆ ಬೀರಿದರು. ನಾನು ಅವರತ್ತ ನಗು ಬೀರುತ್ತಲೇ ಹೊರಬಂದೆ. ನಾನೇನೋ ಸಲ್ಲದ ಜಾಗಕ್ಕೆ ಬಂದಿದ್ದೇನೋ ಅನಿಸ್ತು…’
‘ಆನಂತರವೂ ಡ್ರಗ್ ಪಾರ್ಟಿ ಜೋರಾಗಿಯೇ ನಡೆದಿತ್ತು. ಡ್ರಗ್ ಪಾರ್ಟಿಗಳು ಹಾಗೇ, ಒಂದರ ಮೇಲೊಂದು ನಡೆಯುತ್ತಿರುತ್ತೆ. ಸ್ವಲ್ಪ ಹೊತ್ತಿನ ಬಳಿಕ ಕುತೂಹಲದಿಂದ ಜಂಟ್ಸ್ ವಾಶ್ ರೂಮಿಗೆ ಹೋದೆ. ಅಲ್ಲಿನ ದೃಶ್ಯಗಳು ಬೇರೆ ತರ ಇರಲಿಲ್ಲ. ಸೇಮ್ ಆಗಿತ್ತು..’ ಎಂದು ಶರ್ಲಿನ್ ಚೋಪ್ರಾ ಬಾಂಬ್ ಸಿಡಿಸಿದ್ದಾಳೆ.

ಇದೇ ವೇಳೆ, ಮುಂಬೈನ ಎನ್ ಸಿಬಿ ಅಧಿಕಾರಿಗಳು ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ರಕುಲ್ ಪ್ರೀತ್ ಸಿಂಗ್, ಸಾರಾ ಅಲಿಖಾನ್, ಶ್ರದ್ಧಾ ಕಪೂರ್ ಸೇರಿದಂತೆ ಹಲವರಿಗೆ ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡಿದ್ದಾರೆ. ಬಾಲಿವುಡ್ ಡ್ರಗ್ ನಂಟು ಕೇಳಿ ಬರುತ್ತಿದ್ದಂತೆ ಕ್ರಿಕೆಟಿಗರಿಗೂ ಡ್ರಗ್ ನಂಟು ಇದೆ ಎಂಬ ಮಾತು ಕೇಳಿಬಂದಿತ್ತು. ಆದರೆ ಯಾವುದೇ ದೃಢವಾದ ಸಾಕ್ಷ್ಯಗಳು ಸಿಕ್ಕಿರಲಿಲ್ಲ.
Join our WhatsApp group for latest news updates (2)
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
24-08-26 04:14 pm
HK News Staffer
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
ಧಾರ್ಮಿಕ ದ್ವೇಷದ ನೆಪದಲ್ಲಿ ಪುತ್ತೂರು ಬಂದ್ ಕರೆ ಕೊಟ...
23-08-26 05:36 pm
24-08-26 02:35 pm
HK News Staffer
ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿ...
24-08-26 02:25 pm
ನದಿಗೆ ಬಿದ್ದ ಫುಟ್ಬಾಲ್ ಹೆಕ್ಕಲು ಹೋಗಿ ಜೀವ ಕಳಕೊಂಡ...
24-08-26 01:03 pm
ಬ್ರಹ್ಮಾವರದಲ್ಲಿ ಬೆಚ್ಚಿಬೀಳಿಸುವ ಕೃತ್ಯ ; ಹೆತ್ತ ತಂ...
24-08-26 12:06 pm
ಡೇವಿಡ್ ಡಿಸೋಜ ಹತ್ಯೆಗೆ ಶಾರ್ಪ್ ಶೂಟರ್ಗಳನ್ನು ರವಾನ...
24-08-26 11:05 am