ಬ್ರೇಕಿಂಗ್ ನ್ಯೂಸ್
28-05-22 01:09 pm Mangalore Correspondent ಕರಾವಳಿ
ಮಂಗಳೂರು, ಮೇ 28 : ಇಲ್ಲಿ ಕೆಲವರು ಜೀವ ತೆತ್ತಾದರೂ, ಮಳಲಿ ಮಸೀದಿ ಬಿಟ್ಟು ಕೊಡಲ್ಲ ಎಂದಿದ್ದಾರೆ. ಆದರೆ ನಾನು ಹಾಗೆ ಹೇಳೋದಿಲ್ಲ. ಪ್ರಮೋದ್ ಮುತಾಲಿಕ್, ಮಳಲಿ ಮಸೀದಿ ಬಿಟ್ಟು ಕೊಡದಿದ್ದರೆ ಹತ್ಯಾಕಾಂಡ ನಡೆಸುವುದಾಗಿ ಹೇಳಿದ್ದಾನೆ. ಇವರು ಹತ್ಯಾಕಾಂಡ ನಡೆಸೋದಾದ್ರೆ ನಾವೇನು ಬಳೆ ಹಾಕ್ಕೊಂಡು ಕುಳಿತಿಲ್ಲ. ಈ ಪ್ರಮೋದ್ ಮುತಾಲಿಕ್ ಅಪ್ಪನಿಗೆ ಹುಟ್ಟಿದ ಮಗನಾಗಿದ್ದರೆ ಮಳಲಿಗೆ ಬಂದು ಒಂದು ತುಂಡು ಇಟ್ಟಿಗೆ ಎತ್ತಿಕೊಂಡು ಹೋಗಲಿ ಎಂದು ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಭಾಸ್ಕರ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನ ಕಣ್ಣೂರಿನಲ್ಲಿ ನಡೆದ ಎಸ್ಡಿಪಿಐ ಸಮಾವೇಶದಲ್ಲಿ ಮಾತನಾಡಿದ ಭಾಸ್ಕರ್ ಪ್ರಸಾದ್, ಮಳಲಿಯ ಮಸೀದಿ ಎತ್ತಬೇಕು, ದೇಶಾದ್ಯಂತ 36 ಸಾವಿರ ಮಸೀದಿಗಳನ್ನು ಒಡೆದು ಮಂದಿರ ನಿರ್ಮಿಸುತ್ತೇವೆ ಎನ್ನುವ ಈಶ್ವರಪ್ಪನಂಥವರಿಗೆ ಪ್ರಶ್ನೆ ಕೇಳುತ್ತೇನೆ. ಹಿಂದೆ ಅಶೋಕ ಚಕ್ರವರ್ತಿ ಈ ದೇಶದಲ್ಲಿ 84 ಸಾವಿರ ಬೌದ್ಧ ಮಂದಿರಗಳನ್ನು ನಿರ್ಮಿಸಿದ್ದ. ಆನಂತರ ಮೌರ್ಯರ ಕಾಲದ ಬಳಿಕ ಬ್ರಾಹ್ಮಣ ರಾಜನೊಬ್ಬ ಅಧಿಕಾರಕ್ಕೆ ಬಂದು ಎಲ್ಲ ಬೌದ್ಧ ಮಂದಿರಗಳನ್ನು ನಾಶ ಮಾಡಿ ಅಲ್ಲಿಯೆಲ್ಲಾ ರಾಮ, ಕೃಷ್ಣನ ದೇವಸ್ಥಾನಗಳನ್ನು ನಿರ್ಮಿಸಿದ್ದ. ನೀವು ಮಸೀದಿ ಬಗ್ಗೆ ಕೇಳಿದರೆ, ನಾವು ಎಲ್ಲ ಬೌದ್ಧ ಮಂದಿರಗಳನ್ನು ಕೇಳುತ್ತೇವೆ. ನಿಮಗೆ ಕೊಡಲು ಸಾಧ್ಯವಿದೆಯಾ ಎಂದು ಪ್ರಶ್ನಿಸಿದರು.

1991 ರಲ್ಲಿ ದೇಶದಲ್ಲಿ ಇರುವ ಎಲ್ಲ ಮಂದಿರ, ಮಸೀದಿಗಳು ಯಥಾಸ್ಥಿತಿಯಲ್ಲೇ ಇರಬೇಕು. ಯಾವುದನ್ನೂ ಕೆದಕಲು ಹೋಗಬಾರದು ಎಂದು ಕಾನೂನು ತರಲಾಗಿತ್ತು. ಹಾಗಾಗಿ ನಾವು ಈ ಬಗ್ಗೆ ಪ್ರಶ್ನೆ ಮಾಡಿರಲಿಲ್ಲ. ಆದರೆ ನೀವು ಪ್ರಶ್ನೆ ಎತ್ತಿದರೆ, ನಾವು 84 ಸಾವಿರ ದೇವಸ್ಥಾನಗಳ ಬಗ್ಗೆಯೂ ಪ್ರಶ್ನೆ ಮಾಡುತ್ತೇವೆ. ಕದ್ರಿ ಮಜುನಾಥ, ಧರ್ಮಸ್ಥಳ ಮಂಜುನಾಥ, ಅನಂತ ಪದ್ಮನಾಭಸ್ವಾಮಿ ದೇಗುಲದಿಂದ ತೊಡಗಿ ತಿರುಪತಿಯ ವರೆಗೂ ಎಲ್ಲದಕ್ಕೂ ದಾಖಲೆಗಳಿವೆ. ಹತ್ತನೇ ಶತಮಾನದಲ್ಲಿ ಕದ್ರಿಯ ಬೌದ್ಧ ಮಂದಿರವನ್ನು ಹಿಂದುಗಳ ಮಂದಿರ ಮಾಡಲಾಗಿತ್ತು. ಬೌದ್ಧರ ಮಂದಿರವನ್ನು ದೇವಸ್ಥಾನ ಮಾಡಿದ್ದಕ್ಕೆ ಬಹಳಷ್ಟು ಸಂಶೋಧನೆಗಳಾಗಿವೆ, ಸರಕಾರದ ಬಳಿ ದಾಖಲೆಗಳಿವೆ. ನೀವು ಒಂದು ಪ್ರಶ್ನೆ ಇಟ್ಟರೆ ನಮ್ಮಲ್ಲಿ ನೂರು ಪ್ರಶ್ನೆಗಳಿವೆ ಎಂದು ಭಾಸ್ಕರ್ ಪ್ರಸಾದ್ ಹೇಳಿದ್ದಾರೆ.

![]()
ಎನ್ಇಪಿ ಜಾರಿ ವಿಚಾರದಲ್ಲಿ ಕಾಂಗ್ರೆಸ್ ವಿರೋಧ ಮಾಡಿಲ್ಲ. ಎಸ್ಡಿಪಿಐ ಮಾತ್ರ ವಿರೋಧ ಮಾಡಿದ್ದು. ಎನ್ಇಪಿ ನೀತಿಯ ಪರಿಣಾಮ ಈಗ ಗೊತ್ತಾಗುತ್ತಿದೆ. ಯಾರೋ ಒಬ್ಬ ಫೇಸ್ಬುಕ್ ನಲ್ಲಿ ಟ್ರೋಲ್ ಮಾಡುತ್ತಿದ್ದ, ಗಾಂಧೀಜಿ, ಅಂಬೇಡ್ಕರ್, ಕುವೆಂಪು ಬಗ್ಗೆ ದೂರುತ್ತಿದ್ದ, ಫೇಸ್ಬುಕ್ ನಲ್ಲಿ ಕುಟ್ಟುತ್ತಿದ್ದ ಅಯೋಗ್ಯನನ್ನು ಮಕ್ಕಳ ಪಠ್ಯ ರಚನಾ ಸಮಿತಿಯ ಅಧ್ಯಕ್ಷನಾಗಿ ಮಾಡಿದ್ದಾರೆ. ಕುವೆಂಪು, ದೇವನೂರು ಬಗ್ಗೆ ಪರಿಚಯದಲ್ಲಿಯೇ ಅವಹೇಳನ ಮಾಡಿದ್ದಾನೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಬೇಡಿ, ಹಿಂದು ರಾಷ್ಟ್ರಕ್ಕಾಗಿ ಬ್ರಿಟಿಷರ ಜೊತೆ ಕೈಜೋಡಿಸಿ ಎಂದಿದ್ದ ಹೆಡಗೇವಾರ್ ಬಗ್ಗೆ ಪಠ್ಯ ಕೊಟ್ಟಿದ್ದಾರೆ. ವಿದೇಶದಲ್ಲಿ ಕೂಡಿಟ್ಟ ಹಣವನ್ನು ಮರಳಿ ತಂದರೆ ಹಳ್ಳಿಯಿಂದ ಡೆಲ್ಲಿ ವರೆಗೆ ಚಿನ್ನದ ರಸ್ತೆ ಮಾಡಬಹುದೆಂದು ಪುಂಗಿ ಊದಿದ್ದ ಹೆಂಗ್ ಪುಂಗ್ಲಿ ಸೂಲಿಬೆಲೆ ಬಗ್ಗೆ ಮಕ್ಕಳು ಓದಬೇಕಾ.. ಇವರನ್ನು ಪಠ್ಯದಲ್ಲಿ ಓದಿದರೆ ಮಕ್ಕಳು ಏನಾಗಬೇಕು. ಇಂಥ ಪಠ್ಯ ರಚಿಸಿದ ನಾಲಾಯಕ್ ವ್ಯಕ್ತಿಯ ಶಿಕ್ಷಣ ಮಟ್ಟ ಏನೆಂದೇ ಗೊತ್ತಿಲ್ಲ. ಆತ ಸಿಇಟಿ ಪ್ರೊಫೆಸರ್ ಎಂದು ಸುಳ್ಳು ಹೇಳಿದ ವ್ಯಕ್ತಿ ಶಿಕ್ಷಣ ಸಚಿವರಾಗಿರುವುದು ನಮ್ಮ ದುರಂತ. ಪ್ರೊಫೆಸರ್ ಆಗಲು ಎಷ್ಟು ವಿದ್ಯಾರ್ಹತೆ ಬೇಕೆಂದೇ ತಿಳಿಯದ ವ್ಯಕ್ತಿ ನಮ್ಮ ಶಿಕ್ಷಣ ಸಚಿವ ಎಂದು ಹೀಗಳೆದಿದ್ದಾರೆ ಭಾಸ್ಕರ್ ಪ್ರಸಾದ್.
Malali row, SDPI Bhaskar Prasad in Mangalore claims Dharmasthala and kadri temples were once Bowda temples. If VHP is demanding for temples from mosques then even we can demand Bowda temples that were once in Dharmasthala and kadri he added. Sdpi during a mass program also said that VHP can not even touch the soil of Malali mosque.
13-02-26 10:41 am
HK News Desk
ಖರೀದಿಸಿದ ಕೆಲವೇ ದಿನಗಳಲ್ಲಿ ಕೈಕೊಟ್ಟ ₹52 ಲಕ್ಷದ ಹಿ...
11-02-26 11:02 pm
Breast Cancer Awareness Drive Goes Nationwide...
11-02-26 01:34 pm
ಸ್ತನ ಕ್ಯಾನ್ಸರ್ ಬಗ್ಗೆ ದೇಶವ್ಯಾಪಿ ಜಾಗೃತಿ ; ಕಲಬರಗ...
11-02-26 01:09 pm
ಛೆ… ಇವಳೆಂಥ ಮಗಳು! ಅಮ್ಮನ ಖಾಸಗಿ ಅಂಗ, ದೊಡ್ಡಮ್ಮನ ಬ...
09-02-26 07:20 pm
12-02-26 10:51 pm
HK News Desk
ನಕಲಿ ಷೇರು ಹೂಡಿಕೆ ಆ್ಯಪ್ ಹೆಸರಲ್ಲಿ ದುಪ್ಪಟ್ಟು ಲಾಭ...
12-02-26 09:31 pm
ಅಮೆರಿಕದಲ್ಲಿ ಪೊಲೀಸ್ ಅಧಿಕಾರಿ ಕಾರು ಗುದ್ದಿ ಭಾರತೀಯ...
12-02-26 09:19 pm
260 ಜನರನ್ನು ಬಲಿ ಪಡೆದ ಅಹಮದಾಬಾದ್ ವಿಮಾನ ಪತನ ; ಇಂ...
12-02-26 01:40 pm
ಡಿಕೆ - ಸಿದ್ದು ಪವರ್ ಫೈಟ್ ; ‘ರಾಜಕಾರಣ ಮಾಡೋಕೆ ಬಂದ...
12-02-26 01:09 pm
13-02-26 06:38 pm
Giridhar Shetty, Mangaluru Staffer
ಪರ್ಸೆಂಟೇಜ್ ಈಗ ಹೆಚ್ಚಾಗಿದೆ, ರಾಜ್ಯದಲ್ಲಿ 37 ಸಾವಿರ...
13-02-26 01:28 pm
ಶಾಲಾ ಮಕ್ಕಳನ್ನು ಟಿಪ್ಪರ್ ನಲ್ಲಿ ತುಂಬಿಸಿ ಅಧ್ಯಯನ ಪ...
13-02-26 01:06 am
ಮೋದಿ ಹೆಸರಲ್ಲಿ ಹತ್ತು ನಮೋ ಕುಟೀರ ನಿರ್ಮಾಣ ಯೋಜನೆ ;...
12-02-26 10:36 pm
ಲವ್ ಜಿಹಾದ್ ಆರೋಪ ; ಸುರತ್ಕಲ್ ಲೇಡಿಸ್ ಪಿಜಿಯಲ್ಲಿ ಹ...
12-02-26 05:55 pm
13-02-26 03:35 pm
Mangalore Correspondent
ಕಾಂಬೋಡಿಯಾದಲ್ಲಿ ನಕಲಿ ಭಾರತೀಯ ಪೊಲೀಸ್ ಠಾಣೆ ಪತ್ತೆ...
13-02-26 11:52 am
ರೌಡಿ ಶೀಟರ್ ಬಿಕ್ಲು ಶಿವ ಕೊಲೆ ; ಕೊನೆಗೂ ಭೈರತಿ ಬ...
13-02-26 12:54 am
ವಿಷದ ಲಡ್ಡು ತಿನ್ನಿಸಿ 6 ಜನರ ಹತ್ಯೆ ; ದೆಹಲಿಯಲ್ಲಿ...
12-02-26 02:34 pm
ಫ್ಲ್ಯಾಟ್, ಚಿನ್ನದ ನೆಪದಲ್ಲಿ ಮುಂಬೈನ ಮಹಿಳಾ ಉದ್ಯಮಿ...
11-02-26 10:54 pm