ಬ್ರೇಕಿಂಗ್ ನ್ಯೂಸ್
28-05-22 01:50 pm Mangalore Correspondent ಕರಾವಳಿ
ಮಂಗಳೂರು, ಮೇ 28 : ಮಂಗಳೂರು ವಿವಿಯ ಆಡಳಿತಕ್ಕೆ ಒಳಪಟ್ಟ ಹಂಪನಕಟ್ಟೆ ವಿವಿ ಕಾಲೇಜಿನಲ್ಲಿ ಮತ್ತೆ ಹಿಜಾಬ್ ವಿವಾದ ತಲೆದೋರಿದ್ದು ಹೈಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚನೆ ನೀಡಲಾಗಿದೆ. ಆದರೆ ಇಂದು ಕಾಲೇಜಿಗೆ ಆಗಮಿಸಿದ್ದ 12 ಮಂದಿ ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆಯದೆ ತರಗತಿ ಪ್ರವೇಶ ನೀಡಲಾಗದು ಎಂದು ಕಾಲೇಜಿನ ಪ್ರಾಂಶುಪಾಲರು ಸೂಚಿಸಿದ್ದು ಇದರಿಂದ ಹೊಸ ತಿಕ್ಕಾಟ ಶುರುವಾಗಿದೆ. ಹಿಜಾಬ್ ಹಾಕ್ಕೊಂಡು ಬಂದಿದ್ದ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ಮನೆಗೆ ತೆರಳಿದ್ದಾರೆ.
ಶುಕ್ರವಾರ ಸಂಜೆ ಮಂಗಳೂರು ವಿವಿ ಕಾಲೇಜಿನ ಅಭಿವೃದ್ಧಿ ಸಮಿತಿ ಸಭೆ ನಡೆದಿದ್ದು ಶಾಸಕ ವೇದವ್ಯಾಸ ಕಾಮತ್, ಕುಲಪತಿ ಪಿ.ಎಸ್. ಯಡಪಡಿತ್ತಾಯ ಪಾಲ್ಗೊಂಡಿದ್ದರು. ಸಭೆಯ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದ ಶಾಸಕ ವೇದವ್ಯಾಸ ಕಾಮತ್, ಸೋಮವಾರದಿಂದ ನೂರಕ್ಕೆ ನೂರು ಕೋರ್ಟ್ ಆದೇಶ ಪಾಲನೆಯಾಗಬೇಕು. ಹಿಜಾಬ್ ಧರಿಸಿ ಕಾಲೇಜಿಗೆ ಬರುವ ಮಂದಿಗೆ ವಿಶ್ರಾಂತಿ ಕೊಠಡಿಯಲ್ಲಿ ಹಿಜಾಬ್ ತೆಗೆದಿಟ್ಟು ಬರಲು ಅವಕಾಶ ನೀಡಲಾಗುತ್ತದೆ. ಜೊತೆಗೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕೌನ್ಸೆಲಿಂಗ್ ಮಾಡುವ ಕೆಲಸವನ್ನು ಕುಲಪತಿಯವರು ಮಾಡ್ತಾರೆ. ಕೋರ್ಟ್ ಆದೇಶ ಪಾಲಿಸದ ಕಾರಣಕ್ಕೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಪದವಿ ಕಾಲೇಜುಗಳಿಗೆ ಹೈಕೋರ್ಟ್ ಆದೇಶ ಅನ್ವಯ ಆಗುತ್ತಾ ಅನ್ನುವ ಪ್ರಶ್ನೆಯನ್ನು ಕೆಲವರು ಕೇಳಿದ್ದಾರೆ. ಆದರೆ ಕೋರ್ಟ್ ಆದೇಶದಲ್ಲಿ ಸರ್ಕಾರ, ಉನ್ನತ ಶಿಕ್ಷಣ ಇಲಾಖೆ ಮತ್ತು ಯುನಿವರ್ಸಿಟಿಯನ್ನು ಪಾರ್ಟಿ ಮಾಡಲಾಗಿದೆ. ಹಾಗಾಗಿ ಈ ಆದೇಶ ಸಹಜವಾಗಿ ಎಲ್ಲ ಕಾಲೇಜುಗಳಿಗೂ ಅನ್ವಯ ಆಗುತ್ತದೆ ಎಂದು ಹೇಳಿದ್ದಾರೆ.
ಸಭೆಯ ಬಳಿಕ ಮಾತನಾಡಿದ ಮಂಗಳೂರು ವಿವಿ ಕುಲಪತಿ ಡಾ.ಸುಬ್ರಹ್ಮಣ್ಯ ಯಡಪಡಿತ್ತಾಯ, ಇನ್ನು ಮುಂದೆ ಯಾವುದೇ ಕಾರಣಕ್ಕೂ ಕಾಲೇಜಿಗೆ ಹಿಜಾಬ್ ಧರಿಸಿ ಪ್ರವೇಶ ಇರುವುದಿಲ್ಲ. ಕಾಲೇಜು ಕ್ಯಾಂಪಸ್ ಗೆ ಹಿಜಾಬ್ ಹಾಕಿಕೊಂಡು ಬರಬಹುದು. ತರಗತಿ, ಲೈಬ್ರರಿ ಸೇರಿ ಯಾವುದೇ ತರಗತಿಗೆ ಹಿಜಾಬ್ ಹಾಕಿ ಬರಲು ಅವಕಾಶ ಇಲ್ಲ. ಕೋರ್ಟ್ ಆದೇಶದ ಬಳಿಕ ಪರೀಕ್ಷಾ ಪ್ರಕ್ರಿಯೆ ಇದ್ದ ಹಿನ್ನೆಲೆ ಈ ಬಗ್ಗೆ ವಿವಿಯಿಂದ ಮಾರ್ಗಸೂಚಿ ನೀಡುವುದು ತಡವಾಗಿತ್ತು. ಆಬಳಿಕ ಸಿಂಡಿಕೇಟ್ ಸಭೆ ನಡೆಸಿ ಕ್ರಮ ಕೈಗೊಂಡಿದ್ದೇವೆ ಎಂದರು.
ಹಿಜಾಬ್ ಗೆ ಸಪೋರ್ಟ್ ಮಾಡಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ತೀರಾ ಎಂಬ ಪ್ರಶ್ನೆಗೆ, ದೂರಿಗೆ ಸಾಕ್ಷ್ಯ ಇದ್ದರೆ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಮುಸ್ಲಿಂ ವಿದ್ಯಾರ್ಥಿನಿಯರು ನನ್ನ ಬಳಿ ಬಂದಾಗ ಅವರಿಗೆ ತಿಳುವಳಿಕೆ ಹೇಳಿದ್ದೇನೆ. ಆದರೆ ಅವರು ಡಿಸಿ ಬಳಿ ಹೋಗ್ತೇನೆ ಅಂದಾಗ ಹೋಗಿ ಅಂದಿದ್ದೇನೆ. ಬೇರೆ ಕಾಲೇಜು ಹೋಗೋದಾದ್ರೆ ವ್ಯವಸ್ಥೆ ಮಾಡ್ತೇನೆ. ನಮಗೆ ಬಂದ ಆದೇಶದ ಪ್ರಕಾರ ಪದವಿ ಕಾಲೇಜಿಗೂ ಕೋರ್ಟ್ ಆದೇಶ ಅಪ್ಲೈ ಆಗುತ್ತೆ ಎಂದು ಹೇಳಿದ್ದಾರೆ.
Twelve students of Mangalore University, in Karnataka's Manguluru, on Saturday, May 28, were allegedly prevented from entering their classrooms for wearing hijabs. The principal, Anasuya Rai, tried to convince the girls to remove their hijabs inside the ladies’ room and then enter the classrooms, but the students insisted on keeping the hijabs on. The children then went to the library.
26-10-24 10:32 pm
Bangalore Correspondent
Belekeri Scam, MLA Satish Sail Jail: ಬೇಲೆಕೇರಿ...
26-10-24 05:54 pm
Shiggaon News, By Election: ಶಿಗ್ಗಾಂವಿಯಲ್ಲಿ ಕಾ...
25-10-24 09:49 pm
Writer Lakshmi G Prasad Arrest, Bangalore: ಅರ...
25-10-24 07:23 pm
Satish Sail MLA: ಬೇಲೇಕೇರಿ ಬಂದರಿನಲ್ಲಿ ಅಕ್ರಮ ಅದ...
24-10-24 11:07 pm
25-10-24 10:51 pm
HK News Desk
ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂ....
25-10-24 03:03 pm
ಸಿಖ್ ಹತ್ಯಾಕಾಂಡದ 40 ನೇ ವಾರ್ಷಿಕೋತ್ಸ ; ನ.1ರಿಂದ 1...
21-10-24 02:23 pm
2023ರಲ್ಲಿ ಗ್ಲೋಬಲ್ ಯೂತ್ ಐಕಾನ್ ಆಗಿದ್ದ ಬಿಲಿಯನೇರ್...
20-10-24 10:53 pm
ಮನೆ ಮಾಲೀಕನ ಮೇಲಿನ ಸಿಟ್ಟಿನಲ್ಲಿ ಚಪಾತಿ ಹಿಟ್ಟಿಗೆ ಮ...
17-10-24 11:16 am
27-10-24 02:41 pm
HK News Desk
Puttur MLA Ashok Rai, Mangalore: ಪುತ್ತೂರಿನ ಅಭ...
26-10-24 10:58 pm
Mangalore News, Pillar: ಪಿಲಾರು ಸರಕಾರಿ ಪಾಳು ಬಾ...
26-10-24 10:54 pm
Mangalore News, Fraud: ಮಂಗಳೂರು ಪೊಲೀಸ್ ಕಮಿಷನರ್...
26-10-24 10:07 pm
Mangalore MP Brijesh Chowta, Defence: ರಕ್ಷಣಾ...
26-10-24 02:04 pm
27-10-24 02:58 pm
HK News Desk
Bangalore Murder, Crime, Police: ಅಕ್ಕನ ಗಂಡನೊಂ...
27-10-24 01:13 pm
Honeytrap Congress, Manjula, Bangalore crime:...
26-10-24 10:20 pm
Kolar Murder, Crime News: ಪತ್ನಿಯನ್ನು ಚುಡಾಯಿಸಿ...
26-10-24 01:47 pm
Mangalore crime, Builder: ಸೈಟ್ ಖರೀದಿ ನೆಪದಲ್ಲಿ...
25-10-24 09:36 pm