ಮಂಗಳೂರು ಪೊಲೀಸರು ಆರೆಸ್ಸೆಸ್ ಬೂಟು ನೆಕ್ಕುತ್ತಿದ್ದಾರೆ, ಪಿಂಪ್ ಗಳಿಂದಲೂ ವಸೂಲಿಗಿಳಿದಿದ್ದಾರೆ ; ರಿಯಾಜ್ ಪರಂಗಿಪೇಟೆ  

28-05-22 07:48 pm       Mangalore Correspondent   ಕರಾವಳಿ

ಮಂಗಳೂರಿನ ಪೊಲೀಸ್ ಇಲಾಖೆಯವರು ಆರೆಸ್ಸೆಸ್ ನಾಯಕರ ಬೂಟು ನೆಕ್ಕುತ್ತಿದ್ದಾರೆ. ಪ್ರಮೋದ್ ಮುತಾಲಿಕ್ ಮಂಗಳೂರಿಗೆ ಬಂದರೆ ರಾಜಮರ್ಯಾದೆ ಕೊಡುವ ಪೊಲೀಸರಿಗೆ, ತಮ್ಮ ಖಾಕಿ ಸಮವಸ್ತ್ರಕ್ಕೆ ಇಸ್ತ್ರಿ ಹಾಕಲು ಬಿಜೆಪಿಯ ನಲ್ವತ್ತು ಪರ್ಸೆಂಟ್ ಸರಕಾರದಿಂದ ಹೆಚ್ಚುವರಿ ಪರ್ಸೆಂಟೇಜ್ ಸಿಗುತ್ತದೆಯೇ ಎಂಬ ಸಂಶಯವಿದೆ.

ಮಂಗಳೂರು, ಮೇ 28: ಮಂಗಳೂರಿನ ಪೊಲೀಸ್ ಇಲಾಖೆಯವರು ಆರೆಸ್ಸೆಸ್ ನಾಯಕರ ಬೂಟು ನೆಕ್ಕುತ್ತಿದ್ದಾರೆ. ಪ್ರಮೋದ್ ಮುತಾಲಿಕ್ ಮಂಗಳೂರಿಗೆ ಬಂದರೆ ರಾಜಮರ್ಯಾದೆ ಕೊಡುವ ಪೊಲೀಸರಿಗೆ, ತಮ್ಮ ಖಾಕಿ ಸಮವಸ್ತ್ರಕ್ಕೆ ಇಸ್ತ್ರಿ ಹಾಕಲು ಬಿಜೆಪಿಯ ನಲ್ವತ್ತು ಪರ್ಸೆಂಟ್ ಸರಕಾರದಿಂದ ಹೆಚ್ಚುವರಿ ಪರ್ಸೆಂಟೇಜ್ ಸಿಗುತ್ತದೆಯೇ ಎಂಬ ಸಂಶಯವಿದೆ. ಇವರಿಗೆ ತಿಂಗಳಲ್ಲಿ ಸರಿಯಾಗಿ ಸಂಬಳ ಕೊಡುತ್ತಿರುವುದು ನಮ್ಮ ತೆರಿಗೆ ದುಡ್ಡಿನಿಂದ. ಬದಲಿಗೆ, ಆರೆಸ್ಸೆಸ್ ಬ್ಯಾಂಕಿನ ದುಡ್ಡಿನಿಂದಲ್ಲ ಎಂದು ಎಸ್ಡಿಪಿಐ ರಾಜ್ಯಾಧ್ಯಕ್ಷ ರಿಯಾಜ್ ಫರಂಗಿಪೇಟೆ ಕಿಡಿಕಾರಿದ್ದಾರೆ.

ಮಂಗಳೂರಿನ ಕಣ್ಣೂರಿನಲ್ಲಿ ನಡೆದ ಎಸ್ಡಿಪಿಐ ಸಮಾವೇಶದಲ್ಲಿ ರಿಯಾಜ್ ಫರಂಗಿಪೇಟೆ ಮಂಗಳೂರು ಪೊಲೀಸ್ ಕಮಿಷನರ್ ಹೆಸರೆತ್ತದೆ ಪರೋಕ್ಷವಾಗಿ ಜಾಡಿಸಿದ್ದಾರೆ. ಕೆಲವು ಮಹಿಳೆಯರು ಹೊಟ್ಟೆಪಾಡಿಗಾಗಿ ವೇಶ್ಯಾವೃತ್ತಿ ಮಾಡುತ್ತಾರೆ. ಆದರೆ, ಮಂಗಳೂರಿನ ಪೊಲೀಸ್ ಇಲಾಖೆಯವರು ಆ ಮಹಿಳೆಯರಿಂದ ಅಥವಾ ವೇಶ್ಯೆಯರ ಪಿಂಪ್ ಗಳಿಂದಲೂ ಹಣ ವಸೂಲಿ ಮಾಡುವಷ್ಟರ ಮಟ್ಟಿಗೆ ಹೋಗಿದ್ದಾರೆ. ಪೊಲೀಸ್ ಇಲಾಖೆ ಎಂಥಾ ಸ್ಥಿತಿಗೆ ಹೋಗಿದೆ ಎನ್ನುವುದನ್ನು ಇದು ಸೂಚಿಸುತ್ತದೆ ಎಂದು ಹೇಳಿದರು.

ಕೊಡಗಿನಲ್ಲಿ ಬಜರಂಗದಳ ಸಶಸ್ತ್ರ ತರಬೇತಿ ನಡೆಸಿದಾಗ, ಅಲ್ಲಿನ ಎಸ್ಪಿ ಅದು ಏರ್ ಗನ್ ಮಾತ್ರ. ಅದಕ್ಕೆ ಲೈಸನ್ಸ್ ಬೇಕಿಲ್ಲ ಎಂದು ಹಗುರವಾದ ಹೇಳಿಕೆ ನೀಡುತ್ತಾರೆ. ಅದು ಏರ್ ಗನ್ನೋ, ಎಕೆ 47 ಅನ್ನುವುದೋ ನಮಗೆ ಬೇಕಾಗಿಲ್ಲ. ಆದರೆ ಅಲ್ಲಿ ಸಶಸ್ತ್ರ ತರಬೇತಿ ಮಾಡಿದ್ದಾರೆ ಅನ್ನುವ ವಿಚಾರಕ್ಕೆ ಎಸ್ಪಿಯಾಗಿದ್ದವರು ಹಗುರವಾಗಿ ಮಾತನಾಡುವುದು, ತಾವು ಯಾವ ಸ್ಥಾನದಲ್ಲಿ ಕುಳಿತು ಮಾತನಾಡುತ್ತಿದ್ದಾರೆ ಅನ್ನುವುದು ತಿಳಿದಿರಬೇಕು. ನಮಗೇನು ಈ ಶಸ್ತ್ರಗಳ ಬಗ್ಗೆ ಭಯವಿಲ್ಲ. ನಾವು ನಿಮ್ಮವರನ್ನು ಎದುರಿಸಲು ಎಲ್ಲ ರೀತಿಯಲ್ಲೂ ತಯಾರಿದ್ದೇವೆ ಎಂದು ರಿಯಾಜ್ ಹೇಳಿದ್ದಾರೆ.

 

Mangalore Sdpi Riyaz Farangipete slams Mangalore Police, claims they lickRss boots. He also added that police are even looting from Prostitutes. the Social Democratic Party of India (SDPI) has stated that they will not let Hindu activists carry one handful of soil from Malali Masjid stirring a controversy. “Don’t dream about taking over masjid,” stated Abdul Mazeed Mysuru, the state president of SDPI. Addressing a rally at Mangaluru, Mazeed challenged Hindu activists and Sangh Parivar members to take traditional way of “Tambula Prashne” to ascertain on destroying of 200 years old Suggalamma temple in Ballary by mining baron and BJP leader Janardhana Reddy.