ಬ್ರೇಕಿಂಗ್ ನ್ಯೂಸ್
28-05-22 09:04 pm Mangalore Correspondent ಕರಾವಳಿ
ಮಂಗಳೂರು, ಮೇ 28: ಮದುವೆ ಮಂಟಪದಲ್ಲಿ ಇನ್ನೇನು ವರ ತಾಳಿ ಕಟ್ಟಲು ರೆಡಿಯಾಗುತ್ತಿದ್ದಾಗಲೇ ವಧು ವರನ ಬಗ್ಗೆಯೇ ಸಂಶಯ ಪಟ್ಟಿದ್ದಲ್ಲದೆ, ವಿನಾಕಾರಣ ರಂಪಾಟ ಮಾಡಿ ಮದುವೆ ಮಂಟಪದಿಂದಲೇ ಎದ್ದು ಹೋದ ಘಟನೆ ನಾರಾವಿಯಲ್ಲಿ ನಡೆದಿದೆ.
ಮೂಡುಕೊಣಾಜೆಯ ಯುವತಿ ಹಾಗೂ ನಾರಾವಿಯ ಯುವಕನ ಜೊತೆ ಮೇ 25ರಂದು ನಾರಾವಿಯಲ್ಲಿ ಮದುವೆ ಕಾರ್ಯಕ್ಕೆ ಸಿದ್ಧತೆ ನಡೆದಿತ್ತು. 500 ಮಂದಿಗೆ ಊಟಕ್ಕೂ ರೆಡಿ ಮಾಡಲಾಗಿತ್ತು. ಇನ್ನೇನು ಮದುವೆ ಕಾರ್ಯ ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಯುವತಿ ರಂಪ ಶುರು ಮಾಡಿದ್ದಾಳೆ. ತಾಳಿ ಕಟ್ಟಲು ರೆಡಿಯಾಗುತ್ತಿದ್ದ ಯುವಕ, ತನಗೆ ಕೈ ತಾಗಿಸಿದ ಎಂದು ಹೇಳಿ ರಂಪ ಎತ್ತಿದ್ದ ಯುವತಿ ಬಳಿಕ ಮದುವೆ ಮಂಟಪದಿಂದಲೇ ಎದ್ದಿದ್ದಾಳೆ. ಅಲ್ಲದೆ, ನಿಶ್ಚಯ ಸಂದರ್ಭದಲ್ಲಿ ಬಂದಿದ್ದ ಹುಡುಗನೇ ಬೇರೆ. ಈಗ ಬಂದಿರುವ ಹುಡುಗನೇ ಬೇರೆ ಎಂಬುದಾಗಿ ಸಿಟ್ಟಿಗೆದ್ದು ರಂಪಾಟ ಮಾಡಿದ್ದಾಳೆ.
ಮದುವೆ ಕಾರ್ಯ ಅರ್ಧದಲ್ಲೇ ನಿಂತಿದ್ದಲ್ಲದೆ, ವಿಷಯ ವೇಣೂರು ಪೊಲೀಸರ ಬಳಿಗೆ ಹೋಗಿದೆ. ಮದುವೆಯೇನೋ ನಿಂತಿದೆ, ಮದುವೆಯ ಖರ್ಚು ಯಾರು ಕೊಡಬೇಕೆಂದು ವರನ ಕಡೆಯವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಪೊಲೀಸರು ಮಾತುಕತೆ ನಡೆಸಿ, ಎರಡೂ ಕಡೆಯವರು ಸಮಾನ ಖರ್ಚು ಭರಿಸುವಂತೆ ತಿಳಿಸಿದ್ದರು. 500 ಜನರಿಗೆ ಮಾಡಿದ್ದ ಊಟವನ್ನು ಬಳಿಕ ಪೊಲೀಸರ ಸಲಹೆಯಂತೆ ಅಲ್ಲಿಯೇ ಪಕ್ಕದ ಸರಕಾರಿ ಶಾಲೆಯ ಮಕ್ಕಳಿಗೆ ಕೊಡಿಸಿದ್ದಾರೆ. ಮದುವೆಗೆ ಬಂದಿದ್ದ ಒಂದಷ್ಟು ಜನ ಊಟ ಮಾಡಿಕೊಂಡು ಹಿಂತಿರುಗಿದ್ದಾರೆ.
ಪೊಲೀಸರ ಪ್ರಕಾರ, ವಧು ಸ್ವಲ್ಪ ಮಾನಸಿಕ ಅಸ್ವಸ್ಥಳಂತೆ ಮಾಡುತ್ತಿದ್ದಳಂತೆ. ತಾಳಿ ಕಟ್ಟುವಾಗ, ಕೈ ದೇಹಕ್ಕೆ ತಾಗುವುದು ಕಾಮನ್. ಆದರೆ, ಅದೇ ವಿಷಯ ಹಿಡಿದು ವಧು ರಂಪ ಮಾಡಿದ್ದಾಳೆ. ಯಾರು ಹೇಳಿದ್ದನ್ನೂ ಕೇಳುತ್ತಿರಲಿಲ್ಲ. ಹೀಗಾಗಿ ಸ್ವಲ್ಪ ಮಾನಸಿಕ ಸ್ಥಿಮಿತ ಕಳಕೊಂಡ ರೀತಿ ವರ್ತಿಸುತ್ತಿದ್ದಳು. ಹೀಗಾಗಿ ವರನ ಕಡೆಯವರು ಕೂಡ ಇದನ್ನು ಮದುವೆಯಾದರೆ ನಮಗೆ ಉಳಿಗಾಲ ಇಲ್ಲ ಎಂದು ಸಂಬಂಧ ಕಡಿದುಕೊಳ್ಳಲು ಒಪ್ಪಿದ್ದರಂತೆ. ವರನ ಕಡೆಯವರ ಪ್ರಕಾರ, ನಿಶ್ಚಯ ಆದಂದಿನಿಂದಲೂ ಯುವತಿ ಅದೇ ರೀತಿ ವರ್ತಿಸುತ್ತಿದ್ದಳಂತೆ. ಹೀಗಾಗಿ ಎರಡೂ ಕಡೆಯವರನ್ನು ಠಾಣೆಗೆ ಕರೆಸಿ, ಮದುವೆಯ ಖರ್ಚನ್ನು ಸಮಾನವಾಗಿ ಭರಿಸಲು ಹೇಳಿದ್ದು, ಪ್ರಕರಣ ದಾಖಲಿಸದೆ ಬಿಟ್ಟು ಕಳುಹಿಸಿದ್ದಾರೆ.
In a bizarre incident reported from Naravi in the taluk on May 25, a bride threw the garland and refused to get married to the groom just because the groom’s hand brushed her neck during the traditional garland exchange.The wedding of the girl from Moodukonaje and boy from Naravi was fixed and was to be held on May 25 at a marriage hall in Naravi.
20-05-24 07:03 pm
Bangalore Correspondent
Zip line accident at Jungle Trailz Bangalore:...
20-05-24 05:53 pm
Bangalore rave party raid, drugs, actors: ಇಲೆ...
20-05-24 01:44 pm
Charmadi Ghat, Blocked: ಚಾರ್ಮಾಡಿ ಘಾಟಿಯಲ್ಲಿ ಕೆ...
20-05-24 12:38 pm
ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಬೆಂಕಿ ; ಬ...
19-05-24 11:54 am
20-05-24 08:15 pm
HK News Desk
Ebrahim Raisi dead in helicopter crash: ಹೆಲಿಕ...
20-05-24 11:35 am
ಬ್ಯಾಂಕ್ ಖಾತೆಗೆ ಬರೋಬ್ಬರಿ 9900 ಕೋಟಿ ಹಣ ಜಮೆ ; ಮ...
19-05-24 04:30 pm
Priyanka Gandhi, Rahul Gandhi: ರಾಹುಲ್ ಗೆ ದೇಶದ...
18-05-24 10:18 pm
Pavithra Jayaram, Chandrakanth suicide: ಸೀರಿಯ...
18-05-24 09:15 pm
20-05-24 10:43 pm
Mangalore Correspondent
Mangalore Rain News: ಮಂಗಳೂರಿನಲ್ಲಿ ದಿಢೀರ್ ಬಿರು...
20-05-24 10:34 pm
Mangalore crime, CCB Police, Talapady: ಗಡಿಭಾಗ...
20-05-24 10:17 pm
Mangalore News, Rain, Harekala girl death: ಹ...
20-05-24 09:56 pm
Dr Dhananjaya Sarji campaigns in Bantwal, Man...
20-05-24 09:39 pm
18-05-24 04:05 pm
HK News Desk
ಹೊಸದುರ್ಗ ; ಮನೆಯಲ್ಲಿ ಮಲಗಿದ್ದ ಬಾಲಕಿಯನ್ನು ನಸುಕಿನ...
17-05-24 09:52 pm
Kalaburagi police bus, crime: ಕುಡಿದ ನಶೆಯಲ್ಲಿ...
17-05-24 07:23 pm
7-8 ಬಾರಿ ಎದೆ, ಹೊಟ್ಟೆಗೆ ತಿವಿದಿದ್ದಾನೆ, ನೆಲಕ್ಕೆ...
17-05-24 05:38 pm
Bangalore crime, Police: ಇವ್ನು ಬೆಸ್ಕಾಂ ಸಹಾಯಕ...
17-05-24 05:17 pm