ಬ್ರೇಕಿಂಗ್ ನ್ಯೂಸ್
30-05-22 01:10 pm Mangalore Correspondent ಕರಾವಳಿ
ಮಂಗಳೂರು, ಮೇ 30: ಮೈಸೂರಿನಿಂದ ಹಲಸಿನ ಮೇಳಕ್ಕೆ ಬಂದವರಿಬ್ಬರು ಎರಡು ದಿನದ ವ್ಯಾಪಾರ ಮುಗಿಸಿ ಪಣಂಬೂರು ಬೀಚ್ ನೋಡಲೆಂದು ಹೋಗಿ ಸ್ನಾನಕ್ಕಿಳಿದು ಸಮುದ್ರಪಾಲಾಗಿರುವ ಘಟನೆ ನಡೆದಿದೆ.
ಮೈಸೂರಿನ ಜಯನಗರದ ನಾಲ್ಕನೇ ಕ್ರಾಸ್ ನಿವಾಸಿಗಳಾದ ದಿವಾಕರ ಆರಾಧ್ಯ(40), ನಿಂಗಪ್ಪ (65) ಮೃತರು. ಇವರು ಮೈಸೂರಿನ ಅಗ್ರಹಾರದಲ್ಲಿ ಆರಾಧ್ಯ ಫುಡ್ ಅಂಡ್ ಬೇವರೇಜಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಮಂಗಳೂರಿನ ಬಾಳಂ ಭಟ್ ಹಾಲ್ ನಲ್ಲಿ ಮೇ 28, 29ರಂದು ಎರಡು ದಿನಗಳ ಹಲಸಿನ ಮೇಳ ನಡೆದಿದ್ದು, ಅದರಲ್ಲಿ ಸ್ಟಾಲ್ ಹಾಕಲು ಬಂದಿದ್ದರು. ಶನಿವಾರ, ಭಾನುವಾರ ಎರಡು ದಿನಗಳಲ್ಲಿ ವ್ಯಾಪಾರ ಮುಗಿಸಿ, ಇಂದು ಬೆಳಗ್ಗೆ ನಾಲ್ವರು ಸೇರಿಕೊಂಡು ಪಣಂಬೂರು ಬೀಚ್ ಹೋಗಿದ್ದರು.
ಬೀಚ್ ನೋಡಿಕೊಂಡು ಬಳಿಕ ಮೈಸೂರಿಗೆ ಹೊರಡಲು ಪ್ಲಾನ್ ಹಾಕಿದ್ದರು. ಆದರೆ, ಬೀಚ್ ನಲ್ಲಿ ನೀರಾಟವಾಡುತ್ತಿದ್ದಾಗ ಅಲೆಗಳ ನಡುವೆ ಸಿಲುಕಿದ್ದು ಒಬ್ಬರನ್ನು ರಕ್ಷಿಸಲು ಹೋಗಿ ಇಬ್ಬರೂ ನೀರುಪಾಲಾಗಿದ್ದಾರೆ. ಇನ್ನಿಬ್ಬರು ಬಚಾವ್ ಆಗಿದ್ದಾರೆ. ಬಳಿಕ ಸ್ಥಳೀಯ ಮೀನುಗಾರರು ಬಂದು ಇಬ್ಬರ ಶವ ಮೇಲೆತ್ತಿದ್ದಾರೆ. ಹಲಸಿನ ಮೇಳದಲ್ಲಿ ಆಹಾರ ಸಾಮಗ್ರಿ ವ್ಯಾಪಾರಕ್ಕೆ ಬಂದಿದ್ದವರು ಬೀಚ್ ನೋಡುವ ಧಾವಂತದಲ್ಲಿ ದುರಂತ ಸಾವು ಕಂಡಿದ್ದಾರೆ.
Two from Mysuru drowned at Panambur Beach in Mangalore.
05-09-26 04:53 pm
HK News Staffer
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
06-09-26 08:09 pm
Mangalore Correspondent
Ujre Wild Elephant: ಉಜಿರೆ ಎಸ್ಡಿಎಂ ಎಂಜಿನಿಯರಿಂ...
06-09-26 01:14 pm
ಸುಬ್ರಹ್ಮಣ್ಯ ಬಳಿ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್...
06-09-26 12:47 pm
ದಕ್ಷಿಣ ಕನ್ನಡ- ಚಿಕ್ಕಮಗಳೂರು ಸಂಪರ್ಕ ಕೊಂಡಿ ಚಾರ್ಮಾ...
05-09-26 04:58 pm
ಬೆಂಗಳೂರು-ಮಂಗಳೂರು ವಂದೇ ಭಾರತ್ಗೆ ಮತ್ತೊಂದು ಟೆಸ್ಟ...
05-09-26 11:59 am
06-09-26 10:28 pm
HK News Staffer
ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಆರೋಪ ; ಹೈಕೋರ್ಟಿಗೆ...
06-09-26 06:11 pm
ತಾನು ಐಎಎಸ್ ಅಧಿಕಾರಿ, ಪ್ರವಾಸೋದ್ಯಮ ಇಲಾಖೆಯ ಹೊಟೇಲ...
05-09-26 08:58 pm
ಶಿವಮೊಗ್ಗ ; ಕಾರಿನಲ್ಲಿ ಜಿಂಕೆ ಮಾಂಸ ಮಾರಾಟ ಯತ್ನ ;...
05-09-26 04:55 pm
ಬಡ್ಡಿ ಕಟ್ಟದಿದ್ದಕ್ಕೆ ಮಹಿಳೆಯನ್ನು ಅಪಹರಿಸಿ ಹಲ್ಲೆ...
05-09-26 03:08 pm