ಬಿಕರ್ನಕಟ್ಟೆಯಲ್ಲಿ ಡಿವೈಡರ್ ಗೆ ಡಿಕ್ಕಿಯಾಗಿ ಅಪಘಾತ ; ಗಂಭೀರ ಗಾಯಗೊಂಡಿದ್ದ ಯುವಕನ ಬ್ರೇನ್ ಡೆಡ್, ಕುಟುಂಬಸ್ಥರಿಂದ ಅಂಗಾಂಗ ದಾನ 

31-05-22 11:47 am       Mangalore Correspondent   ಕರಾವಳಿ

ನಗರದ ಬಿಕರ್ನಕಟ್ಟೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಕುಲಶೇಖರ ನಿವಾಸಿ ಧೀರಜ್ (29) ಮೆದುಳು ನಿಷ್ಕ್ರೀಯಗೊಂಡಿದ್ದು, ಮಗನ ಅಂಗಾಂಗ ದಾನ ಮಾಡಲು ಹೆತ್ತವರು ನಿರ್ಧರಿಸಿದ್ದಾರೆ.

ಮಂಗಳೂರು, ಮೇ 31 : ನಗರದ ಬಿಕರ್ನಕಟ್ಟೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಕುಲಶೇಖರ ನಿವಾಸಿ ಧೀರಜ್ (29) ಮೆದುಳು ನಿಷ್ಕ್ರೀಯಗೊಂಡಿದ್ದು, ಮಗನ ಅಂಗಾಂಗ ದಾನ ಮಾಡಲು ಹೆತ್ತವರು ನಿರ್ಧರಿಸಿದ್ದಾರೆ.

ಮೇ 29ರ ಭಾನುವಾರ ನಸುಕಿನ ಜಾವ ಬಿಕರ್ನಕಟ್ಟೆಯಲ್ಲಿ ಗಣೇಶ್ ಎಂಬವರು ಧೀರಜ್ ನನ್ನು ಕುಲಶೇಖರದ ಮನೆಗೆ ಬಿಡಲು ತೆರಳುತ್ತಿದ್ದಾಗ ಸ್ಕೂಟರ್ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿತ್ತು. ಸ್ಕೂಟರ್ ನಿಂದ ರಸ್ತೆಗೆ ಬಿದ್ದ ಗಣೇಶ್ ಹಾಗೂ ಧೀರಜ್ ಇಬ್ಬರೂ ಗಂಭೀರ ಗಾಯಗೊಂಡಿದ್ದರು.  ನಸುಕಿನ ಜಾವ 2:30ರ ವೇಳೆಗೆ ಸೆಂಟ್ರಲ್ ರೈಲ್ವೇ ಸ್ಟೇಷನ್ ಗೆ ಬಾಡಿಗೆಗೆಂದು ತೆರಳುತ್ತಿದ್ದ ಆಟೋ ಚಾಲಕ ಪ್ರವೀಣ್ ಕುಮಾರ್ ರಸ್ತೆಯಲ್ಲಿ ಬಿದ್ದಿದ್ದ ಯುವಕರನ್ನು ಗಮನಿಸಿ ಸಾರ್ವಜನಿಕರ ಸಹಾಯದಿಂದ ಗಾಯಾಳುಗಳನ್ನು ಎಜೆ ಆಸ್ಪತ್ರೆಗೆ ದಾಖಲಿಸಿದ್ದರು. 

ತಲೆಗೆ ತೀವ್ರ ಪೆಟ್ಟು ತಗಲಿದ್ದ ಧೀರಜ್ ಅವರ ಮೆದುಳು ನಿಷ್ಕ್ರೀಯವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದರಿಂದ ಅವರ ಕುಟುಂಬ ಅಂಗಾಂಗ ದಾನ ಮಾಡಲು ನಿರ್ಧರಿಸಿದೆ. ಚೆನ್ನೈ ಮೂಲದ ವೈದ್ಯರ ತಂಡ ಖಾಸಗಿ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿ ಧೀರಜ್ ಅವರ ಅಂಗಾಂಗಗಳನ್ನು ಕೊಂಡೊಯ್ಯಲಿದ್ದಾರೆ ಎಂದು ತಿಳಿದುಬಂದಿದೆ.

Dheeraj, who was injured in two-wheeler accident at Bikkarnakatte in Mangalore, was declared brain dead on Monday May 30 night. The deceased's heart, heart valves, liver and kidneys will be donated, said family and hospital sources.