ನಾಡಗೀತೆಗೆ ಅವಮಾನ ; ಶಿಕ್ಷಣ ಸಚಿವರ ವರದಿ ಆಧರಿಸಿ ಚಕ್ರತೀರ್ಥ ವಿರುದ್ಧ ಕ್ರಮ ; ಮುಖ್ಯಮಂತ್ರಿ ಬೊಮ್ಮಾಯಿ 

31-05-22 08:35 pm       Mangalore Correspondent   ಕರಾವಳಿ

ನಾಡಗೀತೆಗೆ ಅವಮಾನ, ಪಠ್ಯಕ್ರಮದ ಪರಿಷ್ಕರಣೆ ವೇಳೆ ಲೋಪ ಆಗಿರುವ ಆರೋಪದ ಕುರಿತು ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಿಗೆ ವರದಿ ನೀಡಲು ಸೂಚಿಸಿದ್ದೇನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಮಂಗಳೂರು, ಮೇ 31: ನಾಡಗೀತೆಗೆ ಅವಮಾನ, ಪಠ್ಯಕ್ರಮದ ಪರಿಷ್ಕರಣೆ ವೇಳೆ ಲೋಪ ಆಗಿರುವ ಆರೋಪದ ಕುರಿತು ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಿಗೆ ವರದಿ ನೀಡಲು ಸೂಚಿಸಿದ್ದೇನೆ. ವರದಿ ಆಧರಿಸಿ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂದು ನಿರ್ಧರಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಮಂಗಳವಾರ ಸಂಜೆ ಉಡುಪಿ ತೆರಳುವುದಕ್ಕಾಗಿ ಬಜ್ಪೆ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನೀಡುವ ವರದಿ ಆಧಾರದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ಬೆಂಗಳೂರಿಗೆ ತೆರಳಿದ ನಂತರ ಶಿಕ್ಷಣ ಸಚಿವರು ವರದಿ ಕೊಡಲಿದ್ದಾರೆ. ಅದರ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದವರು ಹೇಳಿದರು.

ಶಿಕ್ಷಣ ಸಚಿವರು ಈಗಾಗಲೇ ಆದಿಚುಂಚನಗಿರಿ ಮಠಾಧೀಶರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಎಲ್ಲ ಆಯಾಮಗಳ ಅಧ್ಯಯನ ನಡೆಸಿ, ಸತ್ಯಾಂಶ ಕುರಿತು ಮಾಹಿತಿ ನೀಡುವರು. ಮಂಗಳೂರಿನ ಮಳಲಿ ಮಸೀದಿ ವಿಚಾರ ನ್ಯಾಯಾಲಯದಲ್ಲಿದೆ. ಅಲ್ಲಿ ತೀರ್ಪು ಬರುವ ವರೆಗೆ ಯಾವುದೇ ಹೇಳಿಕೆ ನೀಡುವುದು ಸರಿಯಲ್ಲ ಎಂದರು.

CM Basavaraj Bommai in Mangalore, disrespect state anthem will take action against Rohith Chakratheertha. The letter to Chief Minister Basavaraj Bommai comes against the backdrop of a complaint lodged against textbook committee head Rohith Chakratheertha for allegedly distorting on Facebook the lyrics written by Kuvempu.