ಬ್ರೇಕಿಂಗ್ ನ್ಯೂಸ್
06-06-22 01:57 pm Mangalore Correspondent ಕರಾವಳಿ
ಮಂಗಳೂರು, ಜೂನ್ 6: ರಫ್ತು ಆಧರಿತ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಯ ಪ್ರತೀ ಉತ್ಪನ್ನದ ಮೇಲೆ 45 ಶೇಕಡಾ ತೆರಿಗೆಯನ್ನು ಕೇಂದ್ರ ಸರಕಾರ ಹಾಕಿದ್ದು, ಆಮೂಲಕ ಸರಕಾರಿ ಅಧೀನದ ಸಂಸ್ಥೆಯನ್ನು ನಷ್ಟಕ್ಕೆ ದೂಡಿ ಖಾಸಗೀಕರಣ ಮಾಡುವ ಹುನ್ನಾರ ಅಡಗಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಯು.ಟಿ. ಖಾದರ್ ಟೀಕಿಸಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಖಾದರ್, ಮಂಗಳೂರಿನ ಕೆಐಓಸಿಎಲ್ ಕಂಪನಿಯನ್ನು ಇಂದಿರಾ ಗಾಂಧಿ ಸರಕಾರ ಇದ್ದಾಗ 1980ರಲ್ಲಿ ಆರಂಭಿಸಲಾಗಿತ್ತು. ಮೊದಲಿಗೆ ಕುದುರೆಮುಖದಲ್ಲಿ ತನ್ನದೇ ಅದಿರು ಕೋರೆ ಇತ್ತು. ಆನಂತರ, ಕುದುರೆಮುಖದಲ್ಲಿ ಅದಿರು ತೆಗೆಯುವುದನ್ನು ನಿಲ್ಲಿಸಿದ ಬಳಿಕ ಬಳ್ಳಾರಿಯಿಂದ ಅದಿರು ಪಡೆದು ಕಬ್ಬಿಣದ ಪ್ಲೇಟ್ಸ್ ಗಳನ್ನು ಮಾಡಲಾಗುತ್ತಿತ್ತು. ಕಬ್ಬಿಣದ ಪ್ಲೇಟ್ಸ್ ಗಳಿಗೆ ಭಾರತದಲ್ಲಿ ಬೇಡಿಕೆ ಇಲ್ಲ. ಹಾಗಾಗಿ ರಫ್ತು ಉದ್ದೇಶದಿಂದ ಪ್ಲೇಟ್ಸ್ ಗಳನ್ನು ಉತ್ಪಾದಿಸಿ ವಿದೇಶಕ್ಕೆ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು.
ರಫ್ತು ಉದ್ದೇಶದಲ್ಲಿ ಉತ್ಪಾದನೆ ಮತ್ತು ಮಾರಾಟ ಇದ್ದುದರಿಂದ ಅದರ ಉತ್ಪನ್ನಕ್ಕೆ ಇದುವರೆಗೂ ತೆರಿಗೆ ವಿಧಿಸಿರಲಿಲ್ಲ. ಆದರೆ ಇದೀಗ ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಏಕಾಏಕಿ ಕೆಐಓಸಿಎಲ್ ಉತ್ಪನ್ನದ ಮೇಲೆ 45 ಶೇಕಡಾ ತೆರಿಗೆ ವಿಧಿಸಿದ್ದಾರೆ. 12 ಸಾವಿರಕ್ಕೆ ಮಾರಾಟವಾಗುವ ಪ್ಲೇಟ್ಸ್ ಮೇಲೆ 45 ಶೇಕಡಾ ಟ್ಯಾಕ್ಸ್ ಹಾಕಿದರೆ, ಈ ಕಂಪನಿ ಉಳಿಯಲು ಸಾಧ್ಯವೇ ಎಂದು ಪ್ರಶ್ನಿಸಿದ ಖಾದರ್, ಕೇವಲ ರಫ್ತು ಆಧರಿತ ಕಂಪನಿಯಾಗಿದ್ದರೂ, ಕೆಐಓಸಿಎಲ್ ಲಾಭದಲ್ಲಿ ನಡೆಯುತ್ತಿದೆ. ಪ್ರತಿ ವರ್ಷ 300 ಕೋಟಿ ಲಾಭದಲ್ಲಿ ನಡೆಯುತ್ತಿದೆ. ಕೇಂದ್ರ ಸರಕಾರದ ಸಂಸ್ಥೆಯಾಗಿರುವ ಕಾರಣ ಉತ್ಪನ್ನದ ಮೇಲೆ ತೆರಿಗೆ ಹಾಕಿರಲಿಲ್ಲ. ಈಗ ಪ್ರತೀ ಉತ್ಪನ್ನದ ಮೇಲೆ ತೆರಿಗೆ ಹೊರೆ ಹೊರಿಸಿ ಕಂಪನಿಯನ್ನು ನಷ್ಟಕ್ಕೆ ದೂಡುವ ಯತ್ನ ಮಾಡಲಾಗುತ್ತಿದೆ. ಆಮೂಲಕ ಅದನ್ನು ಕೂಡ ನಷ್ಟದಲ್ಲಿದೆಯೆಂದು ಹೇಳಿ ಖಾಸಗಿಯವರಿಗೆ ವಹಿಸುವ ಹುನ್ನಾರ ಇಲ್ಲಿದೆ ಎಂದು ಹೇಳಿದರು.

ಈ ಬಗ್ಗೆ ಇದರ ಜವಾಬ್ದಾರಿ ಹೊತ್ತಿರುವ ಸಂಸದ ನಳಿನ್ ಕುಮಾರ್, ಕೇಂದ್ರ ಹಣಕಾಸು ಸಚಿವರಲ್ಲಿ ಮಾತನಾಡಬೇಕು. ಕೂಡಲೇ ಈ ತೆರಿಗೆಯ ಹೊರೆಯನ್ನು ಇಲ್ಲದಂತೆ ಮಾಡಬೇಕು. ಇಲ್ಲದೇ ಇದ್ದರೆ, ಕಾಂಗ್ರೆಸ್ ಇದರ ವಿರುದ್ಧ ಉಗ್ರ ರೂಪದ ಪ್ರತಿಭಟನೆ ಮಾಡಬೇಕಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಲಾಭದಲ್ಲಿರುವ ಬ್ಯಾಂಕುಗಳನ್ನು ನಷ್ಟದಲ್ಲಿರುವ ಬ್ಯಾಂಕುಗಳ ಜೊತೆ ವಿಲೀನ ಮಾಡಿ, ಅದರ ಹೆಸರನ್ನೇ ಇಲ್ಲದಂತೆ ಮಾಡಿದೆ. ಬಿಎಸ್ಸೆನ್ನೆಲ್ ಸಂಸ್ಥೆಯನ್ನು ಕೂಡ ಇದೇ ರೀತಿ ನಷ್ಟಕ್ಕೆ ದೂಡಿ ಈಗ ಖಾಸಗೀಕರಣ ಮಾಡಲು ಹೊರಟಿದೆ. ಎನ್ಎಂಪಿಟಿ ಬಂದರನ್ನು ಅದಾನಿಗೆ ವಹಿಸಿ, ಅಲ್ಲಿ ಕೆಐಓಸಿಎಲ್ ಹಿಂದಿನಿಂದಲೂ ಇದ್ದ ತನ್ನ ಬರ್ತ್ ನಲ್ಲಿ ವ್ಯವಹಾರ ನಡೆಸುವುದಕ್ಕೂ ಅದಾನಿ ಅನುಮತಿ ಕೇಳುವ ಪರಿಸ್ಥಿತಿ ಬಂದಿದೆ. ಬಿಜೆಪಿಯವರು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕಟ್ಟಿ ಬೆಳೆಸಿಕೊಂಡು ಬಂದ ಕಂಪನಿಗಳನ್ನು ಮುಗಿಸಲು ನೋಡುತ್ತಿದ್ದಾರೆ. ಖಾಸಗಿಯವರಿಗೆ ಮಾರಾಟ ಮಾಡಲು ನೋಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಭವಿಷ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸಾಧ್ಯವಿದೆಯೇ, ಈ ಬಗ್ಗೆ ಮಾತುಕತೆಗಳು ಕೇಳಿಬರುತ್ತಿವೆ ಎಂಬ ಪ್ರಶ್ನೆಗೆ, ಮೈತ್ರಿಯೋ ಮತ್ತೊಂದು ಅದೆಲ್ಲವನ್ನೂ ನಮ್ಮ ಹೈಕಮಾಂಡ್ ಮಟ್ಟದ ನಾಯಕರು ನೋಡಿಕೊಳ್ಳುತ್ತಾರೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನ ಸರಾಗವಾಗಿ ಗೆದ್ದು 20 ಮತಗಳು ಉಳಿಯುತ್ತವೆ. ಹಾಗಾಗಿ ಅಭ್ಯರ್ಥಿ ಹಾಕಿದ್ದೇವೆ. ಒಟ್ಟ ಸಕ್ರಿಯ ಕಾರ್ಯಕರ್ತ ಅನ್ನುವ ಕಾರಣಕ್ಕೆ ಮನ್ಸೂರ್ ಅಲಿ ಖಾನ್ ಗೆ ಟಿಕೆಟ್ ಕೊಟ್ಟಿದ್ದೇವೆ. ಅಲ್ಪಸಂಖ್ಯಾತ ಅನ್ನುವ ಕಾರಣಕ್ಕೆ ಅಲ್ಲ. ಜೆಡಿಎಸ್ ನವರಿಗೆ ಅಲ್ಪಸಂಖ್ಯಾತರು, ನಿಷ್ಠಾವಂತರ ಬಗ್ಗೆ ಕಾಳಜಿ ಇದ್ದರೆ, ಫಾರೂಕ್, ಡ್ಯಾನಿಷ್ ಆಲಿ, ಸಿಎಂ ಇಬ್ರಾಹಿಂ ಯಾರಿಗಾದರೂ ಟಿಕೆಟ್ ಕೊಡಬಹುದಿತ್ತು. ನಮ್ಮಲ್ಲಿ ಬೆಂಬಲ ಕೇಳಬಹುದಿತ್ತು ಎಂದು ಜೆಡಿಎಸ್ ನಾಯಕರಿಗೆ ಟಾಂಗ್ ಇಟ್ಟರು.
BJP is planning to close KIOCL by looting money slams UT Khader in Mangalore after a press meet held at the congress office in Mangaluru.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm