ಬ್ರೇಕಿಂಗ್ ನ್ಯೂಸ್
10-06-22 09:51 pm Mangalore Correspondent ಕರಾವಳಿ
ಮಂಗಳೂರು, ಜೂನ್ 10: ಕೇರಳದ ಮಲಪ್ಪುರಂ ಜಿಲ್ಲೆಯ ನಿವಾಸಿ ಶಿಹಾಬ್ ಚೊಟ್ಟೂರು ಎಂಬ ಯುವಕ ಕಾಲ್ನಡಿಗೆಯಲ್ಲೇ ಹಜ್ ಯಾತ್ರೆ ಕೈಗೊಂಡಿದ್ದಾರೆ. ಮಲ್ಲಪುರಂ ನಗರದಿಂದ ಕಾಲ್ನಡಿಗೆಯಲ್ಲೇ ಹೊರಟಿದ್ದು, ತಲಪಾಡಿ ಮೂಲಕ ಕೇರಳದ ಗಡಿಭಾಗ ದಾಟಿ ಮಂಗಳೂರಿಗೆ ಆಗಮಿಸಿದ್ದರು. ಕೇರಳ ಗಡಿಭಾಗದಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ ಜನರು ಶಿಹಾಬ್ ಕಾಲ್ನಡಿಗೆ ಯಾತ್ರೆಗೆ ಶುಭ ಕೋರಿದ್ದಾರೆ.
ಶಿಹಾಬ್ 8640 ಕಿಮೀ ದೂರದ ಮೆಕ್ಕಾಕ್ಕೆ ಕಾಲ್ನಡಿಗೆಯಲ್ಲಿ ಹೊರಟಿದ್ದು, 9 ತಿಂಗಳ ಪರ್ಯಂತ ನಡೆದು ತಲುಪುವ ಗುರಿ ಇಟ್ಟುಕೊಂಡಿದ್ದಾರೆ. ತಲಪಾಡಿ ಗಡಿಭಾಗ ತಲುಪುವುದಕ್ಕೂ ಮೊದಲು ಹೊಸಂಗಡಿಯಲ್ಲಿ ಶಿಹಾಬ್ ಆರೋಗ್ಯ ತಪಾಸಣೆಯನ್ನೂ ನಡೆಸಲಾಗಿತ್ತು. ಹೊಸಂಗಡಿಯಿಂದ ತಲಪಾಡಿ ಗಡಿಯ ವರೆಗೆ ಅಭಿಮಾನಿಗಳು ನೆರೆದು ಜೊತೆಯಲ್ಲೇ ಕಾಲ್ನಡಿಗೆ ಬಂದಿದ್ದಾರೆ.
ತಲಪಾಡಿ ಬಳಿಕ ಕೋಟೆಕಾರಿನ ಮಸೀದಿಯಲ್ಲಿ ನಮಾಜ್ ಮಾಡಿ, ಅಲ್ಲಿಂದ ಸ್ಥಳೀಯರು ಬೀಳ್ಕೊಟ್ಟರು. ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟದ ಕೆ.ಅಶ್ರಫ್, ಅಬುಬಕ್ಕರ್ ಸಿದ್ದಿಕ್ ಮತ್ತಿತರರು ಸೇರಿ ತಲಪಾಡಿಯಲ್ಲಿ ಶಿಹಾಬ್ ಅವರನ್ನು ಸ್ವಾಗತಿಸಿದರು. ಸಾವಿರಾರು ಮಂದಿ ಕರ್ನಾಟಕದಿಂದ ಹಜ್ ಯಾತ್ರೆ ತೆರಳಲು ವಿಮಾನ ಟಿಕೆಟ್ ಇನ್ನಿತರ ವ್ಯವಸ್ಥೆ ಮಾಡುತ್ತಿರುವ ಸಂದರ್ಭದಲ್ಲೇ ಶಿಹಾಬ್ ಕಾಲ್ನಡಿಗೆಯಲ್ಲಿ ಹಜ್ ಯಾತ್ರೆ ಕೈಗೊಂಡಿದ್ದು ವಿಶೇಷ. ಕೇರಳ, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ವರೆಗೂ ಕರಾವಳಿಯಲ್ಲೇ ಸಾಗಿ, ಆನಂತರ ಪಾಕಿಸ್ಥಾನ, ಅಫ್ಘಾನಿಸ್ತಾನ ಮೂಲಕ ಸೌದಿ ಅರೇಬಿಯಾದ ಮೆಕ್ಕಾ ತೆರಳುವ ಯೋಜನೆ ಇದೆ ಎನ್ನಲಾಗುತ್ತಿದೆ.
Shihab Chottur from Malapurum who has undertaken Haj pilgrimage by walk was welcomed by the people of the community in a grand manner at Talapady on Thursday June 9. Shihab had planned to travel 8,640 kilometres by foot, to reach Mecca in nine months. Several people who gathered in Talapady, welcomed him. On Thursday afternoon, Shihab had a health check-up in Hosangadi. He took rest and then continued his journey.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
10-09-25 10:50 pm
Mangalore Correspondent
Yenepoya Hospital, Mangalore: ಯೆನಪೋಯ ಆಸ್ಪತ್ರೆ...
10-09-25 08:46 pm
ಕೊಲ್ಲೂರು ಮೂಕಾಂಬಿಕೆಗೆ ನಾಲ್ಕು ಕೋಟಿ ಮೌಲ್ಯದ ವಜ್ರ...
10-09-25 08:14 pm
Mangalore, Baikampady Fire, Aromazen: ಬೈಕಂಪಾಡ...
10-09-25 02:10 pm
ಬಂಟ್ವಾಳ : ತನ್ನ ಮೇಲೆ ಹಲ್ಲೆ, ಕೊಲೆಯತ್ನವೆಂದು ಸುಳ್...
10-09-25 11:02 am
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm