ತಾಯಿ ಹುಟ್ಟುಹಬ್ಬಕ್ಕೂ ಫೋನ್ ಮಾಡಲು ಬಿಡದ ಹಾಸ್ಟೆಲ್ ಸಿಬಂದಿ ; 9ನೇ ಕ್ಲಾಸ್ ವಿದ್ಯಾರ್ಥಿ ನೇಣಿಗೆ ಶರಣು ! 

12-06-22 06:25 pm       Mangalore Correspondent   ಕರಾವಳಿ

ತಾಯಿಗೆ ಕರೆ ಮಾಡಲು ಫೋನ್ ನೀಡಲಿಲ್ಲ ಎಂದು ನೊಂದ  ವಿದ್ಯಾರ್ಥಿಯೋರ್ವ ಹಾಸ್ಟೆಲಿನಲ್ಲಿಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಲಪಾಡಿ ಕೆ.ಸಿ.ರೋಡ್ ಬಳಿಯ ಶಾರದಾ ವಿದ್ಯಾನಿಕೇತನ ಸ್ಕೂಲ್ ಹಾಸ್ಟೆಲ್ ನಲ್ಲಿ ನಡೆದಿದೆ. 

ಉಳ್ಳಾಲ, ಜೂ.12 : ತಾಯಿಗೆ ಕರೆ ಮಾಡಲು ಫೋನ್ ನೀಡಲಿಲ್ಲ ಎಂದು ನೊಂದ  ವಿದ್ಯಾರ್ಥಿಯೋರ್ವ ಹಾಸ್ಟೆಲಿನಲ್ಲಿಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಲಪಾಡಿ ಕೆ.ಸಿ.ರೋಡ್ ಬಳಿಯ ಶಾರದಾ ವಿದ್ಯಾನಿಕೇತನ ಸ್ಕೂಲ್ ಹಾಸ್ಟೆಲ್ ನಲ್ಲಿ ನಡೆದಿದೆ. 

ತಲಪಾಡಿ ಕೆ.ಸಿ.ರೋಡಿನ ಶಾರದಾ ವಿದ್ಯಾನಿಕೇತನದ 9ನೇ ತರಗತಿ ವಿದ್ಯಾರ್ಥಿ ಪೂರ್ವಜ್(14) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಪೂರ್ವಜ್  ಬೆಂಗಳೂರು,‌ ಹೊಸಕೋಟೆ ಮೂಲದವನಾಗಿದ್ದು ಶನಿವಾರ ಅವರ ತಾಯಿಯ ಹುಟ್ಟುಹಬ್ಬ ಇತ್ತು. ತಾಯಿಗೆ ಶುಭ ಹಾರೈಸಲು ಹಾಸ್ಟೆಲ್ ಸಿಬ್ಬಂದಿಯಲ್ಲಿ ಫೋನ್ ಕೇಳಿದ್ದ. ಈ ವೇಳೆ ಸಿಬ್ಬಂದಿ ಫೋನ್ ಕರೆ ಮಾಡಲು ಅವಕಾಶ ನೀಡಿರಲಿಲ್ಲ. ಇದರಿಂದ ನೊಂದ ವಿದ್ಯಾರ್ಥಿ ಪೂರ್ವಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ullal 14 year old boy commits suicide after hostel rejects phone call to parents in Mangalore. The deceased has been identified as Poorvaj. The incident took place at VidyaNiketan School. The boy wanted to wish his mother for her birthday but as the school refused to make calls he committed suicide.