ತಂದೆ-ತಾಯಿ ಜಗಳ, ಮನೆಯಲ್ಲಿ ಆರ್ಥಿಕ ಸಂಕಷ್ಟ ; ಕಾಲೇಜು ಓದುತ್ತಿದ್ದ ಮಗ ನೇಣಿಗೆ ಶರಣು  

17-06-22 02:12 pm       Mangalore Correspondent   ಕರಾವಳಿ

ಬಿಬಿಎ ಪದವಿ ಕಲಿಯುತ್ತಿದ್ದ ಹುಡುಗನೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತೊಕ್ಕೊಟ್ಟು ಸಮೀಪದ ಕುಂಪಲದಲ್ಲಿ ನಡೆದಿದೆ.

ಮಂಗಳೂರು, ಜೂನ್ 17: ಬಿಬಿಎ ಪದವಿ ಕಲಿಯುತ್ತಿದ್ದ ಹುಡುಗನೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತೊಕ್ಕೊಟ್ಟು ಸಮೀಪದ ಕುಂಪಲದಲ್ಲಿ ನಡೆದಿದೆ.

ಹರ್ದೀಪ್ (19) ಮೃತ ಯುವಕ. ಮನೆಯಲ್ಲಿ ತಾಯಿ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದುದನ್ನು ನೋಡಲಾಗದೆ ಸಾವಿಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ. ಕುಂಪಲದ ಕರ್ನಾಟಕ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ ಅಪಾರ್ಟ್ಮೆಂಟ್ ಒಂದರಲ್ಲಿ ಬಾಡಿಗೆಗಿದ್ದ ಮನೆಯಲ್ಲಿ ಘಟನೆ ನಡೆದಿದೆ.

ಈತನ ತಾಯಿ ರೇಖಾ ಅವರು ಮಸಾಲಾ ಪೌಡರ್ ಮಾರಾಟ ಮಾಡುತ್ತಿದ್ದು, ಅಲ್ಲಿಯೇ ಪಕ್ಕದಲ್ಲಿ ಅಂಗಡಿ ಹೊಂದಿದ್ದರು. ಆದರೆ ವ್ಯವಹಾರದಲ್ಲಿ ನಷ್ಟವಾಗಿದ್ದರಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಎರಡು ವರ್ಷದ ಹಿಂದೆ ಗಂಡ- ಹೆಂಡತಿ ಮಧ್ಯೆ ಜಗಳವಾಗಿದ್ದರಿಂದ ಈಕೆಯ ಗಂಡ ಬೇರೆಯೇ ಉಳಿದುಕೊಂಡಿದ್ದರು. ಇದರಿಂದ ಮನೆಯಲ್ಲಿ ಬಡತನ, ಜಗಳದಿಂದಾಗಿ ಬೇಸತ್ತಿದ್ದ ಯುವಕ ಜಂಜಾಟವೇ ಬೇಡ ಎಂದು ಬದುಕನ್ನೇ ಮುಗಿಸಿದ್ದಾನೆ ಎನ್ನುವ ಮಾಹಿತಿ ಪೊಲೀಸರಿಂದ ಲಭಿಸಿದೆ.

ಮಂಗಳೂರಿನ ಶ್ರೀದೇವಿ ಕಾಲೇಜಿನಲ್ಲಿ ಬಿಬಿಎ ಪದವಿ ಓದುತ್ತಿದ್ದರೂ, ಬುಧವಾರ ಹರ್ದೀಪ್ ಕಾಲೇಜಿಗೆ ಹೋಗಿರಲಿಲ್ಲ. ಇನ್ನೊಬ್ಬ ತಂಗಿ ಕಾಲೇಜಿಗೆ ಹೋಗಿದ್ದರು. ತಾಯಿ ಅಂಗಡಿಗೆ ಸಾಮಾನು ತರಲೆಂದು ಹೋಗಿದ್ದಾಗ ಹುಡುಗ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಮೊದಲೇ ಸಂಕಷ್ಟದಲ್ಲಿದ್ದ ತಾಯಿ ಇದ್ದೊಬ್ಬ ಮಗನನ್ನು ಕಳಕೊಂಡು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾಳೆ. ತಂದೆ-ತಾಯಿ ಜಗಳದಲ್ಲಿ ಕೂಸು ಬಡವಾಯ್ತು ಅನ್ನುವಂತಾಗಿದೆ ಇವರ ಕತೆ. ಇವರು ಪುತ್ತೂರು ಮೂಲದವರಾಗಿದ್ದು ಕುಂಪಲದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.

Youth died by suicide at his residence at Bagambila on Thursday June 16 evening.Hardeep (19) is the youth who ended his life. He was studying in second year BBA in a private college in the city. Though he was rushed to a private hospital nearby, the doctors declared him brought dead.It is suspected that the deceased was facing financial difficulties which led him to take this extreme step.