ಬ್ರೇಕಿಂಗ್ ನ್ಯೂಸ್
19-06-22 05:52 pm Mangalore Correspondent ಕರಾವಳಿ
ಮಂಗಳೂರು, ಜೂನ್ 19: ಇಂಡಿಗೋ ವಿಮಾನ ಕಂಪನಿಯು ಮುಂಬೈ- ಮಂಗಳೂರು ಮಧ್ಯೆ ಪ್ರತಿ ದಿನ ವಿಮಾನ ಸಂಚಾರಕ್ಕೆ ಮುಂದಾಗಿದೆ. ಇಂಡಿಗೋ ಸಂಸ್ಥೆಯ 6ಇ-5236 ಮತ್ತು 6ಇ -5237 ಸಂಖ್ಯೆಯ ವಿಮಾನಗಳು ಮುಂಬೈ- ಮುಂಗಳೂರು ಮಧ್ಯೆ ದಿನಾ ಬೆಳಗ್ಗೆ ಸಂಚಾರ ನಡೆಸಲಿವೆ.
6ಇ-5236 ಸಂಖ್ಯೆಯ ವಿಮಾನ ಬೆಳಗ್ಗೆ 8.50ಕ್ಕೆ ಮುಂಬೈನಿಂದ ಹೊರಡಲಿದ್ದು, 10.20ಕ್ಕೆ ಮಂಗಳೂರು ತಲುಪಲಿದೆ. ಆನಂತರ, 6ಇ-5237 ಸಂಖ್ಯೆಯ ವಿಮಾನ ಬೆಳಗ್ಗೆ 11ಕ್ಕೆ ಮಂಗಳೂರಿನಿಂದ ಹೊರಟು ಮಧ್ಯಾಹ್ನ 12.40ಕ್ಕೆ ಮುಂಬೈ ತಲುಪಲಿದೆ. ಇದಕ್ಕಾಗಿ ಇಂಡಿಗೋ ಸಂಸ್ಥೆಯು ಏರ್ ಬಸ್ 320 ಮಾದರಿಯ ವಿಮಾನಗಳನ್ನು ಸಂಚಾರಕ್ಕೆ ಇಳಿಸಿದೆ.

ಜೂನ್ 17ರಂದು ಮೊದಲ ಬಾರಿಗೆ ವಿಮಾನ ಪ್ರಾಯೋಗಿಕ ಸಂಚಾರ ನಡೆಸಿದ್ದು, ಮೊದಲ ಸಂಚಾರದಲ್ಲಿ ಸಿಬಂದಿ ಸಹಿತ 88 ಮಂದಿ ಮಂಗಳೂರು ತಲುಪಿದ್ದಾರೆ. ಆನಂತರ 99 ಮಂದಿ ಮಂಗಳೂರಿನಿಂದ ಮುಂಬೈಗೆ ಸಂಚರಿಸಿದ್ದಾರೆ. ರೆಗ್ಯುಲರ್ ಆಪರೇಶನ್ ಜೂನ್ 19ರ ಭಾನುವಾರದಿಂದ ಆರಂಭಗೊಂಡಿದ್ದು, ಮುಂಬೈನಿಂದ ಆಗಮಿಸಿದ ವಿಮಾನದಲ್ಲಿ 55 ಮಂದಿ ಇದ್ದರು. ಮಂಗಳೂರಿನಿಂದ ಮುಂಬೈಗೆ ಹೊರಟ ವಿಮಾನದಲ್ಲಿ ಸಿಬಂದಿ ಸಹಿತ 141 ಮಂದಿ ತೆರಳಿದ್ದಾರೆ.

ಇತ್ತೀಚೆಗೆ ಇಂಡಿಯೋ ಸಂಸ್ಥೆಯು ಮಧ್ಯಾಹ್ನ ನಂತರ ಮಂಗಳೂರಿನಿಂದ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿತ್ತು. ಸದ್ಯಕ್ಕೆ ಮಂಗಳೂರಿನಿಂದ ವಾರಕ್ಕೊಂದರಂತೆ ವಿವಿಧ ನಗರಗಳಿಗೆ 182 ದೇಶೀಯ ವಿಮಾನಗಳು ಸಂಚರಿಸುತ್ತಿದ್ದು, ಈ ಪೈಕಿ 85 ವಿಮಾನಗಳು ಇಂಡಿಗೋ ಸಂಸ್ಥೆಯದ್ದು. ಮಂಗಳೂರಿನಿಂದ ಬೆಂಗಳೂರಿಗೆ 28, ಪುಣೆಯ ಮೂಲದ ದೆಹಲಿಗೆ ನಾಲ್ಕು, ಚೆನ್ನೈಗೆ ಏಳು, ಮುಂಬೈಗೆ 21, ಹೈದರಾಬಾದ್ 14, ಬೆಂಗಳೂರು ಮೂಲಕ ಕೊಲ್ಕತ್ತಾಗೆ ಏಳು ಮತ್ತು ಹುಬ್ಬಳ್ಳಿಗೆ ನಾಲ್ಕು ವಿಮಾನಗಳು ಸಂಚರಿಸುತ್ತವೆ. ಏರ್ ಇಂಡಿಯಾದಿಂದ ಮಂಗಳೂರಿನಿಂದ ಮುಂಬೈಗೆ ಏಳು, ಸ್ಪೈಸ್ ಜೆಟ್ ನಿಂದ ಬೆಂಗಳೂರಿಗೆ 6, ಗೋ ಫಸ್ಟ್ ಕಂಪನಿಯಿಂದ ಮುಂಬೈಗೆ ಏಳು, ಏರ್ ಇಂಡಿಯಾ ಎಕ್ಸ್ ಪ್ರೆಸ್ ಮುಂಬೈಗೆ ಮೂರು ವಿಮಾನಗಳು ಸಂಚರಿಸುತ್ತವೆ.
ಇಂಡಿಗೋ ಸಂಸ್ಥೆಯಿಂದ ಹುಬ್ಬಳ್ಳಿ- ಮಂಗಳೂರು ಮಧ್ಯೆ ವಾರಕ್ಕೆ ನಾಲ್ಕು ವಿಮಾನ ಸಂಚರಿಸುತ್ತಿದ್ದು ಭಾನುವಾರ, ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಚಾರ ಇರುತ್ತದೆ.
IndiGo commenced the regular operation of its new flight 6E 5236/6E 5237 on the Mumbai-Mangaluru-Mumbai sector on Sunday, June 19. The trial operations had begun on June 17.Flight 6E 5236 leaves Mumbai at 8.50 AM and reaches Mangaluru at 10.20 AM and flight 6E 5237 leaves Mangaluru at 11 AM to reach Mumbai at 12.40 PM. IndiGo is using Airbus A320 type of aircraft for this new flight.
17-11-25 07:25 pm
Bangalore Correspondent
ಖರ್ಗೆ ಕೋಟೆಯಲ್ಲಿ ಆರೆಸ್ಸೆಸ್ ಸಂಚಲನ ; ಒಂದೂವರೆ ಕಿಮ...
16-11-25 09:15 pm
ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಕೊ...
13-11-25 08:33 pm
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
17-11-25 10:58 pm
HK News Desk
Delhi Blast Probe Widens: ದೆಹಲಿ ಸ್ಫೋಟ ; ಹರ್ಯಾ...
17-11-25 07:33 pm
ಉಮ್ರಾ ಯಾತ್ರೆ ತೆರಳಿದ್ದ ಹೈದ್ರಾಬಾದ್ ಮೂಲದ 45 ಯಾತ್...
17-11-25 06:13 pm
ರಾಜ್ಯದಲ್ಲಿ ಸಂಪುಟ ಸರ್ಜರಿಗೆ ಗ್ರೀನ್ ಸಿಗ್ನಲ್ ; ಸಿ...
15-11-25 11:12 pm
ದೆಹಲಿ ಕಾರು ಸ್ಫೋಟ ಪ್ರಕರಣ ; ಪಶ್ಚಿಮ ಬಂಗಾಳದಲ್ಲಿ ಮ...
15-11-25 07:09 pm
18-11-25 10:18 pm
Mangaluru Staff
UT Khader, Ullal, Mangalore Dc, Ashwini: ತನ್ನ...
18-11-25 07:03 pm
Mangalore case, Police, Inspector Balakrishna...
18-11-25 11:27 am
ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ...
17-11-25 06:16 pm
ದೇರಳಕಟ್ಟೆ ಕಾಲೇಜಿನ ಕೇರಳ ವಿದ್ಯಾರ್ಥಿ ನಾಪತ್ತೆ ; ಗ...
16-11-25 10:48 pm
18-11-25 09:09 pm
Mangaluru Staff
ರಾಜ್ಯದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ವಂಚನೆ ; ಸ...
18-11-25 11:18 am
ದುಬಾರಿ ಪಾರ್ಸೆಲ್ ಇದೆ, ಕಸ್ಟಮ್ಸ್ ಸುಂಕ ಕಟ್ಟಲು ಹೇಳ...
17-11-25 12:54 pm
ಬೆಳಗಾವಿಯಲ್ಲಿ ಕುಳಿತು ಅಮೆರಿಕನ್ನರಿಗೆ ಗಾಳ ; ಆನ್ಲೈ...
14-11-25 05:32 pm
Ullal News, Animal Attack, Crime, Kumpala: ಕಣ...
14-11-25 11:16 am