ತೀವ್ರ ಜ್ವರದಿಂದ ಬಳಲುತ್ತಿದ್ದ ಆರು ವರ್ಷದ ಬಾಲಕಿ ಸಾವು ! 

23-06-22 01:14 pm       Mangalore Correspondent   ಕರಾವಳಿ

ಜ್ವರದಿಂದ ಬಳಲುತ್ತಿದ್ದ ಆರು ವರ್ಷದ ಬಾಲಕಿ ಚಿಕಿತ್ಸೆ ಫಲಿಸದೆ ಸಾವನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ನಡೆದಿದೆ.

ಬಂಟ್ವಾಳ, ಜೂನ್ 23: ಜ್ವರದಿಂದ ಬಳಲುತ್ತಿದ್ದ ಆರು ವರ್ಷದ ಬಾಲಕಿ ಚಿಕಿತ್ಸೆ ಫಲಿಸದೆ ಸಾವನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ನಡೆದಿದೆ.

ಕಲ್ಲಡ್ಕ ಬಳಿಯ ಹನುಮಾನ್ ನಗರ ನಿವಾಸಿ ರವಿ ಆಚಾರ್ಯ ಎಂಬವರ ಪುತ್ರಿ ಆರಾಧ್ಯ ಆಚಾರ್ಯ(6) ಮೃತ ಬಾಲಕಿ. ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಒಂದನೇ ತರಗತಿಯಲ್ಲಿ ಕಲಿಯುತ್ತಿದ್ದಳು. ಬಾಲಕಿ ಸಾವಿನ ಹಿನ್ನೆಲೆ ಶಾಲೆಗೆ ರಜೆ ಕೊಡಲಾಗಿದೆ.

ಕಳೆದ ಒಂದು ವಾರದಿಂದ ಬಾಲಕಿ ಜ್ವರದಿಂದ ಬಳಲುತ್ತಿದ್ದು ಸ್ಥಳೀಯ ವೈದ್ಯರಲ್ಲಿ ಚಿಕಿತ್ಸೆ ನೀಡಲಾಗಿತ್ತು.‌ ಆದರೆ ಎರಡು ದಿನಗಳ ಹಿಂದೆ ಜ್ವರ ಏಕಾಏಕಿ ಉಲ್ಬಣಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಜೂನ್ 22 ರಂದು ಮೃತಪಟ್ಟಿದ್ದಾಳೆ. ಯಾವ ರೀತಿಯ ಜ್ವರ ಇತ್ತು. ಕೇವಲ ಜ್ವರದ ಕಾರಣಕ್ಕೆ ಸಾವು ಸಂಭವಿಸಿದೆಯೇ ಬೇರೆ ಏನಾದರೂ ದೈಹಿಕ ತೊಂದರೆ ಇತ್ತೇ ಎನ್ನುವುದು ತಿಳಿದಿಲ್ಲ.

A six-year-old girl who was suffering from high fever died failing to respond to the treatment. The deceased is identified as Aradhya Acharya, daughter of Ravi Acharya, a resident of Hanuman Nagar here. A local medical practitioner was treating the child for the past one week but her fever increased and she passed away on Thursday, June 22.