ಪತ್ನಿ, ಮಕ್ಕಳನ್ನು ಬಾವಿಗೆ ತಳ್ಳಿ ಆತ್ಮಹತ್ಯೆ ಯತ್ನ ; ಮೂವರು ಮಕ್ಕಳು ದುರಂತ ಸಾವು ! 

23-06-22 08:57 pm       Mangalore Correspondent   ಕರಾವಳಿ

ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಕೊಂದ ಘಟನೆ ಮಂಗಳೂರು ತಾಲೂಕಿನ ಕಿನ್ನಿಗೋಳಿಯಲ್ಲಿ ನಡೆದಿದೆ. ಪತ್ನಿ, ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದು ಘಟನೆಯಲ್ಲಿ ಮೂವರು ಮಕ್ಕಳು ದುರಂತ ಸಾವು ಕಂಡಿದ್ದಾರೆ. 

ಮಂಗಳೂರು, ಜೂನ್ 23: ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಕೊಂದ ಘಟನೆ ಮಂಗಳೂರು ತಾಲೂಕಿನ ಕಿನ್ನಿಗೋಳಿಯಲ್ಲಿ ನಡೆದಿದೆ. ಪತ್ನಿ, ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದು ಘಟನೆಯಲ್ಲಿ ಮೂವರು ಮಕ್ಕಳು ದುರಂತ ಸಾವು ಕಂಡಿದ್ದಾರೆ. 

ಮಂಗಳೂರು ತಾಲೂಕಿನ ಕಿನ್ನಿಗೋಳಿ ಬಳಿಯ ಪದ್ಮನೂರು ಎಂಬಲ್ಲಿ ಘಟನೆ‌ ನಡೆದಿದ್ದು ಮೃತ ಮಕ್ಕಳನ್ನು ರಶ್ಮಿತಾ (14), ಉದಯ್ (11), ದಕ್ಷಿತ್ (04) ಎಂದು ಗುರುತಿಸಲಾಗಿದೆ. ವಿಜೇಶ್ ಶೆಟ್ಟಿಗಾರ್ ಎಂಬಾತ ಹೀನಾಯ ಕೃತ್ಯ ನಡೆಸಿದ್ದು ಆತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. 

ಆರ್ಥಿಕ ಸಂಕಷ್ಟದಿಂದ ಧೃತಿಗೆಟ್ಟಿದ್ದ ವಿಜೇಶ್ ಶೆಟ್ಟಿಗಾರ್, ಪತ್ನಿ ಲಕ್ಷ್ಮಿ ಮತ್ತು ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ. ಆದರೆ ಅಷ್ಟರಲ್ಲಿ ಸ್ಥಳೀಯರು ಗಮನಿಸಿದ್ದು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಅದಾಗಲೇ ಬಾವಿಗೆ ಬಿದ್ದಿದ್ದ ಮೂವರು ಮಕ್ಕಳು ನೀರಿನಲ್ಲಿ ಮುಳುಗಿ ದುರಂತ ಸಾವು ಕಂಡಿದ್ದಾರೆ. ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.

Man kills three children by pushing them into the well at Kinnigoli due to financial crises in Mangalore. He also pushed to wife to well and tried to kill himself but neighbours who saw it came to their rescue. But the three children breathed their last. A case has been registered at Mulki police station.