ಎಡಪಂಥೀಯರ ಮುತ್ತಿಗೆ ಬೆದರಿಕೆ ಹಿನ್ನೆಲೆ ; ರೋಹಿತ್ ಚಕ್ರತೀರ್ಥ ನಾಗರಿಕ ಸನ್ಮಾನ ಕಾರ್ಯಕ್ರಮ ರದ್ದು ! 

25-06-22 10:56 am       Mangalore Correspondent   ಕರಾವಳಿ

ನಗರದಲ್ಲಿ ಆಯೋಜಿಸಿದ್ದ ರೋಹಿತ್ ಚಕ್ರತೀರ್ಥ ನಾಗರಿಕ ಸನ್ಮಾನ ಕಾರ್ಯಕ್ರಮವನ್ನು ದಿಢೀರ್ ರದ್ದು ಪಡಿಸಲಾಗಿದೆ.

ಮಂಗಳೂರು, ಜೂನ್ 25 : ನಗರದಲ್ಲಿ ಆಯೋಜಿಸಿದ್ದ ರೋಹಿತ್ ಚಕ್ರತೀರ್ಥ ನಾಗರಿಕ ಸನ್ಮಾನ ಕಾರ್ಯಕ್ರಮವನ್ನು ದಿಢೀರ್ ರದ್ದು ಪಡಿಸಲಾಗಿದೆ. ಎಡಪಂಥೀಯ, ಕಾಂಗ್ರೆಸ್, ಇನ್ನಿತರ ಸಂಘಟನೆಗಳ ಕಾರ್ಯಕರ್ತರು ಮುತ್ತಿಗೆ ಹಾಕುವ ಬೆದರಿಕೆ ಒಡ್ಡಿದ್ದರಿಂದ ವಿವಾದಕ್ಕೆ ಆಸ್ಪದ ನೀಡುವುದು ಬೇಡವೆಂದು ಆಯೋಜಕರು ಕಾರ್ಯಕ್ರಮವನ್ನೆ ರದ್ದು ಪಡಿಸಿದ್ದಾರೆ.‌

ಇಂದು (ಜೂನ್ 25) ಸಂಜೆ 4.30ಕ್ಕೆ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಸೇವಾಂಜಲಿ ಟ್ರಸ್ಟ್ ವತಿಯಿಂದ ಪಠ್ಯಪುಸ್ತಕ ರಚನಾ ಸಮಿತಿಯ ಮಾಜಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರಿಗೆ ನಾಗರಿಕ ಸನ್ಮಾನ ಏರ್ಪಡಿಸುವ ಕಾರ್ಯಕ್ರಮ ಆಯೋಜಿಸಿತ್ತು.‌ ಆದರೆ ಪಠ್ಯಪುಸ್ತಕದಲ್ಲಿ ನಾರಾಯ ಗುರು, ಕುವೆಂಪು, ಅಂಬೇಡ್ಕರ್ ಗೆ ಅವಮಾನ ಮಾಡಿದ್ದಾರೆಂದು ಆರೋಪ ವ್ಯಕ್ತವಾಗಿದ್ದರಿಂದ ಕರಾವಳಿಯಲ್ಲಿ ಕಾಂಗ್ರೆಸ್ ಸೇರಿದಂತೆ ಎಡಪಂಥೀಯ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು.‌ 

ಇದೀಗ ಮಂಗಳೂರಿನಲ್ಲಿ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ನಾಗರಿಕ ಸನ್ಮಾನ ಏರ್ಪಡಿಸಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿವಿಯ ಕುಲಪತಿ ಪಿ.ಎಸ್ ಯಡಪಡಿತ್ತಾಯ ವಹಿಸಿಕೊಂಡಿದ್ದಕ್ಕೆ ವಿರೋಧ ವ್ಯಕ್ತವಾಗಿತ್ತು.‌ ಸಮಾನ ಮನಸ್ಕ ಸಂಘಟನೆಗಳ ನಾಯಕರು ಶುಕ್ರವಾರ ಸಂಜೆ ತುರ್ತು ಸಭೆ ನಡೆಸಿ, ನಾಗರಿಕ ಸನ್ಮಾನ ಕೈಬಿಡಬೇಕು, ಇಲ್ಲದೇ ಇದ್ದಲ್ಲಿ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕುವ ಬೆದರಿಕೆಯನ್ನು ಒಡ್ಡಿದ್ದವು. 

ಪಠ್ಯಪುಸ್ತಕದಲ್ಲಿ ದಾರ್ಶನಿಕರಿಗೆ ಅವಮಾನ ಮಾಡಿದ ವ್ಯಕ್ತಿಗೆ ಸನ್ಮಾನಿಸುವುದು ಮಂಗಳೂರಿನ ಜನ ತಲೆತಗ್ಗಿಸುವ ವಿಚಾರ ಎಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಇಂದು ಸಂಜೆ ಪ್ರತಿಭಟನಾ ಮೆರವಣಿಗೆ ನಡೆಸಲು ಸಿದ್ಧತೆ ನಡೆಸಿದ್ದವು.‌ ಇದರ ಬೆನ್ನಲ್ಲೇ ವಿವಾದಿತ ಕಾರ್ಯಕ್ರಮವನ್ನೇ ಆಯೋಜಕರು ರದ್ದುಪಡಿಸಿದ್ದು ಶಾಂತಿ ಸುವ್ಯವಸ್ಥೆ ಭಂಗ ಪಡಿಸುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ‌

ಚಕ್ರತೀರ್ಥಗೆ ನಾಗರಿಕ ಸನ್ಮಾನ ; ಹಿಂದುಳಿದ ವರ್ಗಗಳ ಆಯೋಗದ ನಿರ್ದೇಶಕ, ಸಂಸದ ನಳಿನ್ ಆಪ್ತ ಕೆ.ಟಿ.ಸುವರ್ಣ ವಿರೋಧ, ಬಿಲ್ಲವ ವೇದಿಕೆಯಡಿ ಪ್ರತಿಭಟನೆ ಪೋಸ್ಟ್ !

ರೋಹಿತ್ ಚಕ್ರತೀರ್ಥ "ನಾಗರಿಕ ಸನ್ಮಾನ" ಕೈಬಿಡಿ ; ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ದೇಶಪ್ರೇಮಿ ಸಂಘಟನೆಗಳ ಒಕ್ಕೂಟ ನಿರ್ಧಾರ 

Rohith Chakrathirtha to get civic reception in Mangalore cancelled after strong opposition. Deshapremi Sanghatanegala Okkoota (DSO) has decided to hold a protest rally against the felicitation programme organised for Textbooks Review Committee former chairman Rohith Chakrathirtha on Saturday. Sevanjali Charitable Trust had organised a civic reception for Chakrathirtha at Bhuvanendra Hall of Canara High School in Dongarakeri, at 5pm on Saturday. Mangalore University vice-chancellor P S Yadapadithaya was to preside. Deshapremi Sanghatanegala Okkoota (DSO) has decided to hold a protest rally against the felicitation programme organised for Textbooks Review Committee former chairman Rohith Chakrathirtha on Saturday. Sevanjali Charitable Trust has organised a civic reception for Chakrathirtha at Bhuvanendra Hall of Canara High School in Dongarakeri, at 5pm on Saturday. Mangalore University vice-chancellor P S Yadapadithaya will preside.