ಬ್ರೇಕಿಂಗ್ ನ್ಯೂಸ್
29-06-22 05:26 pm Mangalore Correspondent ಕರಾವಳಿ
ಮಂಗಳೂರು, ಜೂನ್ 29 : ಕೊಲೆಗೆ ಸ್ಕೆಚ್ ಹಾಕಿದ್ದಾರೆಂದು ಸುದ್ದಿಯಾಗಿದ್ದ ಬೆಂಗಳೂರಿನ ಉದ್ಯಮಿ, ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸೋದರ ಗುಣರಂಜನ್ ಶೆಟ್ಟಿ ಅವರನ್ನು ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಕರೆಸಿ ವಿಚಾರಣೆ ನಡೆಸಲಾಗಿದೆ.
ಕೊಲೆಗೆ ಸ್ಕೆಚ್ ವಿಚಾರದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರಿಗೆ ಗೃಹ ಇಲಾಖೆಯಿಂದ ಹೊಣೆ ನೀಡಲಾಗಿದೆ. ಹೀಗಾಗಿ ಮಂಗಳೂರು ಕಮಿಷನರ್ ಕಚೇರಿಗೆ ಗುಣರಂಜನ್ ಶೆಟ್ಟಿ ಅವರನ್ನು ಕರೆಸಿ ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಮಾಹಿತಿ ಸಂಗ್ರಹಿಸಿದ್ದಾರೆ.
ವಿಚಾರಣೆ ಬಳಿಕ ಮಾಧ್ಯಮಕ್ಕೆ ಮಾಹಿತಿ ನೀಡಿದ ಗುಣರಂಜನ್ ಶೆಟ್ಟಿ, ನನಗೆ ಬಂದಿರುವ ರಿಲೈಬಲ್ ಸೋರ್ಸ್ ಪ್ರಕಾರ ಗೃಹ ಇಲಾಖೆಗೆ ಮನವಿಯನ್ನು ಕೊಟ್ಟಿದ್ದೆ. ಸಾರ್ವಜನಿಕ ಜೀವನದಲ್ಲಿ ಇರೋದ್ರಿಂದ ಹಲವಾರು ಜನರ ಜೊತೆ ವ್ಯವಹಾರ ಇದೆ, ನಿಷ್ಠುರ ಇದ್ದವರು ಕೂಡ ಇದ್ದಾರೆ. ಮಂಗಳೂರು ಪೊಲೀಸರು ಮಾಹಿತಿ ಸಂಗ್ರಹಕ್ಕೆ ಬರಹೇಳಿದ್ದರು. ಪೊಲೀಸರಿಗೆ, ನನಗೇನು ಗೊತ್ತಿದೆ ಆ ಮಾಹಿತಿಗಳನ್ನು ಕೊಟ್ಟಿದ್ದೇನೆ ಎಂದು ಹೇಳಿದರು.
ಇದರ ಹಿಂದೆ ಇಂಥದ್ದೇ ವ್ಯಕ್ತಿ ಇದ್ದಾರೆ ಎಂದು ಖಚಿತವಾಗಿ ಹೇಳಕ್ಕಾಗುವುದಿಲ್ಲ. ಪೊಲೀಸರು ತನಿಖೆ ಆರಂಭಿಸಿದ್ದು ಕೆಲವರನ್ನು ಖಚಿತವಾಗಿ ವಿಚಾರಣೆ ಮಾಡುತ್ತಾರೆ. ನನಗೆ ಪೊಲೀಸ್ ಭದ್ರತೆ ಬೇಕೆಂದು ಕೇಳಿಕೊಂಡಿಲ್ಲ. ಪೊಲೀಸರ ಭದ್ರತೆ ಬೇಕೆಂದಿದ್ದರೆ ಅವರೇ ತೀರ್ಮಾನ ತೆಗೆದುಕೊಳ್ಳಬೇಕು. ಕರ್ನಾಟಕ ಪೊಲೀಸರ ಬಗ್ಗೆ ನಂಬಿಕೆ ಇದೆ, ಸೀರಿಯಸ್ ಇದ್ದಾರೆ. ವಿಚಾರಣೆ ಮಾಡಲಿದ್ದು ಏನು ಸತ್ಯ ಇದೆಯೋ ಅದನ್ನು ಹೊರ ತರುತ್ತಾರೆ ಎಂದು ಹೇಳಿದರು.
ನಿಮಗೇನಾದರೂ ಬೆದರಿಕೆ ಇತ್ತೇ, ಯಾರು ಇದರ ಹಿಂದಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಗುಣರಂಜನ್ ಶೆಟ್ಟಿ, ರಿಲೈಬಲ್ ಸೋರ್ಸ್ ಎಂದು ಯಾಕೆ ಹೇಳಿದ್ದಂದ್ರೆ ನಿಶ್ಚಿತವಾಗಿ ಹೆಸರನ್ನು ಹೇಳಬಾರದು ಅಂತ. ಯಾರು ಶಾಮೀಲಾತಿ ಇದ್ದಾರೋ ಪೊಲೀಸರು ಅವರನ್ನು ತನಿಖೆ ಮಾಡಬೇಕಾಗುತ್ತದೆ. ಪ್ರಕರಣದ ಬಗ್ಗೆ ಮನ್ವಿತ್ ರೈ ಬಗ್ಗೆ ನಾನು ದೂರು ಹೇಳಿಲ್ಲ. ಯಾಕಾಗಿ ಆತ ಹೊರಗಡೆ ಹೇಳಿದ್ದೋ ಗೊತ್ತಿಲ್ಲ. ಮನ್ವಿತ್ ರೈ ಜೊತೆಗೆ ಯಾವುದೇ ವೈಮನಸ್ಸು ಹೊಂದಿಲ್ಲ. ಎರಡು ವರ್ಷದಿಂದ ಸಂಪರ್ಕ ಇಲ್ಲ ಅಷ್ಟೇ. ಅವರು ಇದನ್ನು ಹೊರಗಡೆ ಯಾಕೆ ಹೇಳಿದ್ದು ಅಂತ ಅವರೇ ಹೇಳಬೇಕು. ಪೊಲೀಸ್ ಸೆಕ್ಯುರಿಟಿ ಬೇಕೆಂದು ನಾನು ಕೇಳೋದಿಲ್ಲ. ಪೊಲೀಸರೇ ಅದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಉದ್ಯಮಿ, ನಟಿ ಅನುಷ್ಕಾ ಶೆಟ್ಟಿ ಸೋದರ ಗುಣರಂಜನ್ ಶೆಟ್ಟಿ ಹೇಳಿದ್ದಾರೆ.
ವಿಚಾರಣೆ ಬಗ್ಗೆ ಮಾಹಿತಿ ಹಂಚಿಕೊಂಡ ಪೊಲೀಸ್ ಕಮಿಷನರ್ ಶಶಿಕುಮಾರ್, ನಿಶ್ಚಿತವಾಗಿ ಯಾರು ಬೆದರಿಕೆ ಹಾಕಿದ್ದಾರೆಂದು ಹೇಳಿಲ್ಲ. ಬಲ್ಲ ಮೂಲಗಳ ಪ್ರಕಾರ ಕೊಲೆ ಬೆದರಿಕೆ ಇರುವುದನ್ನು ಹೇಳಿದ್ದಾರೆ. ತನಿಖೆಗೆ ಮಾಹಿತಿ ಸಂಗ್ರಹಿಸುವುದಕ್ಕಾಗಿ ಕರೆಸಿದ್ದೇವೆ. ಕೆಲವರ ಬಗ್ಗೆ ಶಂಕೆ ಇರುವ ಬಗ್ಗೆ ಹೇಳಿದ್ದಾರೆ. ಅವರೊಬ್ಬರು ಸಾರ್ವಜನಿಕ ಜೀವನದಲ್ಲಿ ಇರೋ ವ್ಯಕ್ತಿಯಾಗಿದ್ದು ನಾವು ಎಲ್ಲ ಆಯಾಮದಲ್ಲಿ ತನಿಖೆ ನಡೆಸುತ್ತೇವೆ. ಯಾರೆಲ್ಲರ ಹೆಸರು ಕೇಳಿಬಂದಿತ್ತೋ ಅವರನ್ನು ವಿಚಾರಣೆಗೆ ಕರೆಸುತ್ತೇವೆ ಎಂದು ಹೇಳಿದರು.
Actor Gunaranjan Shetty murder threat, observes enquiry at Mangalore commissioner office. Shashi Kumar has appointed CCB inspector Mahesh prasad to investigate the case. Multilingual actress anushka Shetty's brother Gunaranjan Shetty gets murder threats after which a petition has been filed with the karnataka home minister, requesting security and judicial action. On Sunday, members of Gunaranjan Shetty's Jayakarnataka Janapara Vedike filed a petition with home minister Araga Jnanendra, requesting protection and legal action
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
10-09-25 10:50 pm
Mangalore Correspondent
Yenepoya Hospital, Mangalore: ಯೆನಪೋಯ ಆಸ್ಪತ್ರೆ...
10-09-25 08:46 pm
ಕೊಲ್ಲೂರು ಮೂಕಾಂಬಿಕೆಗೆ ನಾಲ್ಕು ಕೋಟಿ ಮೌಲ್ಯದ ವಜ್ರ...
10-09-25 08:14 pm
Mangalore, Baikampady Fire, Aromazen: ಬೈಕಂಪಾಡ...
10-09-25 02:10 pm
ಬಂಟ್ವಾಳ : ತನ್ನ ಮೇಲೆ ಹಲ್ಲೆ, ಕೊಲೆಯತ್ನವೆಂದು ಸುಳ್...
10-09-25 11:02 am
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm