ಮಂಗಳೂರು ನಗರ ಡಿಸಿಪಿ ಹುದ್ದೆಗೆ ಅನ್ಶು ಕುಮಾರ್ ಶ್ರೀವಾಸ್ತವ ನೇಮಕ 

30-06-22 08:43 pm       Mangaluru Correspondent   ಕರಾವಳಿ

ಮಂಗಳೂರು ನಗರ ಕಮಿಷನರೇಟ್ ಉಪಾಯುಕ್ತರಾಗಿ (ಕಾನೂನು ಸುವ್ಯವಸ್ಥೆ) ಅನ್ಶು ಕುಮಾರ್ ಶ್ರೀವಾಸ್ತವ ಅವರನ್ನು ನೇಮಕ ಮಾಡಲಾಗಿದೆ. 

ಮಂಗಳೂರು, ಜೂನ್ 30: ಮಂಗಳೂರು ನಗರ ಕಮಿಷನರೇಟ್ ಉಪಾಯುಕ್ತರಾಗಿ (ಕಾನೂನು ಸುವ್ಯವಸ್ಥೆ) ಅನ್ಶು ಕುಮಾರ್ ಶ್ರೀವಾಸ್ತವ ಅವರನ್ನು ನೇಮಕ ಮಾಡಲಾಗಿದೆ. 

ಕೋಸ್ಟಲ್ ಸೆಕ್ಯುರಿಟಿ ವಿಭಾಗದ ಉಡುಪಿ ಜಿಲ್ಲಾ ಎಸ್ಪಿ ಆಗಿದ್ದ ಅನ್ಶು ಕುಮಾರ್ ಅವರನ್ನು ಮಂಗಳೂರಿಗೆ ವರ್ಗ ಮಾಡಲಾಗಿದೆ. 2011 ರಲ್ಲಿ ದೆಹಲಿ ಐಐಟಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಗಳಿಸಿದ್ದ ಅನ್ಶು ಕುಮಾರ್, ಒಂದು ವರ್ಷ ಕಾಲ ಇಂಜಿನಿಯರ್ ಆಗಿ ಕೆಲಸ ಮಾಡಿದ್ದರು. ಆನಂತರ ಆ ಕೆಲಸ ಬಿಟ್ಟು ಸಿವಿಲ್ ಸರ್ವಿಸ್ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದರು. 

2017ರಲ್ಲಿ ಐದನೇ ಪ್ರಯತ್ನದಲ್ಲಿ ಐಪಿಎಸ್ ತೇರ್ಗಡೆ ಆಗಿದ್ದರು. 2018 ನೇ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿ ಕರ್ನಾಟಕದಲ್ಲಿ ಸೇವೆ ಆರಂಭಿಸಿದ್ದರು.‌ ಮೊದಲಿಗೆ ಕಲಬುರ್ಗಿ ಜಿಲ್ಲೆಯಲ್ಲಿ ಎಸಿಪಿ ಆಗಿ ಕರ್ತವ್ಯ. ಒಂದೂವರೆ ವರ್ಷದಿಂದ ಉಡುಪಿ ಕೋಸ್ಟಲ್ ಸೆಕ್ಯುರಿಟಿ ವಿಭಾಗದ ಎಸ್ಪಿ ಆಗಿದ್ದರು. 

ಎರಡು ದಿನಗಳ ಹಿಂದೆ ಮಂಗಳೂರು ನಗರ ಡಿಸಿಪಿ ಆಗಿದ್ದ ಹರಿರಾಮ್ ಶಂಕರ್ ಅವರು ಹಾಸನ ಎಸ್ಪಿಯಾಗಿ ವರ್ಗಾವಣೆ ಆಗಿದ್ದರು.

Anshu Kumar IPS posted as new DCP law and order for Mangalore. Anshu was the SP of Coastal Security of Udupi District. He also worked as ACP in Kalaburgi district.