ಮರವಂತೆ ಸಮುದ್ರಕ್ಕೆ ಹಾರಿದ್ದ ಕಾರು ; ನಾಪತ್ತೆಯಾಗಿದ್ದ ಯುವಕನ ಶವ ತ್ರಾಸಿ ಬಳಿ ಪತ್ತೆ

04-07-22 08:31 pm       udupi Correspondent   ಕರಾವಳಿ

ಮರವಂತೆ ಸಮುದ್ರಕ್ಕೆ ಬಿದ್ದ ಕಾರು ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಯುವಕನ ಶವ ತ್ರಾಸಿ ಕಡಲ ತೀರದಲ್ಲಿ ಪತ್ತೆಯಾಗಿದೆ. 

ಕುಂದಾಪುರ, ಜುಲೈ 4 : ಮರವಂತೆ ಸಮುದ್ರಕ್ಕೆ ಬಿದ್ದ ಕಾರು ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಯುವಕನ ಶವ ತ್ರಾಸಿ ಕಡಲ ತೀರದಲ್ಲಿ ಪತ್ತೆಯಾಗಿದೆ. 

ಶನಿವಾರ ತಡರಾತ್ರಿ 12 ಗಂಟೆ ಸುಮಾರಿಗೆ ಮರವಂತೆ ಬೀಚ್​ ನಲ್ಲಿ ಸಾಗುತ್ತಿದ್ದ ಕೆಂಪು ಬಣ್ಣದ ಕಾರು ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದಿತ್ತು. ಅಪಘಾತದಲ್ಲಿ ಬೀಜಾಡಿ ನಿವಾಸಿ ವೀರಜ್​ ಆಚಾರ್ಯ ಕಾರಿನ ಒಳಗಡೆಯೇ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ರೋಷನ್​ ಎಂಬ ಯುವಕ ನಾಪತ್ತೆಯಾಗಿದ್ದರೆ, ಇನ್ನಿಬ್ಬರು ಯುವಕರು ಅಪಾಯ ಇಲ್ಲದೆ ಪಾರಾಗಿದ್ದರು. ನಾಪತ್ತೆಯಾಗಿದ್ದ ರೋಷನ್​ಗಾಗಿ ಹುಡುಕಾಟ ನಡೆಸಲಾಗಿತ್ತು. ಇದೀಗ ತ್ರಾಸಿ ಬಳಿಯ ಕಂಚುಗೋಡು ಸಮುದ್ರ ತೀರದಲ್ಲಿ ರೋಶನ್ ಶವ ಪತ್ತೆಯಾಗಿದೆ. 

ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ರೋಷನ್​ ನೀರುಪಾಲಾಗಿದ್ದ ಅನುಮಾನ ವ್ಯಕ್ತವಾಗಿತ್ತು. ಈ ಸಂಬಂಧ ಗಂಗೊಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಾಹಿತಿ ಪ್ರಕಾರ, ಶನಿವಾರ ಸಂಜೆಯೇ ನಾಲ್ವರು ಯುವಕರು ಕಾರಿನಲ್ಲಿ ಮರವಂತೆಗೆ ತೆರಳಿದ್ದರು ಎನ್ನಲಾಗಿದೆ. ಮಧ್ಯರಾತ್ರಿ ವೇಳೆ ಅಲ್ಲಿಂದ ಕೋಟೇಶ್ವರಕ್ಕೆ ಸಾಗುತ್ತಿದ್ದಾಗ ಅಪಘಾತ ಆಗಿದೆ ಎನ್ನುವ ಮಾಹಿತಿಯಿದೆ. ಆದರೆ ಕಾರು ನೀರಿನಲ್ಲಿ ತೇಲುತ್ತಿರುವುದು ನಸುಕಿನಲ್ಲಿ ಪತ್ತೆಯಾಗಿತ್ತು.

ಮರವಂತೆ ಹೆದ್ದಾರಿಯಿಂದ ಸಮುದ್ರಕ್ಕಿಳಿದ ಕಾರು ; ಸೀಟ್ ಬೆಲ್ಟ್ ಹಾಕಿದ್ದ ರೀತಿಯಲ್ಲೇ ಉದ್ಯಮಿ ಪುತ್ರ ಸಾವು, ಸೋದರ ನಾಪತ್ತೆ, ಅಪಘಾತದ ಬಗ್ಗೆ ಶಂಕೆ

One person died, and another is missing, and two others had a miraculous escape, after the car in which they were travelling plunged into the  Arabian Sea, from National Highway-66 at Maravanthe Beach, at 2 am  on Sunday.The deceased is Viraj Achar,28. Roshan,23, is missing. According to police, the accident took place when Viraj was  driving the car, along with Roshan, Karthik and Sandesh. They were travelling on NH-66, from Kundapur to Kumta.