ಪತ್ನಿ ಜೊತೆ ಮನಸ್ತಾಪ ; ಮರವೂರು ಸೇತುವೆ ಬಳಿ ಬೈಕ್ ಬಿಟ್ಟು ವ್ಯಕ್ತಿ ನಾಪತ್ತೆ ! 

06-07-22 10:19 pm       Mangalore Correspondent   ಕರಾವಳಿ

ಪತ್ನಿ ಜೊತೆ ಮನಸ್ತಾಪಗೊಂಡು ವ್ಯಕ್ತಿಯೊಬ್ಬರು ತನ್ನ ಬೈಕನ್ನು ಮರವೂರು ಸೇತುವೆ ಬಳಿ ಬಿಟ್ಟು ನಾಪತ್ತೆಯಾಗಿದ್ದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಮಂಗಳೂರು, ಜುಲೈ 6 : ಪತ್ನಿ ಜೊತೆ ಮನಸ್ತಾಪಗೊಂಡು ವ್ಯಕ್ತಿಯೊಬ್ಬರು ತನ್ನ ಬೈಕನ್ನು ಮರವೂರು ಸೇತುವೆ ಬಳಿ ಬಿಟ್ಟು ನಾಪತ್ತೆಯಾಗಿದ್ದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಶಂಕೆ ವ್ಯಕ್ತವಾಗಿದೆ. 

ನಗರದ ಕದ್ರಿ ಠಾಣೆ ವ್ಯಾಪ್ತಿಯ ವ್ಯಾಸನಗರದ ನಿವಾಸಿ ವಿವೇಕ್ ಪ್ರಭು (45) ನಾಪತ್ತೆಯಾದ ವ್ಯಕ್ತಿ. ಇವರು ನಿನ್ನೆ ರಾತ್ರಿ ಮನೆಯಿಂದ ತೆರಳಿದ್ದರು. ಮನೆಯಲ್ಲಿ ಪತಿ- ಪತ್ನಿ ನಡುವೆ ಗಲಾಟೆ ನಡೆದು ಪತಿ ಮನೆ ಬಿಟ್ಟು ತೆರಳಿದ್ದರು ಎನ್ನಲಾಗಿದೆ. 

ವಿವೇಕ್ ಪ್ರಭು ಫಳ್ನೀರ್ ಪೆಟ್ರೋಲ್ ಪಂಪ್ ನಲ್ಲಿ ಅಕೌಂಟ್ ನೋಡಿಕೊಳ್ಳುತ್ತಿದ್ದರು. ಇವರ ಪತ್ನಿ ಬ್ಯೂಟಿಶಿಯನ್ ಆಗಿ ಕೆಲಸ ಮಾಡುತ್ತಿದ್ದರು. ಇಂದು ಬೆಳಗ್ಗೆ ವಿವೇಕ್ ಪ್ರಭು ಅವರ ಬೈಕ್ ಕೀ ಸಹಿತ ಮರವೂರು ಸೇತುವೆ ಬಳಿ ಪತ್ತೆಯಾಗಿತ್ತು. ಹಾಗಾಗಿ ನದಿಗೆ ಹಾರಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಅವರ ಶವ ಪತ್ತೆಯಾಗಿದೆ ಎನ್ನುವ ಗಾಳಿ ಸುದ್ದಿಯೂ ಇತ್ತು. ಆದರೆ ಕಾವೂರು ಮತ್ತು ಬಜ್ಪೆ ಪೊಲೀಸರು ತಮಗೇನು ಮಾಹಿತಿ ಲಭಿಸಿಲ್ಲ ಎಂದಿದ್ದಾರೆ.

ಪತ್ನಿ ಕದ್ರಿ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದಾರೆ.

Mangalore bike abandoned with helmet, key on airport road at Maravoor bridge, suicide suspected. The missing person has been identified as Vivek Prabhu. He was said to be working at a petrol pump in Falnir. Some family issues have resulted in Vivek going missing by parking his bike near Maravoor bridge.