ಬ್ರೇಕಿಂಗ್ ನ್ಯೂಸ್
28-07-22 05:41 pm Mangalore Correspondent ಕರಾವಳಿ
Photo credits : NEWS FIRST
ಸುಳ್ಯ, ಜುಲೈ 28: ನಿಮ್ಮ ಮಗಳಿಗೆ ಈ ಗತಿ ಆಗುತ್ತಿದ್ದರೆ, ನೀವು ಎರಡು ದಿನ ಬಿಟ್ಟು ಬರುತ್ತಿದ್ರಾ.. ನೀವು ಎರಡು ದಿನ ಕಳೆದು ನಮ್ಮ ಮನೆಗೆ ಬಂದಿದ್ದೀರಲ್ಲಾ.. ನೀವ್ಯಾಕೆ ಬಂದ್ರಿ.. ಎಂದು ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ಪತ್ನಿ, ಪುತ್ತೂರು ಶಾಸಕ ಸಂಜೀವ ಮಠಂದೂರು ಅವರನ್ನು ತೀವ್ರ ತರಾಟೆಗೆತ್ತಿಕೊಂಡಿದ್ದಾರೆ.
ಎರಡು ದಿನಗಳ ಬಳಿಕ ಪ್ರವೀಣ್ ಮನೆಗೆ ಭೇಟಿಯಿತ್ತ ಶಾಸಕ ಮಠಂದೂರು ಅವರನ್ನು ಮನೆಯವರು ಮತ್ತು ಕುಟುಂಬಸ್ಥರು ತೀವ್ರ ತರಾಟೆಗೆತ್ತಿಕೊಂಡರು. ಪಕ್ಷ ಪಕ್ಷ ಅಂತ ದಿನದ 24 ಗಂಟೆಯೂ ಓಡುತ್ತಿದ್ದರು. ಅಂಗಾರಣ್ಣ ಅಂತಾ ಅವರ ಹಿಂದೆ ಓಡುತ್ತಿದ್ದರು. ಕುಂಜಾಡಿಯ ಮನೆಯಲ್ಲಿ ಏನೇ ಕಾರ್ಯಕ್ರಮ ಆದರೂ ನಳಿನಣ್ಣ ಅಂತ ಓಡುತ್ತಿದ್ದರು. ನನ್ನನ್ನು ಅರ್ಧದಲ್ಲಿ ಬಿಟ್ಟು ಕುಂಜಾಡಿಗೆ ಅಂತ ಹೋಗುತ್ತಿದ್ದರು. ಈಗ ಎಲ್ಲಿದ್ದಾರೆ ನಿಮ್ಮ ನಳಿನಣ್ಣ ಎಂದು ಪ್ರವೀಣ್ ಪತ್ನಿ ಪ್ರಶ್ನಿಸಿದರೆ, ಅಲ್ಲಿದ್ದ ಯಾರಿಗೂ ಮಾತು ಹೊರಡಲಿಲ್ಲ.
ಅಳುತ್ತಲೇ ಪ್ರವೀಣ್ ಪತ್ನಿ ಶಾಸಕರನ್ನು ಪ್ರಶ್ನೆ ಮಾಡಿದರು. ನಿಮ್ಮ ಪರಿಹಾರದ ಹಣ ನನಗೆ ಬೇಡ. ಹೋದವರನ್ನು ಮತ್ತೆ ಜೀವ ಮಾಡಲು ಆಗುವುದಿಲ್ಲ. ಆದರೆ ಅವರನ್ನು ಹತ್ಯೆ ಮಾಡಿದವರನ್ನಾದ್ರೂ ಬಂಧಿಸಲು ನಿಮ್ಮಿಂದ ಆಯಿತೇ.. ನಳಿನ್ ಗೆ ಆಯಿತೇ.. ನಿನ್ನೆ ಬೆಳ್ಳಾರೆಗೆ ಬಂದು ಪೋಸು ಕೊಟ್ಟರಲ್ಲ. ಅಲ್ಲಿಂದ ಓಡಿ ಹೋದರಲ್ಲಾ.. ಅವರು ಅಲ್ಲಿಗೆ ಬಂದಿದ್ದಕ್ಕೇ ಗಲಾಟೆ ಆಯ್ತು.. ಅವರು ಅಲ್ಲಿ ಯಾಕೆ ಹೋಗಿದ್ದು ಇಲ್ಲಿ ಮನೆಗೆ ಬರಬಹುದಿತ್ತಲ್ಲ ಎಂದು ತೀವ್ರ ತರಾಟೆಗೆತ್ತಿಕೊಂಡರು ಪ್ರವೀಣ್ ಪತ್ನಿ.
ಇದೇ ವೇಳೆ, ಅಲ್ಲಿದ್ದ ಸಂಬಂಧಿಕರು ನಾಯಕರು ಈಗ ಯಾಕೆ ಇಲ್ಲಿಗೆ ಬರುವುದು. ಫೋಟೋ ತೆಗೆಯುವುದಕ್ಕಾಗಿಯೇ.. ನಾವು ಹೋಗಿದ್ದೇವೆ ಎಂದು ಪೇಪರಲ್ಲಿ ಫೋಟೋ ಕೊಡುವುದಕ್ಕೆ ಬರ್ತೀರಾ.. ನೀವು ಯಾಕೆ ಈಗ ಬಂದ್ರಿ.. ನಾವು ನಿಮ್ಮ ಕ್ಷೇತ್ರದ ಕಾರ್ಯಕರ್ತರು. ನಿಮಗೆ ನಿನ್ನೆ ಬೆಳಗ್ಗೆ ಪುತ್ತೂರಲ್ಲಿ ಕಾದೆವು. ನೀವು ಮೊನ್ನೆ ರಾತ್ರಿ ಬೆಂಗಳೂರಲ್ಲಿದ್ದರೆ, ಬೆಳಗ್ಗೆ ಬರಬಹುದಿತ್ತಲ್ಲ. ನಿಮಗೆ ರಸ್ತೆಯಲ್ಲಿ ಬರೋಕೆ ಆಗಲ್ವಾ.. ವಿಮಾನ ಆಗಬೇಕೇ ಎಂದು ನೇರಾ ನೇರ ಪ್ರಶ್ನೆ ಮಾಡಿದ್ದಾರೆ. ಸಂಜೀವ ಮಠಂದೂರು ಯಾವುದೇ ಸಮಜಾಯಿಷಿ ಹೇಳುವುದಕ್ಕೂ ಬಿಡಲಿಲ್ಲ.
Bellare Praveen murder, Sanjeeva Matandoor slammed by Praveens wife and family. My husband who worked so much for the party in return had to die brutally. He was so much loving Angara but did he even come to see his face. What did Nalin Kateel do in return?. They also alleged that why can't get yogis rule in Karnataka.
11-09-25 10:11 pm
Bangalore Correspondent
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 10:42 pm
Mangaluru Correspondent
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm