ಬ್ರೇಕಿಂಗ್ ನ್ಯೂಸ್
29-07-22 09:32 pm Mangalore Correspondent ಕರಾವಳಿ
Photo credits : NEWS FIRST
ಸುಳ್ಯ, ಜುಲೈ 29 : ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೆ ಬಂದವರು ಕಾರ್ಯಕರ್ತರ ರಕ್ಷಣೆ ಮಾಡುವಲ್ಲಿ ಸೋತಿದ್ದಾರೆ. ರಾಜ್ಯ ಸರಕಾರದ ವೈಫಲ್ಯದಿಂದ ಈ ಹತ್ಯೆ ನಡೆದಿದೆ. ಹಿಂದುಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಹಿಂದುಗಳನ್ನು ಕಡೆಗಣಿಸುತ್ತಿದ್ದಾರೆ. ನಳಿನ್ ಕುಮಾರ್ ಕಾರನ್ನು ಪಂಚರ್ ಮಾಡೋದಲ್ಲ, ಆತನ ತಲೆ ಒಡೆಯಬೇಕಿತ್ತು ಎಂದು ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಚುನಾವಣೆ ಬರುವಾಗ ಇಂಥ ಹತ್ಯೆಗಳನ್ನು ನಡೆಸೋದು ರಾಜಕೀಯ ಪಕ್ಷಗಳ ತಂತ್ರ. ಇವರಿಗೆ ಹಿಂದು, ಮುಸ್ಲಿಂ ಅನ್ನುವ ಭೇದ ಇಲ್ಲ. ರಕ್ತ ಕುಡಿಯುತ್ತಾರೆ. ಇವರಿಗೆ ಹಿಂದುತ್ವ ಬೇಕಾಗಿಲ್ಲ.
ಹಿಜಾಬ್ ವಿವಾದ ಆರಂಭವಾದಾಗಲೇ ಒಂದು ಕೊಲೆ ಆಗುತ್ತೆ ಎಂದಿದ್ದೆ. ಶಿವಮೊಗ್ಗದಲ್ಲಿ ಹರ್ಷನ ಕೊಲೆ ಆಯಿತು. ಅವನನ್ನು ಕೊಲೆ ಮಾಡಿದವರು ರಾಜಾರೋಷ ಇದ್ದಾರೆ. ಇದೀಗ ಪ್ರವೀಣನ್ನು ಕೊಲೆ ಮಾಡಿದ್ದಾರೆ. ಮಸೂದನದ್ದು ಯಾವುದೋ ಗಾಂಜಾ ಪಾರ್ಟಿ ಗಲಾಟೆಯಲ್ಲಿ ಸಾವು ಆಗಿತ್ತು. ಅದು ಉದ್ದೇಶ ಇಟ್ಟುಕೊಂಡು ಮಾಡಿದ್ದಲ್ಲ. ಆದರೆ ಪ್ರವೀಣನ್ನು ಯಾಕೆ ಕೊಲೆ ಮಾಡಿದ್ದಾರೆ. ಯಾವುದಕ್ಕೂ ಇಲ್ಲದ ಹುಡುಗನನ್ನು ಹತ್ಯೆ ಮಾಡಿದ್ದಾರೆ.
ಇಷ್ಟೆಲ್ಲ ಆಗುವಾಗ ಗುಪ್ತಚರ ಇಲಾಖೆ ಏನು ಮಾಡ್ತಾ ಇತ್ತು. ಇಲ್ಲಿ ಮತ್ತೊಂದು ಕೊಲೆ ಆಗುತ್ತೆ ಅಂತ ಯಾಕೆ ಗೊತ್ತಾಗಿಲ್ಲ. ಇವರಿಗೆ ಹಿಂದುತ್ವ ಬೇಕಾಗಿಲ್ಲ. ಇವತ್ತು ಮುತಾಲಿಕನ್ನು ಬರದಂತೆ ತಡೆದಿದ್ದಾರೆ. ಅವರೇನು ಇಲ್ಲಿಗೆ ಬರದೆ ಅಫ್ಘಾನಿಸ್ತಾನ ಹೋಗಬೇಕಿತ್ತೇ.. ಯಾಕೆ ಅವರನ್ನು ಬರದಂತೆ ತಡೆದ್ರು. ಮೊನ್ನೆ ರಸ್ತೆಯಲ್ಲಿ ಹೋಗುವಾಗ ಚಾಕು ಚುಚ್ಚಿದರೆ ಸೆಕ್ಯುರಿಟಿ ಕೊಡಕ್ಕಾಗುತ್ತಾ ಎಂದು ಒಬ್ಬ ಸಂಸದ ಹೇಳಿದ್ದಾನೆ. ಜನರಿಗೆ ರಕ್ಷಣೆ ನೀಡಲು ಆಗದವರು ಯಾಕೆ ಇರೋದು ಇವರು. ಇವರ ಸರಕಾರ ಯಾಕೆ ಇರಬೇಕು. ಇವತ್ತು ಅವನು ಬಂದಿದ್ದು ಯಾಕೆ ಇಲ್ಲಿ. ನಾಯಿ ಅವನು ಎಂದು ಮೂದಲಿಸಿದರು.
Should have broken Nalin Kumar Kateels head at Bellare slams Hindu Leader Mahesh Shetty during his visit to Praveen Kumars house. Shetty also alleged that we need to assault the politicians with chappals next time when they come asking for votes to our homes. He also questioned where is the protection of Hindus in India.
11-09-25 10:11 pm
Bangalore Correspondent
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 10:42 pm
Mangaluru Correspondent
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm