ಬ್ರೇಕಿಂಗ್ ನ್ಯೂಸ್
01-08-22 10:32 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 1 : ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು ಸುಬ್ರಹ್ಮಣ್ಯ ಆಸುಪಾಸಿನಲ್ಲಿ ಬೆಟ್ಟಗಳ ನಡುವೆ ಭಾರೀ ಜಲಸ್ಫೋಟ ಉಂಟಾಗಿ ಅನಾಹುತ ಸಂಭವಿಸಿದೆ.
ಆದಿ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದಲ್ಲಿ ಹರಿಯುವ ನದಿಯಲ್ಲಿ ಭಾರೀ ಪ್ರವಾಹ ಉಂಟಾಗಿದ್ದು ದೇವಸ್ಥಾನಕ್ಕೆ ನೀರು ನುಗ್ಗಿದ್ದು ರಾತ್ರಿ ವೇಳೆ ದಿಢೀರ್ ಮುಳುಗಡೆಯಾಗಿದೆ. ಮಣ್ಣು ಮಿಶ್ರಿತ ಕೆಸರು ನೀರು ದೇವಸ್ಥಾನದ ಒಳಗೆ ನುಗ್ಗಿದ್ದು ದಿಢೀರ್ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಹೀಗಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ.
ಇದಲ್ಲದೆ, ಸುಬ್ರಹ್ಮಣ್ಯ, ಬಿಸ್ಲೆ ಘಾಟ್, ಕಲ್ಮಕಾರು, ಬಾಳುಗೋಡು ಆಸುಪಾಸಿನಲ್ಲಿ ಬೆಟ್ಟಗಳ ಮಧ್ಯೆ ಜಲಸ್ಫೋಟ ಉಂಟಾಗಿದ್ದು ಬೃಹತ್ ಮರಗಳು, ಬಂಡೆ ಕಲ್ಲುಗಳು ಛಿದ್ರಗೊಂಡು ಬಿದ್ದಿವೆ. 2018ರ ಬಳಿಕ ಪ್ರತಿ ವರ್ಷ ಬೆಳ್ತಂಗಡಿ, ಸುಳ್ಯ, ಸಕಲೇಶಪುರ ವ್ಯಾಪ್ತಿಯಲ್ಲಿ ಈ ರೀತಿಯ ಜಲ ಸ್ಫೋಟ ಸಂಭವಿಸುತ್ತಿದ್ದು ಬೆಟ್ಟಗಳ ನಡುವೆ ದಿಢೀರ್ ಸ್ಫೋಟಗೊಂಡು ಭಾರೀ ಪ್ರಮಾಣದಲ್ಲಿ ನೀರು ಚಿಮ್ಮಿ ಬರುತ್ತದೆ. 2018ರಲ್ಲಿ ಮೊದಲ ಬಾರಿಗೆ ಸಂಪಾಜೆ ಬಳಿಯ ಜೋಡುಪಾಲ, ಮಡಿಕೇರಿ ಬಳಿಯ ನಾಪೋಕ್ಲು ಭಾಗದಲ್ಲಿ ಇದೇ ರೀತಿಯ ಸ್ಫೋಟ ಆಗಿತ್ತು.

















ಪಶ್ಚಿಮ ಘಟ್ಟದ ಮೇಲ್ಭಾಗದಲ್ಲಿ ಇಂಗುವ ಮಳೆನೀರು ಬುಡದ ಭಾಗದಲ್ಲಿ ಬೆಟ್ಟಗಳನ್ನು ಸೀಳಿಕೊಂಡು ಹೊರ ಬರುತ್ತದೆ. ಈ ವೇಳೆ, ಭಾರೀ ಸ್ಫೋಟಗಳಾಗುತ್ತಿದ್ದು ಅಲ್ಲಿರುವ ಬೃಹತ್ ಮರಗಳು ಛಿದ್ರಗೊಂಡು ಕಲ್ಲು ಮಣ್ಣಿನ ಜೊತೆಗೆ ಕೆಸರು ನೀರು ಹೊರಹೊಮ್ಮುತ್ತದೆ. ಎತ್ತಿನಹೊಳೆ ಯೋಜನೆ ಕಾಮಗಾರಿಗೆಂದು ಪಶ್ಚಿಮ ಘಟ್ಟಗಳ ತುದಿಯನ್ನು ಸಮತಟ್ಟು ಮಾಡಲಾಗಿದ್ದು ಅದೇ ಕಾರಣದಿಂದ ಅಲ್ಲಿ ಇಂಗುವ ಮಳೆ ನೀರು ನೇರವಾಗಿ ಬೆಟ್ಟದ ಒಳಕ್ಕಿಳಿದು ಯಾವುದೋ ಒಂದು ಭಾಗದಲ್ಲಿ ಜಲ ಸ್ಫೋಟಗೊಂಡು ಹೊರಕ್ಕೆ ಬರುತ್ತದೆ. ಈ ರೀತಿಯ ಜಲ ಸ್ಫೋಟಗಳು ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಕಳೆದ ಐದಾರು ವರ್ಷಗಳಲ್ಲಿ ಪ್ರತಿ ವರ್ಷ ಸಂಭವಿಸುತ್ತಿವೆ ಎಂದು ಪರಿಸರ ತಜ್ಞರು ಹೇಳುತ್ತಾರೆ.












ಅದೇ ಮಾದರಿಯ ಸ್ಫೋಟ ಈ ಬಾರಿಯೂ ಸುಬ್ರಹ್ಮಣ್ಯ ಆಸುಪಾಸಿನಲ್ಲಿ ಉಂಟಾಗಿದ್ದು ಜನರಿಗೆ ಆತಂಕ ಸೃಷ್ಟಿಸಿದೆ. ಆದಿ ಸುಬ್ರಹ್ಮಣ್ಯ ದೇವಸ್ಥಾನ ಮುಳುಗಡೆ ಆಗಿರುವುದರಿಂದ ಎರಡು ದಿನ ಕಾಲ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ. ಕೆಸರು ನೀರು, ಮರದ ದಿಮ್ಮಿಗಳು, ಕಲ್ಲು ಮಣ್ಣನ್ನು ಹೊತ್ತ ಪ್ರವಾಹ ಬಂದು ದೇವಸ್ಥಾನವನ್ನು ಮುಳುಗಿಸಿದೆ. ರಾತ್ರಿಯಿಡೀ ಮಳೆಯಾದಲ್ಲಿ ದೇವಸ್ಥಾನವೇ ಕೊಚ್ಚಿ ಹೋಗುವ ಸಾಧ್ಯತೆಯಿದೆ.
Heavy rains in Western Ghats Sri Adi Subrahmanya Temple flooded with water, submerged.
05-09-26 04:53 pm
HK News Staffer
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
06-09-26 08:09 pm
Mangalore Correspondent
Ujre Wild Elephant: ಉಜಿರೆ ಎಸ್ಡಿಎಂ ಎಂಜಿನಿಯರಿಂ...
06-09-26 01:14 pm
ಸುಬ್ರಹ್ಮಣ್ಯ ಬಳಿ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್...
06-09-26 12:47 pm
ದಕ್ಷಿಣ ಕನ್ನಡ- ಚಿಕ್ಕಮಗಳೂರು ಸಂಪರ್ಕ ಕೊಂಡಿ ಚಾರ್ಮಾ...
05-09-26 04:58 pm
ಬೆಂಗಳೂರು-ಮಂಗಳೂರು ವಂದೇ ಭಾರತ್ಗೆ ಮತ್ತೊಂದು ಟೆಸ್ಟ...
05-09-26 11:59 am
06-09-26 10:28 pm
HK News Staffer
ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಆರೋಪ ; ಹೈಕೋರ್ಟಿಗೆ...
06-09-26 06:11 pm
ತಾನು ಐಎಎಸ್ ಅಧಿಕಾರಿ, ಪ್ರವಾಸೋದ್ಯಮ ಇಲಾಖೆಯ ಹೊಟೇಲ...
05-09-26 08:58 pm
ಶಿವಮೊಗ್ಗ ; ಕಾರಿನಲ್ಲಿ ಜಿಂಕೆ ಮಾಂಸ ಮಾರಾಟ ಯತ್ನ ;...
05-09-26 04:55 pm
ಬಡ್ಡಿ ಕಟ್ಟದಿದ್ದಕ್ಕೆ ಮಹಿಳೆಯನ್ನು ಅಪಹರಿಸಿ ಹಲ್ಲೆ...
05-09-26 03:08 pm