ಬ್ರೇಕಿಂಗ್ ನ್ಯೂಸ್
11-02-26 11:02 pm HK News Desk ಕರ್ನಾಟಕ
ತುಮಕೂರು, ಫೆ.12: ಲಕ್ಷಾಂತರ ರೂಪಾಯಿ ಮೌಲ್ಯದ ವಾಹನ, ಇನ್ನಾವುದೇ ವಸ್ತುಗಳನ್ನು ಖರೀದಿಸುವಾಗ ಹತ್ತಾರು ಬಾರಿ ಯೋಚನೆ ಮಾಡ್ತಾರೆ. ಖರೀದಿಸಿದ ವಾಹನ ತೆಗೆದುಕೊಂಡ ಕೆಲವೇ ದಿನಗಳಲ್ಲಿ ಹಾಳಾದರೆ ಅದೆಷ್ಟು ಬೇಜಾರಾಗುತ್ತೆ. 52 ಲಕ್ಷ ರೂಪಾಯಿ ಮೌಲ್ಯದ ‘ಹಿಟಾಚಿ 140’ ಯಂತ್ರವನ್ನು ಖರೀದಿಸಿದ ಐದು ತಿಂಗಳಲ್ಲೇ ಗಂಭೀರ ದೋಷ ಕಾಣಿಸಿಕೊಂಡಿದ್ದು ಇದರಿಂದ ತೀವ್ರ ಚಿಂತೆಗೀಡಾದ ಗ್ರಾಹಕ ಹಿಟಾಚಿಯನ್ನೇ ಶೋರೂಮ್ ಎದುರಿಟ್ಟು ಪ್ರತಿಭಟನೆ ನಡೆಸಿದ್ದಾನೆ.
ಗುಬ್ಬಿ ಮೂಲದ ಗಿರೀಶ್ ಎಂಬವರು ತುಮಕೂರಿನ ಅಂತರಸನಹಳ್ಳಿಯಲ್ಲಿ 7 ಲಕ್ಷ ರೂ. ಡೌನ್ ಪೇಮೆಂಟ್ ಮಾಡಿ 52 ಲಕ್ಷ ಮೌಲ್ಯದ ‘ಹಿಟಾಚಿ 140’ ಯಂತ್ರವನ್ನು ಖರೀದಿಸಿದ್ದರು. ಇದಕ್ಕೆ ಪ್ರತಿ ತಿಂಗಳು 1.15 ಲಕ್ಷ ರೂ. ಇಎಂಐ ಪಾವತಿಸುತ್ತಿದ್ದರು. 7,000 ಗಂಟೆಗಳ ವಾರಂಟಿ ಇರುವುದಾಗಿ ಕಂಪನಿ ತಿಳಿಸಿದ್ದರೂ ಖರೀದಿಸಿದ 480 ಗಂಟೆಗಳ ಬಳಕೆಯಲ್ಲೇ ಯಂತ್ರ ತಾಂತ್ರಿಕ ದೋಷಕ್ಕೀಡಾಗಿ ಸ್ಥಗಿತಗೊಂಡಿದೆ ಎಂದು ಗಿರೀಶ್ ಆರೋಪಿಸಿದ್ದಾರೆ.
ಇದಲ್ಲದೆ, ಯಂತ್ರವು ನಿರೀಕ್ಷೆಗಿಂತ ಹೆಚ್ಚು ಡೀಸೆಲ್ ಖರ್ಚು ಮಾಡುತ್ತಿರುವುದಾಗಿ, ಕಾರ್ಯಕ್ಷಮತೆಯೂ ಕುಸಿದಿರುವುದಾಗಿ ಗಿರೀಶ್ ಹೇಳಿದ್ದಾರೆ. ಕಳೆದ ಎರಡು ತಿಂಗಳಿನಿಂದ ಶೋರೂಂ ಮತ್ತು ಕಂಪನಿಯನ್ನು ಹಲವು ಬಾರಿ ಸಂಪರ್ಕಿಸಿದರೂ ಯಾವುದೇ ಸ್ಪಂದನೆ ಸಿಗಲಿಲ್ಲ ಎಂದು ಗಿರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೋರೂಂ ಸಿಬ್ಬಂದಿಯಿಂದ ಸರಿಯಾದ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಶೋರೂಂ ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ಶೋರೂಂಗೆ ಬೀಗ ಹಾಕಿದ್ದಾರೆ. ಅಲ್ಲದೆ, ಹಿಟಾಚಿ ಯಂತ್ರವನ್ನೇ ಶೋರೂಂ ಪ್ರವೇಶ ದ್ವಾರಕ್ಕೆ ಅಡ್ಡಲಾಗಿ ನಿಲ್ಲಿಸಿ ಪ್ರತಿಭಟನೆ ನಡೆಸಿದ್ದಾರ.
ಮೂರು ದಿನಗಳಿಂದ ಶೋರೂಂ ಎದುರು ಶಾಮಿಯಾನ ಹಾಕಿ ಧರಣಿ ನಡೆಸುತ್ತಿರುವ ಗಿರೀಶ್, “ಯಂತ್ರ ಸರಿಪಡಿಸಬೇಕು, ಇಲ್ಲವೇ ನನ್ನ ಹಣ ವಾಪಸ್ ಕೊಡಬೇಕು. ಸಾಲ ಮಾಡಿ ಯಂತ್ರ ಖರೀದಿಸಿದ್ದೇನೆ. ಕಂಪನಿ ಹೇಳುವುದೊಂದು, ಮಾಡುವುದೊಂದು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
A customer in Tumakuru staged a protest after a ₹52 lakh Hitachi 140 machine developed major technical issues within five months of purchase. Alleging poor response from the company despite warranty coverage, the buyer locked the showroom and parked the faulty machine at its entrance, demanding repair or refund.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 09:41 am
HK News Staffer
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
17-09-26 12:35 pm
HK News Staffer
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm