ಬ್ರೇಕಿಂಗ್ ನ್ಯೂಸ್
04-08-22 06:23 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 4: ಅಹಿತಕರ ಘಟನೆ ತಪ್ಪಿಸಲು ರಾತ್ರಿ ವೇಳೆ ದ್ವಿಚಕ್ರ ವಾಹನದಲ್ಲಿ ಡಬಲ್ ರೈಡ್ ಹೋಗುವುದನ್ನು ನಿಷೇಧಿಸಿ ಹೊರಡಿಸಿದ ಆದೇಶವನ್ನು ದಿಢೀರ್ ಆಗಿ ಹಿಂಪಡೆಯಲಾಗಿದೆ. ಡಬಲ್ ರೈಡ್ ನಿಷೇಧಕ್ಕೆ ವ್ಯಾಪಕ ಜನ ವಿರೋಧ ಕೇಳಿಬರುತ್ತಿದ್ದಂತೆ ಮಂಗಳೂರು ಕಮಿಷನರ್ ಆದೇಶ ವಾಪಸ್ ಪಡೆದಿದ್ದಾರೆ.
ಮಧ್ಯಾಹ್ನ ಪೊಲೀಸ್ ಅಧಿಕಾರಿಗಳ ಸಭೆಯ ಬಳಿಕ ದ್ವಿಚಕ್ರ ವಾಹನದಲ್ಲಿ ಬಂದು ಅಪರಾಧ ಎಸಗುವುದು ಜಾಸ್ತಿ ಎಂಬ ನಿಟ್ಟಿನಲ್ಲಿ ಡಬಲ್ ರೈಡ್ ಸಂಚಾರವನ್ನು ನಿಷೇಧಿಸಲಾಗುವುದು ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದರು. ಈ ಹೇಳಿಕೆಯ ವಿಚಾರದಲ್ಲಿ ಪರ- ವಿರೋಧ ಕೇಳಿಬಂದಿತ್ತು. ಅದಾದಬಳಿಕ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಈ ಕುರಿತು ಆದೇಶವನ್ನೂ ಹೊರಡಿಸಿದ್ದರು. ರಾತ್ರಿ ವೇಳೆಗೆ ಮಾತ್ರ ಹಿಂಬದಿ ಸವಾರಿ ನಿಷೇಧ ಎನ್ನುವ ಬಗ್ಗೆ ಆದೇಶದಲ್ಲಿ ತಿಳಿಸಲಾಗಿತ್ತು. ಆದರೆ ಜನಸಾಮಾನ್ಯರು ಹೆಚ್ಚಾಗಿ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುವುದರಿಂದ ಜಿಲ್ಲೆಯಾದ್ಯಂತ ಈ ರೀತಿ ಆದೇಶ ಹೊರಡಿಸಿದ್ದು ಕೆಲವರ ಆಕ್ಷೇಪಕ್ಕೆ ಕಾರಣವಾಗಿತ್ತು.
ಆದರೆ, ಈ ಬಗ್ಗೆ ಒಂದೆಡೆ ಜನ ವಿರೋಧ ಕೇಳಿಬರುತ್ತಿದ್ದಂತೆ ಮೇಲಿನಿಂದ ಕರೆಯೂ ಬಂದಿದೆ ಎನ್ನಲಾಗುತ್ತಿದ್ದು, ಮಂಗಳೂರು ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ ಒಂದೇ ಗಂಟೆಯಲ್ಲಿ ಹಿಂಪಡೆದಿದ್ದಾರೆ. ಅಲ್ಲದೆ, ಈಗಾಗಲೇ ರಾತ್ರಿ 9ರ ವರೆಗೆ ವ್ಯಾಪಾರ ಮತ್ತು ಸಂಚಾರ ನಿರ್ಬಂಧವನ್ನು ಸಡಿಲಿಸಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಅದೇ ಪ್ರಕಾರದಲ್ಲಿ ರಾತ್ರಿ 9ರ ಬಳಿಕ ಪೂರ್ತಿ ಸಂಚಾರ ನಿರ್ಬಂಧ ಇರಲಿದೆ ಎಂದು ಕಮಿಷನರ್ ಸ್ಪಷ್ಟಪಡಿಸಿದ್ದಾರೆ.
ಅಹಿತಕರ ಘಟನೆ ತಪ್ಪಿಸಲು ದ್ವಿಚಕ್ರ ಹಿಂಬದಿ ಸವಾರಿಗೆ ನಿಷೇಧ ; ಜಿಲ್ಲೆಯಲ್ಲಿ ನಾಳೆಯಿಂದಲೇ ಹೊಸ ವ್ಯವಸ್ಥೆ !
Mangalore Male pillion riders not allowed for a week order taken back after public opposition largely on social media. Adgp Alok Kumar and Mangalore Commissioner beefing media stated that male pillion riders will not be allowed for a week in the city after the night curfew is revoked on August 5.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
14-05-25 10:22 pm
HK News Desk
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm