ಬ್ರೇಕಿಂಗ್ ನ್ಯೂಸ್
07-08-22 02:49 pm Udupi Correspondent ಕರಾವಳಿ
ಬೈಂದೂರು, ಆಗಸ್ಟ್ 7: ಚಾಕಲೇಟ್ ಕವರ್ ಸಹಿತ ತಿಂದು ಗಂಟಲಲ್ಲಿ ಸಿಕ್ಕಿಕೊಂಡು ಆರು ವರ್ಷದ ಮಗು ಮೃತಪಟ್ಟ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮಗುವಿನ ಸಾವಿಗೆ ಚಾಕಲೇಟ್ ಕವರ್ ಕಾರಣ ಅಲ್ಲ. ಬದಲಿಗೆ ಹೃದಯಾಘಾತ ಕಾರಣ ಎಂದು ಎಫ್ಎಸ್ಎಲ್ ವರದಿಯಲ್ಲಿ ಕಂಡುಬಂದಿದೆ.
ಜುಲೈ 20ರಂದು ಉಪ್ಪುಂದ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಸ್ಕೂಲಿಗೆ ತೆರಳುತ್ತಿದ್ದ ಸಮನ್ವಿ(6) ಶಾಲಾ ವ್ಯಾನಲ್ಲಿಯೇ ಉಸಿರು ಕಟ್ಟಿದಂತಾಗಿ ಮೃತಪಟ್ಟಿದ್ದಳು. ಮಗುವಿಗೆ ಅಸ್ವಸ್ಥ ಆಗಿರುವುದು ತಿಳಿಯುತ್ತಿದ್ದಂತೆ ಸ್ಕೂಲ್ ವ್ಯಾನಲ್ಲಿಯೇ ವೈದ್ಯರ ಬಳಿಗೆ ಒಯ್ಯಲಾಗಿತ್ತು. ಮಗು ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದರು. ಮಗುವಿನ ತಾಯಿ, ಬೆಳಗ್ಗೆ ಶಾಲೆಗೆ ಹೋಗಲು ಹಠ ಹಿಡಿದಳೆಂದು ಚಾಕಲೇಟ್ ತೆಗೆದು ಕೊಟ್ಟಿದ್ದಾಗಿ ತಿಳಿಸಿದ್ದರು. ಚಾಕಲೇಟ್ ಕವರ್ ಸಹಿತ ತಿಂದ ಕಾರಣ ಗಂಟಲಲ್ಲಿ ಸಿಕ್ಕಿಕೊಂಡು ಮೃತಪಟ್ಟಿರಬೇಕೆಂದು ಶಂಕಿಸಲಾಗಿತ್ತು.
ಆದರೆ ಎಫ್ಎಸ್ಎಲ್ ವರದಿಯಲ್ಲಿ ಮಗುವಿಗೆ ಹೃದಯಾಘಾತ ಆಗಿದೆಯೆಂದು ಹೇಳಲಾಗಿದೆ. ಅಲ್ಲದೆ, ಹೃದಯದ ಕಾಯಿಲೆ ಇದ್ದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಪೊಲೀಸರು ಮಣಿಪಾಲ ಆಸ್ಪತ್ರೆಯಲ್ಲಿ ಮಗುವಿನ ಪೋಸ್ಟ್ ಮಾರ್ಟಂ ನಡೆಸಿದ ಬಳಿಕ ಕೆಲವು ಅಂಗಗಳನ್ನು ಎಫ್ಎಸ್ಎಲ್ ವರದಿಗಾಗಿ ಕಳುಹಿಸಿದ್ದರು. ವರದಿ ಪೊಲೀಸರ ಕೈಸೇರಿದ್ದು, ಮಗುವಿನ ಸಾವಿನ ಕಾರಣವನ್ನು ಹೊರಗೆಡವಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
The case of a six-year-old girl, who was reported to have died due to suffocation as the chocolate she was eating got stuck in her throat, has taken a twist. The FSL report confirmed that the girl died due to heart attack and not due to the chocolate getting stuck as it was believed thus far.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
15-05-25 03:33 pm
Mangalore Correspondent
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm