ಬ್ರೇಕಿಂಗ್ ನ್ಯೂಸ್
 
            
                        14-08-22 04:47 pm Mangalore Correspondent ಕರಾವಳಿ
 
            ಮಂಗಳೂರು, ಆಗಸ್ಟ್ 14: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ 75ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಅತ್ಯಂತ ವಿಶಿಷ್ಟವಾಗಿ ತ್ರಿವರ್ಣ ರಚಿಸಲಾಗಿದೆ. ದೇವಸ್ಥಾನದ ಮುಂದಿನ ಅಂಗಣದಲ್ಲಿ ಧವಸ ಧಾನ್ಯಗಳನ್ನಷ್ಟೇ ಬಳಸಿಕೊಂಡು ಆಕರ್ಷಕ ತ್ರಿವರ್ಣ ರಚಿಸಿದ್ದು ನೋಡುಗರ ಗಮನ ಸೆಳೆದಿದೆ.
ಗುರು ಬೆಳದಿಂಗಳು ಸಂಸ್ಥೆಯ ಆಶ್ರಯದಲ್ಲಿ ಮಂಗಳೂರಿನ ಕಲಾವಿದ ಮತ್ತು ಛಾಯಾಗ್ರಾಹಕ ಪುನಿಕ್ ಶೆಟ್ಟಿ ನೇತೃತ್ವದಲ್ಲಿ ಕ್ಷೇತ್ರದ ಸಿಬಂದಿ ಮತ್ತು ಗುರು ಬೆಳದಿಂಗಳು ಸಂಸ್ಥೆಯ ಸದಸ್ಯರು ಸೇರಿ 18 ಗಂಟೆಗಳ ಪರಿಶ್ರಮದಿಂದ ಆಕರ್ಷಕ ತ್ರಿವರ್ಣ ರಚಿಸಿದ್ದಾರೆ. ಯಾವುದೇ ಬಣ್ಣಗಳನ್ನು ಬಳಸದೆ ಕೇವಲ ಧಾನ್ಯ, ತರಕಾರಿ, ಹೂಗಳನ್ನಷ್ಟೇ ಬಳಸ್ಕೊಂಡು ತ್ರಿವರ್ಣದ ಆಕರ್ಷಣೆ ಮೂಡಿಸಿದ್ದು ವಿಶೇಷ.



ಒಟ್ಟು 900 ಕೇಜಿ ಧಾನ್ಯ, 100 ಕೇಜಿ ತರಕಾರಿ, 38 ಅಡಿ ವೃತ್ತ, 54 ಕಲಶ, 108 ಬಾಳೆಎಲೆ, 500 ವೀಳ್ಯದೆಲೆ, 100 ಕೇಜಿ ಬೆಳ್ತಿಗೆ ಅಕ್ಕಿಯನ್ನು ಬಳಸಲಾಗಿದೆ. 38 ಅಡಿ ವ್ಯಾಸದ ವೃತ್ತದಲ್ಲಿ ಹೆಸರು ಬೇಳೆಯನ್ನು ಹಸಿರು ಬಣ್ಣಕ್ಕೆ ಬಳಸಿದರೆ, ಬಿಳಿ ಬಣ್ಣವನ್ನು ಸೂಚಿಸಲು ಸಾಗುವನ್ನು ಬಳಸಲಾಗಿದೆ. ಕೇಸರಿ ಬಣ್ಣ ಸೂಚಿಸಲು ಕಡ್ಲೆ ಬೇಳೆಯನ್ನು ಉಪಯೋಗಿಸಲಾಗಿದೆ. ಅದರ ಸುತ್ತಲೂ ಬಾಳೆ ಎಲೆಯಲ್ಲಿ ಕಲಶಗಳನ್ನಿಟ್ಟು ವೀಳ್ಯದೆಲೆ ಮತ್ತು ಅಡಿಕೆ ಇರಿಸಲಾಗಿದೆ. ದೇವಸ್ಥಾನದ ಆವಣರಣ ಆಗಿರುವುದರಿಂದ ಧಾರ್ಮಿಕತೆಯ ಟಚ್ ಕೊಡಲಾಗಿದೆ.


ಕುದ್ರೋಳಿ ದೇವಸ್ಥಾನದ ರೂವಾರಿ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ದೀಪ ಬೆಳಗಿಸಿ, ಆಕರ್ಷಕ ತ್ರಿವರ್ಣವನ್ನು ಲೋಕಾರ್ಪಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಗುರು ಬೆಳದಿಂಗಳು ಸಂಸ್ಥೆಯ ಅಧ್ಯಕ್ಷ ಪದ್ಮರಾಜ್ ಆರ್., ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಕ್ಷೇತ್ರದ ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಮೊಂತೇರೊ, ಕಾರ್ಪೊರೇಟರ್ ಅನಿಲ್, ಲೀಲಾಕ್ಷ ಕರ್ಕೇರ, ಚಿತ್ತರಂಜನ್ ಗರೋಡಿ ಮತ್ತಿತರರಿದ್ದರು.
 
            
            
            To mark the Amrut Mahotsav (75th anniversary of the country's Independence), the Kudroli Shree Gokarnanatheshwara Temple Committee has drawn a 38 feet tricolor national flag with food grains (Dhanya) and vegetables on the premises of Kudroli Gokarnanatheshwara Temple here on Sunday, August 14.Former minister B Janardhan Poojary inaugurated the rangoli. He also greeted the public for the 75th anniversary of the country's Independence on the occasion.
 
    
            
             31-10-25 08:10 pm
                        
            
                  
                HK News Desk    
            
                    
 
    'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
 
    ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
 
    ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
 
    ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
 
    
            
             30-10-25 03:20 pm
                        
            
                  
                HK News Desk    
            
                    
 
    ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
 
    ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
 
    ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
 
    ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
 
    
            
             31-10-25 09:00 pm
                        
            
                  
                Mangalore Correspondent    
            
                    
 
    78 ಶೇ. ಜನರಿಗೆ ಎರಡು ವರ್ಷದಲ್ಲಿ 23 ಸಾವಿರ ಮಕ್ಕಳು,...
31-10-25 03:05 pm
 
    ಬಿಸಿ ರೋಡಿನಲ್ಲಿ ಆಂಬುಲೆನ್ಸ್ ಗೆ ಸೈಡ್ ಕೊಡದೆ ಸತಾಯಿ...
30-10-25 11:16 pm
 
    ಧರ್ಮಸ್ಥಳ ಪ್ರಕರಣ ; ಮಹೇಶ್ ಶೆಟ್ಟಿ ತಿಮರೋಡಿ ತಂಡಕ್ಕ...
30-10-25 08:06 pm
 
    ರಸ್ತೆ ಗುಂಡಿ ಮುಚ್ಚಿಸಲು ಹಣವಿಲ್ಲದ ಸರ್ಕಾರಕ್ಕೆ ಶಾಸ...
30-10-25 07:28 pm
 
    
            
             31-10-25 12:55 pm
                        
            
                  
                HK News Desk    
            
                    
 
    ಇಂಗ್ಲೆಂಡಿನಲ್ಲಿ ಉದ್ಯೋಗ ಆಮಿಷ ; ಮಂಗಳೂರು- ಉಡುಪಿಯ...
29-10-25 10:43 pm
 
    ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
 
    ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm
 
    ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm