ಮಂಡೇಲಾ ಬಿಟ್ಟರೆ 27 ವರ್ಷ ಜೈಲು ಅನುಭವಿಸಿದ್ದು ವೀರ ಸಾವರ್ಕರ್ ಮಾತ್ರ, ಅಪಮಾನಗೈದವರ ವಿರುದ್ಧ ದೇಶದ್ರೋಹ ಕೇಸು ದಾಖಲಿಸಿ ; ವಿಹಿಂಪ ಆಗ್ರಹ

16-08-22 07:20 pm       Mangalore Correspondent   ಕರಾವಳಿ

ನೆಲ್ಸನ್ ಮಂಡೇಲಾರನ್ನು ಬಿಟ್ಟರೆ ಜಗತ್ತಿನಲ್ಲಿ ಅತಿ ಹೆಚ್ಚು 27 ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ್ದು ಭಾರತದ ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್ ಮಾತ್ರ.

ಮಂಗಳೂರು, ಆಗಸ್ಟ್ 16: ನೆಲ್ಸನ್ ಮಂಡೇಲಾರನ್ನು ಬಿಟ್ಟರೆ ಜಗತ್ತಿನಲ್ಲಿ ಅತಿ ಹೆಚ್ಚು 27 ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ್ದು ಭಾರತದ ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್ ಮಾತ್ರ. ಅಂತಹ ಮೇರು ವ್ಯಕ್ತಿತ್ವವನ್ನು ಕೆಲವು ಕಾಂಗ್ರೆಸ್ ನಾಯಕರು, ಎಸ್ಡಿಪಿಐ ನಾಯಕರು ಹೀನವಾಗಿ ಚಿತ್ರಿಸುತ್ತಿದ್ದಾರೆ. ಈ ರೀತಿ ಅಪಮಾನಿಸುವ ವ್ಯಕ್ತಿಗಳ ವಿರುದ್ಧ ದೇಶದ್ರೋಹದ ಕೇಸು ದಾಖಲಿಸಬೇಕು ಎಂದು ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ದೇವಪ್ರಸಾದ್ ಶೆಟ್ಟಿ ಆಗ್ರಹಿಸಿದ್ದಾರೆ.

ನಗರದ ಕದ್ರಿಯಲ್ಲಿರುವ ವಿಎಚ್ ಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಅಭಿನವ ಭಾರತ ಎನ್ನುವ ಸಂಘಟನೆಯನ್ನು ಕಟ್ಟಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಬ್ರಿಟಿಷರ ನಾಡಿನಲ್ಲೇ ನಿಂತು ಕ್ರಾಂತಿಕಾರಿಗಳನ್ನು ಸಂಘಟಿಸಿದವರು ಸಾವರ್ಕರ್. ಇವರ ನೂರನೇ ಜನ್ಮದಿನದ ಸಂದರ್ಭದಲ್ಲಿ ಇಂದಿರಾ ಗಾಂಧಿಯವರು ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿದ್ದರು. ಆದರೆ ಈಗಿನ ಕೆಲವು ಕಾಂಗ್ರೆಸ್ ನಾಯಕರು, ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯರಂಥವರು ಸಾವರ್ಕರ್ ಬಗ್ಗೆ ಹೀನಾಯವಾಗಿ ಹೇಳಿಕೆ ನೀಡುತ್ತಿದ್ದಾರೆ. ಕೆಲವರು ಬೂಟು ನೆಕ್ಕುವವನು ಎಂದು ಹೇಳಿಕೆ ನೀಡಿದ್ದಾರೆ. ಯಾರೇ ಸ್ವಾತಂತ್ರ್ಯ ಸೇನಾನಿಗಳ ಬಗ್ಗೆ ಅವಾಚ್ಯವಾಗಿ ಹೇಳಿಕೆ ನೀಡುವ ಮಂದಿಯ ವಿರುದ್ಧ ದೇಶದ್ರೋಹ ಕೇಸು ದಾಖಲಿಸಬೇಕು. ಈ ಬಗ್ಗೆ ನಾವು ರಾಜ್ಯ ಸರಕಾರಕ್ಕೆ ಆಗ್ರಹ ಮಾಡುತ್ತೇವೆ ಎಂದು ಹೇಳಿದರು.

Bengaluru: Murderous attack on Tanveer Sait - Government mulling to ban SDPI?  - Daijiworld.com

ನಿನ್ನೆ ಗುರುಪುರದಲ್ಲಿ ಶಾಲಾ ಮಕ್ಕಳು ಪ್ರದರ್ಶಿಸಿದ ದೇಶಭಕ್ತಿ ಗೀತೆ ಸಾರುವ ನೃತ್ಯದಲ್ಲಿ ಸ್ವಾತಂತ್ರ್ಯ ಸೇನಾನಿಗಳ ಜೊತೆ ಸಾವರ್ಕರ್ ಫೋಟೊ ತೋರಿಸಿದರೆಂದು ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದ್ದಾರೆ. ಇದರ ಹಿಂದೆ ಎಸ್ಡಿಪಿಐ, ಪಿಎಫ್ಐನಂತಹ ಮತಾಂಧ ಶಕ್ತಿಗಳ ಕುಮ್ಮಕ್ಕು ಇದೆ. ಮಕ್ಕಳು ಸಾವರ್ಕರ್ ಫೋಟೊ ತೋರಿಸಿದ್ದಕ್ಕೆ ಶಿಕ್ಷಕರಿಂದ ಕ್ಷಮೆ ಕೇಳಿಸುವ ಕೃತ್ಯ ಮಾಡಿದ್ದನ್ನು ಸಹಿಸುವಂತಿಲ್ಲ. ಶಿವಮೊಗ್ಗದಲ್ಲಿ ಸಾವರ್ಕರ್ ಫೋಟೋ ಕಿತ್ತೆಸೆಯುವ ಕೃತ್ಯ ಮಾಡಿದ್ದಾರೆ. ಮತಾಂಧ ಶಕ್ತಿಗಳು ಸಾವರ್ಕರ್ ಅವರನ್ನು ಅವಮಾನಿಸುವ ಕೃತ್ಯ ಮಾಡಿದ್ದಾರೆ. ಮತಾಂಧರಿಗೆ ಬೆಂಬಲವಾಗಿ ನಿಂತಿರುವ ಎಸ್ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇಧ ಮಾಡಬೇಕು.

Bajrang Dal's 'firearm training' sparks row | Deccan Herald

ಬಜರಂಗದಳ ಮತ್ತು ವಿಶ್ವ ಹಿಂದು ಪರಿಷತ್ ವತಿಯಿಂದ ಮನೆ ಮನೆಗೆ ತೆರಳಿ ಸಾವರ್ಕರ್ ಬಗ್ಗೆ ತಿಳಿಸುವ ಕೆಲಸ ಮಾಡಲಿದ್ದೇವೆ. ಜಾಲತಾಣಗಳನ್ನು ಇದಕ್ಕಾಗಿ ಬಳಸಿಕೊಳ್ಳುತ್ತೇವೆ. ಆದರೆ, ಇಂಥ ಅತಿರೇಕ ಮೆರೆದವರನ್ನು ಸರಕಾರ ಹಾಗೇ ಬಿಡಬಾರದು. ಸಿದ್ದರಾಮಯ್ಯ ಸೇರಿದಂತೆ ಎಲ್ಲರ ವಿರುದ್ಧವೂ ಕೇಸು ದಾಖಲಿಸಬೇಕು. ಮೊನ್ನೆ ಕೇರಳದ ಕಣ್ಣೂರಿನಲ್ಲಿ ಒಬ್ಬಾತ ನಾವು ದನದ ಮಾಂಸ ತಿಂದು ದೇಹ ಬೆಳೆಸಿಕೊಂಡವರು, ನಿಮ್ಮಂತೆ ತಿಳಿ ಸಾಂಬಾರು ತಿಂದು ಬೆಳೆದಿದ್ದಲ್ಲ. ಬಹಿರಂಗವಾಗಿ ಸಮಾಜಕ್ಕೆ ಎಚ್ಚರಿಕೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಎಸ್ಡಿಪಿಐ ಮತ್ತು ಪಿಎಫ್ಐ ಸಮಾಜಕ್ಕೆ ಅಪಾಯಕಾರಿಯಾಗಿ ಬೆಳೆದಿದ್ದು, ಇವರ ಪಾಪದ ಕೊಡ ತುಂಬಿದೆ ಅನಿಸುತ್ತಿದೆ. ಮೋದಿ ನೇತೃತ್ವದ ಕೇಂದ್ರ ಸರಕಾರ ಇವುಗಳ ವಿರುದ್ಧ ದಂಡ ಬೀಸಲಿದೆ ಎಂಬ ವಿಶ್ವಾಸ ಇದೆ ಎಂದು ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.

ಫಾಜಿಲ್ ಹತ್ಯೆಯಲ್ಲಿ ಬಜರಂಗದಳದ ಪಾತ್ರದ ಬಗ್ಗೆ ಕೇಳಿದ ಪ್ರಶ್ನೆಗೆ, ನಾವು ಕೂಡ ಫಾಜಿಲ್ ಹತ್ಯೆಯನ್ನು ಖಂಡಿಸುತ್ತೇವೆ. ಯಾವುದೇ ಕಾರಣಕ್ಕೂ ಸಮರ್ಥಿಸುವುದಿಲ್ಲ. ಯಾರೋ ಪ್ರತೀಕಾರಕ್ಕಾಗಿ ಹತ್ಯೆ ಮಾಡಿದ್ದಾರೆ. ಅದಕ್ಕೂ ಬಜರಂಗದಳಕ್ಕೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಸರಕಾರವೇ ಕ್ರಮ ಜರುಗಿಸಿಲ್ಲ ಎಂಬ ಪ್ರಶ್ನೆಗೆ, ನಾವು ಕ್ರಮ ಜರುಗಿಸಬೇಕೆಂದು ಆಗ್ರಹ ಮಾಡುತ್ತೇವೆ. ಬಿಜೆಪಿ ಅನ್ನೋದು ಸ್ವತಂತ್ರ ಸಂಘಟನೆ. ನಮಗೂ ಅವರಿಗೂ ವೈಚಾರಿಕ ಸಾಮ್ಯತೆ ಇರಬಹುದು. ಬಿಜೆಪಿಗೂ ವಿಶ್ವ ಹಿಂದು ಪರಿಷತ್ತಿಗೂ ಸಂಬಂಧ ಇಲ್ಲ. ಎಸ್ಡಿಪಿಐ ನಿಷೇಧ ವಿಚಾರದಲ್ಲಿ ಕಾಂಗ್ರೆಸ್ ಆಗ್ರಹ ಮಾಡಿದ್ರೂ ಅವರಿಗೆ ನಾವು ಕೈಜೋಡಿಸುತ್ತೇವೆ ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಗೋಪಾಲ ಕುತ್ತಾರ್, ಭುಜಂಗ ಕುಲಾಲ್, ಪುನೀತ್ ಅತ್ತಾವರ ಇದ್ದರು.

Savarkar Banner row, cops should register anti national case against the accused demands VHP in Mangalore after a press meet held at their office. After Nelson Mandela it's only Vinayak Damodar Savarkar who was in jail for 27 years they added.