ಫಾಜಿಲ್, ಮಸೂದ್ ಸಾವಿನಲ್ಲಿ ತಾರತಮ್ಯ, ಪರಿಹಾರ ನೀಡದೆ ಅನ್ಯಾಯ ; ಮಂಗಳೂರಿನಲ್ಲಿ ಪ್ರತಿಭಟನೆ 

16-09-22 10:52 pm       Mangalore Correspondent   ಕರಾವಳಿ

ಫಾಝಿಲ್ ಹಾಗೂ ಮಸೂದ್ ಹತ್ಯೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ತಾರತಮ್ಯ ನೀತಿ ತೋರುತ್ತಿದೆ ಎಂದು ಆರೋಪಿಸಿ ಮುಸ್ಲಿಂ ಐಕ್ಯತಾ ವೇದಿಕೆ ನೇತೃತ್ವದಲ್ಲಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗಿದೆ.

ಮಂಗಳೂರು, ಸೆ.16 : ಫಾಝಿಲ್ ಹಾಗೂ ಮಸೂದ್ ಹತ್ಯೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ತಾರತಮ್ಯ ನೀತಿ ತೋರುತ್ತಿದೆ ಎಂದು ಆರೋಪಿಸಿ ಮುಸ್ಲಿಂ ಐಕ್ಯತಾ ವೇದಿಕೆ ನೇತೃತ್ವದಲ್ಲಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗಿದೆ. ನಗರದ ಕ್ಲಾಕ್ ಟವರ್ ಸರ್ಕಲ್ ನಲ್ಲಿ ಪ್ರತಿಭಟನಾ ಸಭೆ ನಡೆದಿದ್ದು ನೂರಾರು ಜನ ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.  

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಮನೆಗೆ ಮುಖ್ಯಮಂತ್ರಿ ಭೇಟಿ ನೀಡಿದ್ದಾರೆ. ಆದರೆ ಅದೇ ಸಂದರ್ಭದಲ್ಲಿ ಕೊಲೆಯಾದ ಮಸೂದ್ ಹಾಗು ಫಾಝಿಲ್ ಮನೆಗೆ ಭೇಟಿ ನೀಡದೆ ಮುಖ್ಯಮಂತ್ರಿ ಅನ್ಯಾಯ ಎಸಗಿದ್ದಾರೆ.‌ ಎನ್ಐಎ ತನಿಖೆ ಹೆಸರಲ್ಲಿ ನ್ಯಾಯದ ಧ್ವನಿಯನ್ನು ದಮನಿಸಲು ಯತ್ನಿಸಲಾಗುತ್ತಿದೆ. ಎನ್ಐಎ ಮೂಲಕ ಅಮಾಯಕರನ್ನು ಬಂಧಿಸಲಾಗುತ್ತಿದೆ‌ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಪ್ರವೀಣ್ ಕುಟುಂಬಕ್ಕೆ ಪರಿಹಾರ ನೀಡಿದ ಸರಕಾರ ಫಾಝಿಲ್ ಹಾಗು ಮಸೂದ್ ಕುಟುಂಬಕ್ಕೆ ಪರಿಹಾರ ಏಕೆ ನೀಡಿಲ್ಲ? ಮಸೂದ್ ಮತ್ತು ಫಾಝಿಲ್ ಹತ್ಯೆಗೆ ನ್ಯಾಯ ದೊರಕಿಸುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಪ್ರತಿಭಟನೆ ವೇಳೆ ನಾಯಕರು ಹೇಳಿದ್ದಾರೆ.

Surathkal zone Muslim Ikyatha Vedike staged a protest here at the clock tower on Friday, September 16 against the state government for showing allegedly bias in the investigation of Fazil murder case.Dakshina Kannada district had witnessed a series of murders in Bellare and Surathkal. Muslim Ikyatha Vedike alleged that there was discrimination shown by the government over the probe in the three murders that took place in the district.