ಪೋಷಕರ ಮೇಲಿನ‌ ಹಗೆ ;  ಮದರಸದಲ್ಲಿ ಅಪ್ರಾಪ್ತ ಬಾಲಕನಿಗೆ ಉಸ್ತಾದನಿಂದ ಹಲ್ಲೆ, ಆರೋಪಿ ಪೊಲೀಸ್ ವಶಕ್ಕೆ

18-09-22 05:29 pm       Mangalore Correspondent   ಕರಾವಳಿ

ಪೋಷಕರ ಮೇಲಿನ ವೈಯಕ್ತಿಕ ದ್ವೇಷದಿಂದ ಉಸ್ತಾದನೋರ್ವ ಮದರಸದ ಅಪ್ರಾಪ್ತ ವಿದ್ಯಾರ್ಥಿಗೆ ಬೆತ್ತದಲ್ಲಿ ಬಾಸುಂಡೆ ಬರುವ ಹಾಗೆ ಥಳಿಸಿದ್ದು ನೊಂದ ಬಾಲಕನ ತಂದೆ ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ. 

ಉಳ್ಳಾಲ: ಸೆ.18 : ಪೋಷಕರ ಮೇಲಿನ ವೈಯಕ್ತಿಕ ದ್ವೇಷದಿಂದ ಉಸ್ತಾದನೋರ್ವ ಮದರಸದ ಅಪ್ರಾಪ್ತ ವಿದ್ಯಾರ್ಥಿಗೆ ಬೆತ್ತದಲ್ಲಿ ಬಾಸುಂಡೆ ಬರುವ ಹಾಗೆ ಥಳಿಸಿದ್ದು ನೊಂದ ಬಾಲಕನ ತಂದೆ ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ. 

ಹರೇಕಳ ಗ್ರಾಮದ ದೇರಿಕಟ್ಟೆಯ, ಮಸ್ಜಿದ್ ಹುದಾ ಮದರಸದಲ್ಲಿ ನಿನ್ನೆ‌ ಸಂಜೆ 11 ರ ಪ್ರಾಯದ ಅಪ್ರಾಪ್ತ ಬಾಲಕನೋರ್ವನಿಗೆ ಉಸ್ತಾದನಾದ ಯಹ್ಯಾ ಪೈಝಿ ಎಂಬಾತ ಬಾಸುಂಡೆ ಬರೋ ರೀತಿ ಥಳಿಸಿದ್ದಾಗಿ ಆರೋಪಿಸಿ‌‌ ಕೊಣಾಜೆ ಠಾಣೆಯಲ್ಲಿ ನೊಂದ ಬಾಲಕನ ತಂದೆ ದೂರು ನೀಡಿದ್ದಾರೆ.

ಮದರಸದ ಆಡಳಿತ ಕಮಿಟಿಯ ಅಧ್ಯಕ್ಷರಾದ ಇಸ್ಮಾಯಿಲ್ ಮತ್ತು ಕಾರ್ಯದರ್ಶಿ ಬಶೀರ್ ಎಂಬವರಿಗೆ ಹಲ್ಲೆಗೊಳಗಾದ ಬಾಲಕನ ತಂದೆ ಮಹಮ್ಮದ್ ಮೇಲೆ ವೈಯಕ್ತಿಕ ದ್ವೇಷವಿದ್ದು ಅದನ್ನ ಉಸ್ತಾದ್ ಯಹ್ಯಾ ಮುಖೇನ‌ ತೀರಿಸಿದ್ದಾರೆಂದು ಮಹಮ್ಮದ್ ಆರೋಪಿಸಿದ್ದಾರೆ. ಆರೋಪಿ ಉಸ್ತಾದ್ ಯಹ್ಯಾ ಫೈಝಿ ಬಾಲಕನ ಕೈ , ಕಾಲುಗಳಿಗೆ ನಾಗರ ಬೆತ್ತದಲ್ಲಿ ಬಾಸುಂಡೆ ಬರುವಂತೆ ಹೊಡೆದು ಹಲ್ಲೆಗೈದಿದ್ದಾನೆ. ಹಲ್ಲೆಗೊಳಗಾದ ಬಾಲಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾನೆ.ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿ ಉಸ್ತಾದನ ಬಂಧನಕ್ಕೆ ಬಲೆ ಬೀಸಿದ್ದಾರೆ.ಕೊಣಾಜೆ ಪೊಲೀಸರು ಆರೋಪಿ ಉಸ್ತಾದನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

A complaint has been lodged in Ullal police station by a man accusing a teacher of Madrasa school of assaulting his son. Complainant Mohammed (42), a resident of Derikatte, Harekala village of Ullal has alleged that his son Hafeel Ahmed (11) was assaulted by Ustad Yahya Faizi, teacher at Masjid Hudha Derikatte Al Hudha Madrasa.