ಬ್ರೇಕಿಂಗ್ ನ್ಯೂಸ್
23-09-22 10:56 pm Mangalore Correspondent ಕರಾವಳಿ
ಮಂಗಳೂರು, ಸೆ.23: ದಸರಾ ಹಿನ್ನೆಲೆಯಲ್ಲಿ ಮಂಗಳೂರು ತಾಲೂಕು ವ್ಯಾಪ್ತಿಗೆ ಸಂಬಂಧಿಸಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ನಾಲ್ಕು ದಿನಗಳ ಹೆಚ್ಚುವರಿಯಾಗಿ ದಸರಾ ರಜೆಯನ್ನು ನೀಡಲಾಗಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯಿಂದ ಸೆ.28ರಿಂದ ಅ.1ರ ವರೆಗೆ ನಾಲ್ಕು ದಿನಗಳ ಹೆಚ್ಚುವರಿ ರಜೆ ಘೋಷಿಸಿ ಆದೇಶ ಮಾಡಲಾಗಿದೆ.
ದಸರಾ ರಜೆಯನ್ನು ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ ಅ.3ರಿಂದ 16ರ ವರೆಗೆ ನಿಗದಿ ಪಡಿಸಲಾಗಿದೆ. ಆದರೆ ಮಂಗಳೂರಿನಲ್ಲಿ ಸೆ.26ರಿಂದಲೇ ಕುದ್ರೋಳಿ, ಮಂಗಳೂರು ದಸರಾ ಉತ್ಸವ ಇರುವುದರಿಂದ ಅದೇ ಸಂದರ್ಭದಲ್ಲಿ ರಜೆ ನೀಡಬೇಕೆಂದು ಒತ್ತಾಯ ಕೇಳಿಬಂದಿತ್ತು. ಇದಕ್ಕೆ ಪೂರಕವಾಗಿ ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್, ಶಿಕ್ಷಣ ಸಚಿವರಿಗೂ ಮನವಿ ನೀಡಿದ್ದರು. ಅದರಂತೆ, ಜಿಲ್ಲಾಧಿಕಾರಿಗಳು ಮಂಗಳೂರಿನ ಮಟ್ಟಿಗೆ ರಜೆಯನ್ನು ಸೆ.26ರಿಂದ ಅ.10ರ ವರೆಗೆ ಮಾಡಬಹುದೆಂದು ಶಿಕ್ಷಣ ಸಚಿವರು ಸೂಚನೆ ನೀಡಿದ್ದರು. ಅದನ್ನೇ ಅನುಸರಿಸಿ ಕೆಲವು ಖಾಸಗಿ ಶಾಲೆಗಳು ಈಗಾಗಲೇ ಸೆ.27ರಿಂದ ತೊಡಗಿ ಅ.10ರ ವರೆಗೆ ರಜೆ ನೀಡಲು ಮುಂದಾಗಿತ್ತು.
ಆದರೆ ಇದರ ನಡುವೆಯೇ ಶಿಕ್ಷಣ ಇಲಾಖೆಯಿಂದ ಮಂಗಳೂರು ತಾಲೂಕು ವ್ಯಾಪ್ತಿಗೆ ಸಂಬಂಧಿಸಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳಿಗೆ ನವರಾತ್ರಿ ಹಬ್ಬದ ಆಚರಣೆಗೆ ಪೂರಕವಾಗುವಂತೆ ದಸರಾ ರಜೆಯನ್ನು ಸೆ.28ರಿಂದ ಅ.1ರ ವರೆಗೆ ಹೆಚ್ಚುವರಿಯಾಗಿ ನಾಲ್ಕು ದಿನಗಳ ಕಾಲ ನೀಡಲು ಆದೇಶ ಮಾಡಲಾಗಿದೆ. ಇದರ ನಡುವೆ ಅ.2ರಂದು ಮಹಾತ್ಮ ಗಾಂಧಿ ಜಯಂತಿಯನ್ನು ಶಾಲೆಯಲ್ಲಿ ಆಚರಣೆ ಮಾಡಬೇಕು. ಮತ್ತು ಹೆಚ್ಚುವರಿ ನೀಡಿರುವ ರಜೆಗಳನ್ನು ನವೆಂಬರ್ ತಿಂಗಳಲ್ಲಿ ಶನಿವಾರ ಪೂರ್ತಿ ತರಗತಿ ನಡೆಸುವ ಮೂಲಕ ಸರಿದೂಗಿಸಬೇಕು ಎಂದು ಸೂಚಿಸಲಾಗಿದೆ.
Mangalore Dasara 2022, extra 4 days holidays for schools ordered by the Education department. With Mangaluru Dasara beginning from September 26, holidays have been declared for all primary and high school students from September 28 to October 16.
04-06-23 10:36 pm
HK News Desk
ಈ ಹಿಂದೆ ಹಿಜಾಬ್, ಹಲಾಲ್ ಎಂದು ಗಲಾಟೆ ಮಾಡಿದ್ದೀರಿ,...
04-06-23 10:19 pm
ಸರ್ಕಾರಿ ಬಸ್ಸಲ್ಲಿ ಉಚಿತ ಪ್ರಯಾಣಕ್ಕೂ ಟಿಕೆಟ್ ಪಡೆಯಲ...
04-06-23 03:40 pm
Mandya Accident: ಮಂಡ್ಯ; ಲಾರಿಗೆ ಡಿಕ್ಕಿ ಹೊಡೆದ ಕ...
04-06-23 02:32 pm
ಎಮ್ಮೆ- ಕೋಣ ಕಡಿಯಬಹುದಾದರೇ ಹಸುವನ್ನು ಏಕೆ ಕಡಿಯಬಾರದ...
03-06-23 10:45 pm
04-06-23 11:01 pm
HK News Desk
ಮದುವೆ ಮೊದಲ ರಾತ್ರಿ ರೂಮ್ ಒಳಗೆ ಹೋದ ದಂಪತಿ ಬೆಳಿಗ್ಗ...
04-06-23 10:15 pm
Train Accident to CBI: ಬಾಲಾಸೋರ್ ರೈಲು ದುರಂತ ತನ...
04-06-23 08:55 pm
ತ್ರಿವಳಿ ರೈಲು ಅಪಘಾತದ ಮೂಲ ಕಾರಣ ಪತ್ತೆ ; ಎಲೆಕ್ಟ್ರ...
04-06-23 06:45 pm
PM Modi visits Odisha crash site: ರೈಲು ಅಪಘಾತಕ...
03-06-23 09:04 pm
04-06-23 07:21 pm
Mangalore Correspondent
Mangalore Moral Policing: 'ನೈತಿಕ ಪೊಲೀಸ್' ಕೃತ್...
04-06-23 02:35 pm
ಪತಂಜಲಿ ರುಚಿ ಗೋಲ್ಡ್ ಘಟಕದಿಂದ ಫಲ್ಗುಣಿ ನದಿಗೆ ಜಿಡ್...
03-06-23 10:33 pm
ಬಹುಕಾಲದ ಬಳಿಕ ಜನರ ಸಮಸ್ಯೆ ಆಲಿಸಿದ ಪೊಲೀಸ್ ಕಮಿಷನರ್...
03-06-23 09:21 pm
ಸ್ವತಂತ್ರ ಭಾರತದಲ್ಲಿ ಸಿದ್ದರಾಮಯ್ಯ ಕ್ರಾಂತಿ ಎಬ್ಬಿಸ...
03-06-23 08:09 pm
04-06-23 02:14 pm
Mangalore Correspondent
ತರೀಕೆರೆ ಕಾಂಗ್ರೆಸ್ ಶಾಸಕರ ಅಭಿನಂದನ ಕಾರ್ಯಕ್ರಮದಲ್ಲ...
04-06-23 12:47 pm
ಹಿಂದು ಹೆಸರಲ್ಲಿ ಪ್ರೇಮಿಸಿ ಯುವತಿಯರ ಬ್ಲಾಕ್ಮೇಲ್ ;...
03-06-23 08:51 pm
ನೈತಿಕ ಪೊಲೀಸ್ ಗಿರಿ ; ಮತ್ತಿಬ್ಬರ ಸೆರೆ, ಬಂಧಿತರ ಸಂ...
02-06-23 10:32 pm
ದಾವಣಗೆರೆ ; ಹಠ ಮಾಡುವ ಮಕ್ಕಳು ಬೇಡಾ ; ಕಾರಿನಲ್ಲೇ ಅ...
01-06-23 09:39 pm