ಅಯೂಬ್ ಅಗ್ನಾಡಿ ಪೊಲೀಸ್ ಕಸ್ಟಡಿಗೆ ; ಮಿತ್ತೂರು ಕಮ್ಯುನಿಟಿ ಹಾಲ್ ಗೆ ಕರೆತಂದು ವಿಚಾರಣೆ, ಹಾಲ್ ಕಟ್ಟಡಕ್ಕೆ ಬೀಗ ಜಡಿದ ಅಧಿಕಾರಿಗಳು 

01-10-22 01:39 pm       Mangalore Correspondent   ಕರಾವಳಿ

ಪಿಎಫ್ಐ ವಿರುದ್ಧದ ಪ್ರಕರಣದಲ್ಲಿ ಬಂಧಿತನಾಗಿರುವ ಉಪ್ಪಿನಂಗಡಿ ಮೂಲದ ಅಯೂಬ್ ಅಗ್ನಾಡಿ ಎಂಬಾತನನ್ನು ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆ ಪೊಲೀಸರು  ವಿಟ್ಲ ಸಮೀಪದ ಮಿತ್ತೂರಿಗೆ ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ.

ಪುತ್ತೂರು, ಸೆ.30 : ಪಿಎಫ್ಐ ವಿರುದ್ಧದ ಪ್ರಕರಣದಲ್ಲಿ ಬಂಧಿತನಾಗಿರುವ ಉಪ್ಪಿನಂಗಡಿ ಮೂಲದ ಅಯೂಬ್ ಅಗ್ನಾಡಿ ಎಂಬಾತನನ್ನು ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆ ಪೊಲೀಸರು  ವಿಟ್ಲ ಸಮೀಪದ ಮಿತ್ತೂರಿಗೆ ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ. 

ಆರೋಪಿಯನ್ನು ಮಿತ್ತೂರಿನ ಫ್ರೀಡಂ ಕಮ್ಯೂನಿಟಿ ಹಾಲ್ ಗೆ ಕರೆತಂದು ಪೊಲೀಸರು ಮಹಜರು ನಡೆಸಿದ್ದಾರೆ.‌ ಬೆಂಗಳೂರಿನ‌ ಕೆ.ಜೆ. ಹಳ್ಳಿ ಠಾಣೆಯಲ್ಲಿ ದಾಖಲಾದ ಎಫ್ಐಆರ್ ಸಂಬಂಧಿಸಿ ಪೊಲೀಸರು ಮತ್ತು ಎನ್ಐಎ ಅಧಿಕಾರಿಗಳು ಸೆ.22 ರಂದು ದಾಳಿ ನಡೆಸಿ ಅಯೂಬ್ ಅಗ್ನಾಡಿಯನ್ನು ಬಂಧಿಸಿದ್ದರು. ಅಂದು ರಾಜ್ಯಾದ್ಯಂತ 15 ಮಂದಿಯನ್ನು ಬಂಧಿಸಲಾಗಿತ್ತು. ಅವರನ್ನು ಗುರುವಾರ ಬೆಂಗಳೂರು ಪೊಲೀಸರು ಕಸ್ಟಡಿಗೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಈ ಪೈಕಿ ಆಯೂಬ್ ಅಗ್ನಾಡಿಯನ್ನು ವಿಚಾರಣೆ ನಡೆಸಿದಾಗ ಇಡ್ಕಿದು ಗ್ರಾಮದ ಮಿತ್ತೂರಿನಲ್ಲಿರವ ಫ್ರೀಡಂ ಕಮ್ಯೂನಿಟಿ ಹಾಲ್ ನಲ್ಲಿ ನಡೆಯುತ್ತಿದ್ದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ್ದ ಎನ್ನಲಾಗಿದೆ. 

ಫ್ರೀಡಂ ಕಮ್ಯೂನಿಟಿ ಹಾಲ್ ಗೆ ಬೀಗ 

ಈ ನಡುವೆ, ಇಡ್ಕಿದು ಗ್ರಾಮದ ಮಿತ್ತೂರಿನಲ್ಲಿರುವ ಫ್ರೀಡಂ ಕಮ್ಯೂನಿಟಿ ಹಾಲ್ ಗೆ ಬೀಗ ಜಡಿಯಲಾಗಿದೆ. ಪಿಎಫ್ ಐ ಸಂಘಟನೆಯ ಕಾರ್ಯಕರ್ತರಿಗೆ ಕಮ್ಯೂನಿಟಿ ಹಾಲ್ ನಲ್ಲಿ ತರಬೇತಿ ನೀಡಲಾಗಿತ್ತು ಎನ್ನುವ ಆರೋಪದಂತೆ ಬೀಗ ಜಡಿಯಲಾಗಿದೆ ಎನ್ನಲಾಗಿದೆ.

The National Investigation Agency (NIA) raided Freedom Community Hall at Mittur in Bantwal taluk on Friday September 30, suspecting training of Popular Front of India (PFI) workers and arrested Ayub Agnadi, one of the trustees and have brought him to Bantwal community hall for spot Majzar as investigation is on.