ಬ್ರೇಕಿಂಗ್ ನ್ಯೂಸ್
24-11-22 04:14 pm Mangalore Correspondent ಕರಾವಳಿ
ಮಂಗಳೂರು, ನ.24: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಮೊಹಮ್ಮದ್ ಶಾರೀಕ್ ಮಂಗಳೂರಿಗೆ ತಲುಪಿದ ಕೂಡಲೇ ಮಣ್ಣಗುಡ್ಡ ಸ್ಥಳದ ಬಗ್ಗೆ ಎರಡು ಬಾರಿ ಲೊಕೇಶನ್ ಟ್ರೇಸ್ ಮಾಡಿದ್ದಾನೆ. ತನಿಖಾ ತಂಡ ಆತನ ಮೊಬೈಲನ್ನು ಚೆಕ್ ಮಾಡಿದಾಗ ಮಹತ್ವದ ಮಾಹಿತಿಗಳು ಹೊರಬಂದಿದ್ದು, ಆತನ ಟಾರ್ಗೆಟ್ ಮಣ್ಣಗುಡ್ಡ ಆಗಿತ್ತೇ ಎನ್ನುವ ಸಂಶಯ ಮೂಡಿದೆ.
ಯಾಕಂದ್ರೆ, ನ.19ರಂದು ಮಣ್ಣಗುಡ್ಡದಲ್ಲಿ ಕನ್ನಡ ಹಬ್ಬ ಅನ್ನುವ ಶಾಲಾ ಮಕ್ಕಳ ಕಾರ್ಯಕ್ರಮ ಇತ್ತು. ಜೊತೆಗೆ, ಅದೇ ಪಕ್ಕದಲ್ಲಿ ಮುಖ್ಯಮಂತ್ರಿ ಕಾರ್ಯಕ್ರಮವೂ ನಡೆದಿತ್ತು. ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜಿಲ್ಲೆಯ ವಿವಿಧೆಡೆಯಿಂದ ಮಕ್ಕಳು ಸೇರಿದ್ದರು. ಕನ್ನಡ ಶಾಲೆಗಳ ಮಕ್ಕಳನ್ನು ಒಟ್ಟು ಸೇರಿಸಿ ಆರೆಸ್ಸೆಸ್ ಅಧೀನದಲ್ಲಿರುವ ಮಣ್ಣಗುಡ್ಡದ ಸಂಘನಿಕೇತನದಲ್ಲಿ ಕಾರ್ಯಕ್ರಮ ಮಾಡಲಾಗಿತ್ತು. ಮಣ್ಣಗುಡ್ಡ ಪಕ್ಕದಲ್ಲೇ ಇರುವ ಕರಾವಳಿ ಉತ್ಸವ ಮೈದಾನದಲ್ಲಿ ಮುಖ್ಯಮಂತ್ರಿ ಪಾಲ್ಗೊಳ್ಳುವ ಕಾರ್ಯಕ್ರಮ ಏರ್ಪಾಡಾಗಿತ್ತು. ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಅನಾವರಣ ಹೆಸರಲ್ಲಿ 20 ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಬೃಹತ್ ಕಾರ್ಯಕ್ರಮ ಮಾಡಲಾಗಿತ್ತು.

ಉಗ್ರ ಶಾರೀಕ್ ಮಂಗಳೂರಿಗೆ ಬರುವುದಕ್ಕೂ ಮುನ್ನ ವಿವಿಧ ಕಡೆಯ ಎಂಟತ್ತು ಬಾರಿ ಲೊಕೇಶನ್ ಹುಡುಕಾಟ ನಡೆಸಿದ್ದ. ಎಷ್ಟು ಹೊತ್ತಿಗೆ ಈ ಸ್ಥಳಗಳಿಗೆ ತಲುಪಬಹುದು ಅನ್ನುವ ಬಗ್ಗೆ ಲೆಕ್ಕ ಹಾಕಿದ್ದ. ಆದರೆ ಮೈಸೂರಿನಿಂದ ಮಡಿಕೇರಿ, ಪುತ್ತೂರು ಆಗಿ ಮಂಗಳೂರಿಗೆ ಬಸ್ ತಲುಪಿದಾಗಲೇ ಲೇಟ್ ಆಗಿದ್ದರಿಂದ ಪ್ಲಾನ್ ಕೈಕೊಟ್ಟಿತ್ತು ಎನ್ನಲಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ಕಾರ್ಯಕ್ರಮ ಮುಗಿಸಿ ಮಧ್ಯಾಹ್ನವೇ ತೆರಳಿದ್ದರು. ಶಾಲಾ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿಯೂ ಸಂಜೆ ಹೊತ್ತಿಗೆ ಮಕ್ಕಳು ನಿರ್ಗಮಿಸಿದ್ದರು. ಆದರೆ ಆತನ ಗೂಗಲ್ ಸರ್ಚ್ ಹಿಸ್ಟರಿಯಲ್ಲಿ ಎರಡು ಬಾರಿ ಮಣ್ಣಗುಡ್ಡ- ಗಾಂಧಿನಗರ ಲೊಕೇಶನ್ ತೋರಿಸಿತ್ತು ಅನ್ನುವುದು ಶಾರೀಕ್ ಗುರಿ ಇದೇ ಜಾಗ ಆಗಿತ್ತಾ ಅನ್ನುವ ಶಂಕೆ ಮೂಡಿಸಿದೆ.
ಇವೆಲ್ಲ ಸಂದೇಹ, ಪ್ರಶ್ನೆಗಳಿಗೆ ಉತ್ತರವನ್ನು ಉಗ್ರ ಶಾರೀಕ್ ನೀಡಬೇಕಾಗಿದೆ. ಆದರೆ, ವೈದ್ಯರ ಮಾಹಿತಿ ಪ್ರಕಾರ ಸುಟ್ಟ ಗಾಯಗಳಿಂದ ಪಾರಾಗಬೇಕಿದ್ದರೆ ಕನಿಷ್ಠ 25 ದಿನಗಳು ಬೇಕಂತೆ. ಅಲ್ಲದೆ, ಬಾಂಬ್ ಸ್ಫೋಟ ಸಂದರ್ಭದಲ್ಲಿ ಬಿಸಿ ಹೊಗೆ ಬಾಯಿ ಒಳಗೆ ಹೋಗಿರುವುದರಿಂದ ಗಂಟಲು ಇನ್ಫೆಕ್ಷನ್ ಆಗಿದೆ. ಅದರಿಂದಾಗಿ ಸದ್ಯಕ್ಕೆ ಮಾತನಾಡುವ ಸ್ಥಿತಿಯಲ್ಲಿಲ್ಲ. ಒಂದು ತಿಂಗಳ ನಿರಂತರ ಚಿಕಿತ್ಸೆಯ ನಂತರವೇ ಆತ ಸ್ವಸ್ಥನಾದಲ್ಲಿ ಒಂದಷ್ಟು ಪ್ರಶ್ನೆಗಳಿಗೆ ಉತ್ತರ ನೀಡಬಹುದು ಅನ್ನುವ ಲೆಕ್ಕಾಚಾರ ಇದೆ. ಏನಿದ್ದರೂ ಮೆಡಿಕಲೀ ಫಿಟ್ ಎಂದು ವೈದ್ಯರು ಸರ್ಟಿಫಿಕೇಟ್ ನೀಡದ ಹೊರತು ತನಿಖಾಧಿಕಾರಿಗಳು ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಸದ್ಯಕ್ಕೆ ಶಾರೀಕ್ ಚಿಕಿತ್ಸೆಯನ್ನೇ ತನಿಖಾಧಿಕಾರಿಗಳು ಟಾರ್ಗೆಟ್ ಮಾಡಿದ್ದಾರೆ.
Autorickshaw bomb blast in Mangalore, Bomber Shariq location traced at Mangaladevi temple, did he plan for blast is the doubt police have got.
19-01-26 08:42 pm
Bangalore Correspondent
ಐಪಿಎಸ್ ರಾಮಚಂದ್ರ ರಾವ್ ಸರಸ ವಿಡಿಯೋ ; ಎಷ್ಟೇ ದೊಡ್ಡ...
19-01-26 08:34 pm
ಕಚೇರಿಯಲ್ಲೇ ಡಿಜಿಪಿ ರಾಮಚಂದ್ರ ರಾವ್ ಬೆತ್ತಲೆ, ರಾಸ...
19-01-26 05:04 pm
ಲಕ್ಕುಂಡಿ ಗ್ರಾಮದಲ್ಲಿ ಸಾವಿರ ಕೇಜಿಯ ಶಿವಲಿಂಗ ಇದೆ ;...
19-01-26 03:33 pm
ಶಾಲೆಗೆ ಬಿಡಲು ಹೋಗ್ತಿದ್ದಾಗ ಕಾಲೇಜು ಬಸ್ ಡಿಕ್ಕಿ ;...
19-01-26 03:08 pm
18-01-26 08:20 pm
HK News Desk
ಗ್ರೀನ್ಲ್ಯಾಂಡ್ ವಶಕ್ಕೆ ವಿರೋಧ ; ನ್ಯಾಟೋ ಮಿತ್ರ ರಾ...
18-01-26 06:03 pm
President Donald Trump: ಅಮೆರಿಕದ ಸುಂಕ ಬರೆಗೆ ಭಾ...
18-01-26 11:47 am
ಕುಂಬ್ಡಾಜೆ ; ಕರಿಮಣಿ ಸರ ಎಗರಿಸಲು ಮಹಿಳೆಯ ಕತ್ತು ಹಿ...
17-01-26 03:08 pm
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
18-01-26 09:58 pm
Mangalore Correspondent
ಸೇಂಟ್ ಅಲೋಶಿಯಸ್ ಶಾಲೆಯಲ್ಲಿ ವಿಶೇಷ ಚೇತನ ಮಕ್ಕಳೊಂದಿ...
17-01-26 05:12 pm
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
19-01-26 04:16 pm
HK News Desk
ದೆಹಲಿ ಮೆಟ್ರೋ ರೈಲಿನಲ್ಲಿ ಅಮೆರಿಕ ಮೂಲದ ಮಹಿಳೆಗೆ ಲೈ...
19-01-26 03:38 pm
Mangalore Crime, Konaje Police: ಕಾಂಗ್ರೆಸ್ ಕಾರ...
18-01-26 12:58 pm
Mandya Murder: ಆಸ್ತಿ ವಿಚಾರಕ್ಕೆ ಗಲಾಟೆ ; ನಾಲ್ಕು...
16-01-26 09:01 pm
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm