ಪಣಂಬೂರಿನಲ್ಲಿ ನೀರು ಪಾಲಾಗುತ್ತಿದ್ದ ಹೊಸಪೇಟೆ ಮೂಲದ ಯುವಕನ ರಕ್ಷಣೆ

17-10-20 05:00 pm       Mangalore Correspondent   ಕರಾವಳಿ

ಪಣಂಬೂರು ಬೀಚ್ ಪ್ರವಾಸ ಬಂದಿದ್ದ ವೇಳೆ ನೀರುಪಾಲಾಗುತ್ತಿದ್ದ ಯುವಕನನ್ನು ರಕ್ಷಣಾ ತಂಡ ರಕ್ಷಣೆ ಮಾಡಿದೆ. 

ಮಂಗಳೂರು, ಅಕ್ಟೋಬರ್ 17: ಪಣಂಬೂರು ಬೀಚ್ ಪ್ರವಾಸ ಬಂದಿದ್ದ ವೇಳೆ ನೀರುಪಾಲಾಗುತ್ತಿದ್ದ ಹೊಸಪೇಟೆ ಮೂಲದ ಯುವಕನನ್ನು ರಕ್ಷಣಾ ತಂಡ ರಕ್ಷಣೆ ಮಾಡಿದೆ. 

ಬಳ್ಳಾರಿಯ ಹೊಸಪೇಟೆ ಮೂಲದ ಅಜಿತ್, ತನ್ನ ನಾಲ್ವರು ಗೆಳೆಯರ ಜೊತೆ ಪ್ರವಾಸ ಬಂದಿದ್ದರು. ಈ ವೇಳೆ, ಪಣಂಬೂರು ಬೀಚ್ ತೆರಳಿದ್ದು ಅಲ್ಲಿ ನೀರಾಟಕ್ಕೆ ಇಳಿದಿದ್ದರು. ಆದರೆ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಅಜಿತ್ ನೀರಿಗೆ ಬಿದ್ದಿದ್ದು ಕೂಡಲೇ ಅಲ್ಲಿದ್ದ ರಕ್ಷಣಾ ತಂಡ ನೀರಿಗೆ ಧುಮುಕಿ ಅಜಿತ್ ಅವರನ್ನು ರಕ್ಷಿಸಿದೆ. 

ಪಣಂಬೂರಿನ ಜೀವರಕ್ಷಕ ತಂಡ ಈವರೆಗೆ 350ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿದೆ. ಜೀವರಕ್ಷಕ ಪಡೆ ಮತ್ತು ಪಣಂಬೂರು ಬೀಚ್ ನೋಡಿಕೊಳ್ಳುತ್ತಿದ್ದ ಅಭಿವೃದ್ಧಿ ಪ್ರಾಧಿಕಾರದ ಗುತ್ತಿಗೆ ಮುಗಿದಿದ್ದು ಜಿಲ್ಲಾಡಳಿತ ಹೊಸ ಕಂಪನಿಯನ್ನು ನೇಮಕ ಮಾಡಬೇಕಿದೆ.

The Panambur Beach Lifegaurds have rescued a youth who was drowning in the sea. Youth named Ajith from Bellary had come along with his four friends to the beach.