ಬ್ರೇಕಿಂಗ್ ನ್ಯೂಸ್
29-04-23 06:02 pm Mangaluru Correspondent ಕರಾವಳಿ
ಪುತ್ತೂರು, ಎ.29: ದೇವದುರ್ಲಭ, ನಿಸ್ವಾರ್ಥ ಕಾರ್ಯಕರ್ತರನ್ನು ಗುಲಾಮನನ್ನಾಗಿ ಪರಿಗಣಿಸಿದರೆ, ಅದಕ್ಕೆ ಈ ಸಮಾಜ ಉತ್ತರ ಕೊಡುತ್ತದೆ ಎನ್ನುವುದನ್ನು ಪುತ್ತೂರಿನಿಂದ ದೆಹಲಿ ವರೆಗೆ ತೋರಿಸಬೇಕಾಗಿದೆ. ಯಾರೆಲ್ಲ ನನ್ನ ಮೇಲಾಗಲೀ, ಕಾರ್ಯಕರ್ತರ ಮೇಲಾಗಲೀ ಆರೋಪ ಮಾಡಿದ್ದಾರೋ ಅವರಿಗೆ ಮಹಾಲಿಂಗೇಶ್ವರನೇ ಉತ್ತರ ಕೊಡುತ್ತಾನೆ ಎಂದು ಪುತ್ತೂರಿನ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಹೇಳಿದ್ದಾರೆ.
ಪುತ್ತೂರಿನಲ್ಲಿ ನಡೆದ ಸೀತಾ ಪರಿವಾರ ಕಾರ್ಯಕ್ರಮದಲ್ಲಿ ಸೇರಿದ ನೂರಾರು ಮಹಿಳಾ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಭ್ರಷ್ಟಾಚಾರ, ದಾರ್ಷ್ಟ್ಯದ ಮೂಲಕ ಕಾರ್ಯಕರ್ತರನ್ನು ಹತ್ತಿಕ್ಕುವ ಸನ್ನಿವೇಶವನ್ನು ನಾವು ಎದುರಿಸುತ್ತಿದ್ದೇವೆ. ಕಾರ್ಯಕರ್ತರು ಅಂದರೆ, ಗುಲಾಮರು ಅನ್ನುವಂತಹ ಸ್ಥಿತಿಯನ್ನು ನೋಡುತ್ತಿದ್ದೇವೆ. ಆದರೆ ನಾವು ಗುಲಾಮರು ಅಲ್ಲ ಅನ್ನುವುದನ್ನು ತೋರಿಸಬೇಕಾಗಿದೆ. ಅಧಿಕಾರಕ್ಕಾಗಿ ನಾವು ಚುನಾವಣೆಗೆ ಇಳಿದಿಲ್ಲ. ಶಾಸಕನಾಗಿ ಮೆರೆಯಬೇಕೆಂಬ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಕಾರ್ಯಕರ್ತರ ನೋವು- ನಲಿವುಗಳ ಪರವಾಗಿ ನಿಲ್ಲಬೇಕು, ಅವರ ಪ್ರತೀಕವಾಗಿ ವಿಧಾನಸಭೆಯಲ್ಲಿ ಧ್ವನಿ ಎತ್ತಬೇಕು ಎಂಬ ಉದ್ದೇಶದಿಂದ ಚುನಾವಣೆ ಸ್ಪರ್ಧಿಸುತ್ತಿದ್ದೇನೆ.


ಬಾಳಿ ಬದುಕಬೇಕಿದ್ದ ಅಕ್ಷತಾ ಎನ್ನುವ ಹೆಣ್ಣು ಮಗಳ ಕೊಲೆಯಾದ ಸಂದರ್ಭದಲ್ಲಿ ಆಕೆಯ ಕುಟುಂಬಕ್ಕೆ ನ್ಯಾಯ ದೊರಕಿಸಲು ನಮ್ಮಿಂದ ಸಾಧ್ಯವಾಗಿಲ್ಲ. ಸೌಮ್ಯ ಭಟ್ ಕೊಲೆಯಾದಾಗ ನ್ಯಾಯ ದೊರಕಿಸಲು ಈ ಸಮಾಜದಿಂದ ಸಾಧ್ಯವಾಗಿಲ್ಲ. ಸೀತಾ ಮಾತೆಯ ಆದರ್ಶ ಇಟ್ಟುಕೊಂಡ ಮಹಿಳೆಯರು ಮನಸ್ಸು ಮಾಡಿದರೆ, ಸಮಾಜದಲ್ಲಿ ಬದಲಾವಣೆ ತರಬಹುದು. ಸಮಾಜದಲ್ಲಿ ಹೊಸ ಧ್ವನಿ ಎತ್ತಬಹುದಾಗಿದೆ. ಅಧಿಕಾರಕ್ಕಾಗಿ ರಾಜಕಾರಣ ಮಾಡಬಾರದು. ಆದರೆ ಅಧಿಕಾರ ಸಿಕ್ಕ ಸಂದರ್ಭದಲ್ಲಿ ನಾವು ಹಿಂದುತ್ವ ಮರೆಯಬಾರದು ಎಂದರು ಪುತ್ತಿಲ.

ಈಗ ಸಾಮಾಜಿಕ ಜಾಲತಾಣದಲ್ಲಿ ನೂರಕ್ಕೂ ಹೆಚ್ಚು ಫೇಕ್ ಖಾತೆಗಳ ಮೂಲಕ ನಮ್ಮ ಕಾರ್ಯಕರ್ತರ ಮಾನಸಿಕ ಸ್ಥಿತಿಯನ್ನು ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ. ಸುದ್ದಿಗೋಷ್ಟಿ ಕರೆದು ಅಭ್ಯರ್ಥಿಯ ತೇಜೋವಧೆ ಮಾಡಿ, ಮಾನಸಿಕ ಸ್ಥಿತಿಯನ್ನು ಕುಗ್ಗಿಸುತ್ತಿದ್ದಾರೆ. ಅಧಿಕಾರ ನಮ್ಮಲ್ಲಿ ಇಲ್ಲ. ಹಣದ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಸನಾತನ ಧರ್ಮ ಪರಂಪರೆ ಪುತ್ತೂರಿನಲ್ಲಿದೆ. ಸೆರಗೊಡ್ಡಿ ಕೇಳುತ್ತೇನೆ. ನಿಮ್ಮ ಒಂದು ಮತದ ಜೊತೆಗೆ ಹತ್ತು ರೂ. ಕೊಟ್ಟು ನನ್ನ ಚುನಾವಣೆಗೆ ಸಹಕರಿಸಿ. ನೀವೆಲ್ಲರೂ ಅಕ್ಕ, ತಂಗಿ, ತಾಯಿಗೆ ಸಮಾನರಿದ್ದೀರಿ. ಯಾರೆಲ್ಲ ನನ್ನ ಮೇಲೆ ಆರೋಪಗಳಿಗೆ ಮಹಾಲಿಂಗೇಶ್ವರನೇ ಉತ್ತರ ಕೊಡುತ್ತಾನೆ. ನೀವು ಕೊಡುವ ಮತ ಹಿಂದುತ್ವಕ್ಕೆ ಕೊಡುವ ಮತವಾಗುತ್ತದೆ. ಮೋದಿಯ ಆಡಳಿತಕ್ಕೆ ಕೊಡುವ ಮತವಾಗಲಿದೆ. ಯಾವುದೇ ಆರೋಪ- ಪ್ರತ್ಯಾರೋಪಗಳಿಗೆ ಹೋಗುವುದಿಲ್ಲ. ಆರೋಪಗಳೇ ನನಗೆ ಆಶೀರ್ವಾದ ಎಂದುಕೊಳ್ಳುತ್ತೇನೆ ಎಂದು ಕಣ್ಣೀರು ಹಾಕಿದರು ಅರುಣ್ ಪುತ್ತಿಲ.
BJP members are trying to make false allegations against me on social media to discourage me, says Puttur, Arun Puthila. Hindu Karyakartas are not slaves of anyone," he added during a women's programme in Puttur in Dakshina Kannada.
01-04-26 10:51 pm
HK News Staffer
ಅಡಿಕೆಗೆ ನಿಗದಿಪಡಿಸಿದ ತೇವಾಂಶ ಮಿತಿ ಸಡಿಲಿಕೆಗೆ ಕ್ಯ...
01-04-26 08:56 pm
ದುಬಾರಿ ಏಪ್ರಿಲ್; ನೀರು, ವಿದ್ಯುತ್, ಟೋಲ್, ನಗದು ಎಲ...
01-04-26 12:28 pm
ಕೇರಳದಲ್ಲಿ ಮಹಿಳೆಗೆ ಸಿಎಂ ಸ್ಥಾನ, ಉಚಿತ ಸಾರಿಗೆ ಪ್ರ...
31-03-26 10:13 am
ತಮಿಳುನಾಡಿನಲ್ಲಿ ಬಿಜೆಪಿ ಸೀಟು ಹಂಚಿಕೆಯಲ್ಲಿ ಲೋಪ ;...
29-03-26 10:19 am
01-04-26 11:03 pm
HK News Staffer
ಇರಾನ್ ಮೇಲೆ ಅಣ್ವಸ್ತ್ರ ದಾಳಿಗೆ ಅಮೆರಿಕ ಸಿದ್ಧತೆ; ವ...
01-04-26 12:46 pm
ಯುದ್ಧ ವಿರಾಮ ಉಲ್ಲಂಘಿಸಿ ಇರಾನ್ ಅಣು ಸ್ಥಾವರಕ್ಕೆ ಬಾ...
31-03-26 11:00 pm
ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸೋದರ ತಾಹಿ...
31-03-26 03:30 pm
ಸಂಧಾನ ಮಾತುಕತೆ ಒಪ್ಪದಿದ್ದರೆ ಇರಾನ್ ಸರ್ವನಾಶ ; ಭೂದ...
31-03-26 10:43 am
01-04-26 09:04 pm
HK News Staffer
ಮುಸ್ಲಿಂ ಮದುವೆಯಲ್ಲಿ ಕೊರಗಜ್ಜ ದೈವದ ಅನುಕರಣೆ ; ಮದು...
31-03-26 10:06 pm
Moodbidri Accident: ಮೂಡುಬಿದ್ರೆ ; ರಸ್ತೆ ಬದಿ ನಿ...
31-03-26 09:02 pm
ಅವಳೇ ಮಗನನ್ನು ವಿಷ ಕೊಟ್ಟು ಕೊಂದಿದ್ದಾಳೆ, ವಿಷಯ ಮುಚ...
31-03-26 06:27 pm
ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನಿಂದ ಹೊರಬಿದ್...
31-03-26 03:01 pm
01-04-26 02:54 pm
HK News Staffer
ಕುಂಜತ್ ಬೈಲಿನಲ್ಲಿ ಫಲ್ಗುಣಿ ನದಿಗೆ ಬಿದ್ದು ಇಬ್ಬರು...
01-04-26 02:16 pm
ಜೈಲಿನಲ್ಲಿದ್ದ ಪತಿಯ ನೋಡಲು ಖಾಸಗಿ ಅಂಗದಲ್ಲಿ ಡ್ರಗ್ಸ...
31-03-26 11:11 am
ಮದುವೆ ಆಗಿದ್ರೂ ಲವರ್ ನಂಟು ; ಹಣಕ್ಕಾಗಿ ಪೀಡಿಸಿ ಬ್ಲ...
30-03-26 07:35 pm
ತಿಂಗಳ ಹಿಂದಷ್ಟೇ ರಿಜಿಸ್ಟರ್ ಮದುವೆಯಾಗಿದ್ದ ಬೆಳ್ತಂಗ...
29-03-26 10:36 pm