ಮಾವಿನ‌ ಹಣ್ಣು ಕೀಳಲು ಮರವೇರಿದ್ದ ವ್ಯಕ್ತಿ ಕೆಳಗೆ ಬಿದ್ದು ಸ್ಥಳದಲ್ಲೇ ಸಾವು ; ಉಳ್ಳಾಲ ಬೀಚ್ ರಸ್ತೆಯಲ್ಲಿ ಘಟನೆ

29-04-23 09:17 pm       Mangaluru Correspondent   ಕರಾವಳಿ

ಹಣ್ಣು ಕೀಳಲೆಂದು ಮಾವಿನ ಮರವೇರಿದ್ದ ವ್ಯಕ್ತಿಯೋರ್ವರು ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಉಳ್ಳಾಲದ ಅಬ್ಬಕ್ಕ ವೃತ್ತದ ಬಳಿಯ ಬೀಚ್ ರಸ್ತೆಯಲ್ಲಿ ಶನಿವಾರ ಸಂಜೆ ನಡೆದಿದೆ.

ಉಳ್ಳಾಲ, ಎ.29: ಹಣ್ಣು ಕೀಳಲೆಂದು ಮಾವಿನ ಮರವೇರಿದ್ದ ವ್ಯಕ್ತಿಯೋರ್ವರು ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಉಳ್ಳಾಲದ ಅಬ್ಬಕ್ಕ ವೃತ್ತದ ಬಳಿಯ ಬೀಚ್ ರಸ್ತೆಯಲ್ಲಿ ಶನಿವಾರ ಸಂಜೆ ನಡೆದಿದೆ.

ಉಳ್ಳಾಲ ಮೊಗವೀರಪಟ್ಣ ನಿವಾಸಿ ನಿತಿನ್ ಸುವರ್ಣ(37) ಮೃತಪಟ್ಟ ವ್ಯಕ್ತಿ. ವಿವಾಹಿತರಾಗಿರುವ ನಿತಿನ್ ಅವರು ಇಂದು ಸಂಜೆ ಅಬ್ಬಕ್ಕ ವೃತ್ತದ ಬೀಚ್ ರಸ್ತೆ ಬದಿಯಲ್ಲಿದ್ದ ಮಾವಿನ ಮರ ಏರಿ‌ ಹಣ್ಣು ಕೀಳುತ್ತಿದ್ದರೆನ್ನಲಾಗಿದೆ. ಈ ವೇಳೆ ನಿತಿನ್‌ ಆಯ ತಪ್ಪಿ ಕೆಳಗೆ ಬಿದ್ದಿದ್ದು ತಲೆಗೆ ಕಲ್ಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳೀಯರು ತಕ್ಷಣ ಅವರನ್ನ ದೇರಳಕಟ್ಟೆಯ ಆಸ್ಪತ್ರೆಗೆ ಸಾಗಿಸಿದರೂ ಅದಾಗಲೇ ನಿತಿನ್ ಪ್ರಾಣ ಹಾರಿ ಹೋಗಿತ್ತು. ಮೃತ ನಿತಿನ್ ಜಪ್ಪಿನ ಮೊಗರಿನ ಫ್ಲೈವುಡ್ ಫ್ಯಾಕ್ಟರಿಯಲ್ಲಿ ಉದ್ಯೋಗಿಯಾಗಿದ್ದರು

37 year old man dies after falling from Mango tree at Ullal in Mangalore. The deceased has been identified as Nitin Suvarna. He was trying to pluck Mangoes from beach side tree at Abbakka circle after which he slipped and fell to death.