ಬ್ರೇಕಿಂಗ್ ನ್ಯೂಸ್
30-04-23 01:59 pm Mangalore Correspondent ಕರಾವಳಿ
ಬಂಟ್ವಾಳ, ಎ.30 : ಜಿಲ್ಲಾಡಳಿತ ಮತದಾನ ಜಾಗೃತಿಗಾಗಿ ವಿವಿಧ ರೀತಿಯ ಕಸರತ್ತುಗಳನ್ನು ಮಾಡುತ್ತಿದೆ. ಯಕ್ಷಗಾನ ಕಲಾವಿದರನ್ನೂ ಬಳಸಿಕೊಂಡು ಮತದಾನದ ಬಗ್ಗೆ ಜಾಗೃತಿ ನಡೆಸುತ್ತಿದೆ. ಆದರೆ ಬಂಟ್ವಾಳದ ಬಿಸಿ ರೋಡಿನಲ್ಲಿ ಯಕ್ಷಗಾನ ವೇಷಧಾರಿಗಳನ್ನು ಕಸ ಒಯ್ಯುವ ವಾಹನಗಳಲ್ಲಿ ಒಯ್ದಿದ್ದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.
ಬಂಟ್ವಾಳ ನಗರಸಭೆಯ ವತಿಯಿಂದ ಬಿಸಿ ರೋಡಿನಲ್ಲಿ ಶನಿವಾರ ಮತದಾನ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೂ ಮುನ್ನ ಕೈಕಂಬದಿಂದ ಬಿಸಿ ರೋಡಿಗೆ ಮೆರವಣಿಗೆ ನಡೆದಿತ್ತು. ಈ ವೇಳೆ, ನಗರಸಭೆಯ ಕಸ ಒಯ್ಯುವ ವಾಹನದಲ್ಲಿ ಯಕ್ಷಗಾನ ವೇಷಧಾರಿಗಳನ್ನು ಕುಳ್ಳಿರಿಸಿ ಒಯ್ಯಲಾಗಿದೆ. ಮತದಾನ ಜಾಗೃತಿ ಮೂಡಿಸುವ ರೀತಿ ಭಾಗವತಿಕೆ ಮತ್ತು ವೇಷಧಾರಿಗಳು ಕುಣಿತಗಳನ್ನು ನಿರ್ವಹಿಸಿದರು.
ಆದರೆ ಯಕ್ಷಗಾನ ಕಲಾವಿದರನ್ನು ಕಸ ಒಯ್ಯುವ ವಾಹನದಲ್ಲಿ ಕುಳ್ಳಿರಿಸಿ ಒಯ್ದಿದ್ದು ಯಕ್ಷಗಾನ ಪ್ರಿಯರ ಸಿಟ್ಟಿಗೆ ಕಾರಣವಾಗಿದೆ. ಈ ಬಗ್ಗೆ ನಗರಸಭೆಯ ಆಡಳಿತ ಕ್ಷಮೆ ಕೇಳಬೇಕೆಂದು ಕಲಾವಿದರು ಆಗ್ರಹ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಕಲಾವಿದ ಸರಪಾಡಿ ಅಶೋಕ ಶೆಟ್ಟಿ, ನಗರಸಭೆಯ ಈ ನಡೆಯನ್ನು ನಾವು ಖಂಡಿಸುತ್ತೇವೆ. ನಗರಸಭೆ ಅಧಿಕಾರಿಗಳು, ಯಕ್ಷಗಾನ ಕಲೆಯನ್ನು ಗ್ಯಾರ್ಬೇಜ್ ಗೆ ಸಮ ಎಂದುಕೊಂಡಿದ್ದಾರೆಯೇ..? ಈ ಬಗ್ಗೆ ಯಕ್ಷಗಾನ ಪ್ರಿಯರು, ಕಲಾವಿದರ ಬಳಿ ನಗರಸಭೆ ಅಧಿಕಾರಿಗಳು ಕ್ಷಮೆ ಕೇಳಬೇಕು ಎಂದು ಆಗ್ರಹ ಮಾಡಿದ್ದಾರೆ.
Yakshagana, the traditional folk art of the coastal region of Karnataka, is a symbol of pride and honor. However, the Yakshagana fraternity in Bantwal is expressing their anguish after artists were taken in a procession in a waste transportation vehicle belonging to the Bantwal municipality.
14-07-25 10:44 pm
Bangalore Correspondent
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm