ಮಂಗಳೂರು ಉತ್ತರ ;  ಮೊಯ್ದೀನ್ ಬಾವ ಪ್ರಚಾರಕ್ಕೆ ಮಾಜಿ ಪ್ರಧಾನಿ ದೇವೇಗೌಡರ ಎಂಟ್ರಿ 

30-04-23 04:44 pm       Mangalore Correspondent   ಕರಾವಳಿ

ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸಿನಿಂದ ಬಂಡಾಯ ಎದ್ದು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮೊಯ್ದೀನ್ ಬಾವ ಪರವಾಗಿ ಪ್ರಚಾರಕ್ಕೆ ಮಾಜಿ ಪ್ರಧಾನಿ ದೇವೇಗೌಡ ಆಗಮಿಸುತ್ತಿದ್ದಾರೆ. 

ಮಂಗಳೂರು, ಎ.30: ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸಿನಿಂದ ಬಂಡಾಯ ಎದ್ದು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮೊಯ್ದೀನ್ ಬಾವ ಪರವಾಗಿ ಪ್ರಚಾರಕ್ಕೆ ಮಾಜಿ ಪ್ರಧಾನಿ ದೇವೇಗೌಡ ಆಗಮಿಸುತ್ತಿದ್ದಾರೆ. 

ಮೇ 1ರಂದು ಮಧ್ಯಾಹ್ನ ಎರಡು ಗಂಟೆಗೆ ಕೃಷ್ಣಾಪುರದ ಫಿಝಾ ಗಾರ್ಡನ್ ಹೆಲಿಪ್ಯಾಡ್ ಗೆ ಹೆಲಿಕಾಪ್ಟರ್ ನಲ್ಲಿ ಆಗಮಿಸುವ ದೇವೇಗೌಡರು, ಸೂರಜ್ ಹೊಟೇಲ್ ನಲ್ಲಿ ಮೊಯ್ದೀನ್ ಬಾವ ಜೊತೆಗೆ ಸುದ್ದಿಗೋಷ್ಟಿ ನಡೆಸಲಿದ್ದಾರೆ. ಅಪರಾಹ್ನ 3.30ಕ್ಕೆ ಬಜ್ಪೆಯ ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಆಸುಪಾಸಿನಲ್ಲಿ ಪ್ರಚಾರ ನಡೆಸಲಿದ್ದಾರೆ. 

ನಾಲ್ಕು ಗಂಟೆಗೆ ಗುರುಪುರ ಪೆರಾರಿ ಬಲವಾಂಡಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. 4.30ಕ್ಕೆ ಗುರುಪುರ ಕಂಬಳ ದರ್ಗಾ ಭೇಟಿ ನೀಡಲಿದ್ದಾರೆ. ಐದು ಗಂಟೆಗೆ ಕೈಕಂಬದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ದೇವೇಗೌಡರು ಭಾಗವಹಿಸಲಿದ್ದಾರೆ. ರಾತ್ರಿ ಏಳು ಗಂಟೆಗೆ ವಿಮಾನದ ಮೂಲಕ ಬೆಂಗಳೂರಿಗೆ ನಿರ್ಗಮಿಸಲಿದ್ದಾರೆ. 

ಈಗಾಗಲೇ ಮೊಯ್ದೀನ್ ಬಾವ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು ಎಲ್ಲ ಕಡೆ ಜೆಡಿಎಸ್ ಪರವಾಗಿ ಕಾರ್ಯಕರ್ತರು ಇಲ್ಲದೇ ಇರುವುದು ಪ್ರಚಾರಕ್ಕೆ ಹಿನ್ನಡೆಯಾಗಿದೆ. ಹೀಗಾಗಿ ದೇವೇಗೌಡರನ್ನು ಕರೆಸಿ ಒಂದಷ್ಟು ಹುರುಪು ಹೆಚ್ಚಿಸಲು ಮೊಯ್ದೀನ್ ಬಾವ ತೊಡಗಿದ್ದಾರೆ.

Former Prime Minister H D Deve Gowda will visit the Mangaluru North constituency to campaign for Janata Dal (S) candidate Mohiudeen Bhava, according to MLC and JD(S) leader B M Farooq.