ಹಿಂದುತ್ವದ ಹೆಸರಿನಲ್ಲಿ ಗೆದ್ದು ಹಿಂದುಗಳಿಗೆ ದ್ರೋಹ ಬಗೆಯುವ ಬಿಜೆಪಿಯನ್ನು ಸೋಲಿಸಿ ; ಆಮ್ ಆದ್ಮಿ ಪರ ಪ್ರಚಾರಕ್ಕಿಳಿದ ನಿವೃತ್ತ ಡಿವೈಎಸ್ಪಿ ಅನುಪಮಾ ಶೆಣೈ 

01-05-23 12:02 pm       Mangalore Correspondent   ಕರಾವಳಿ

10% ಸರಕಾರ ಎಂದು ಹಿಂದಿನ ಸರಕಾರವನ್ನು ದೂಷಿಸಿ ಹಿಂದುತ್ವದ ಹೆಸರಿನಲ್ಲಿ ಡಬಲ್ ಇಂಜಿನ್ ಸರಕಾರ ರಚಿಸಿ ಭ್ರಷ್ಟಾಚಾರವನ್ನು 40 ಶೇಕಡಕ್ಕೆ ತಲುಪಿಸಿದ ಮೋದಿಯವರು ಇಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿಲ್ಲ.

ಮಂಗಳೂರು, ಮೇ 1: 10% ಸರಕಾರ ಎಂದು ಹಿಂದಿನ ಸರಕಾರವನ್ನು ದೂಷಿಸಿ ಹಿಂದುತ್ವದ ಹೆಸರಿನಲ್ಲಿ ಡಬಲ್ ಇಂಜಿನ್ ಸರಕಾರ ರಚಿಸಿ ಭ್ರಷ್ಟಾಚಾರವನ್ನು 40 ಶೇಕಡಕ್ಕೆ ತಲುಪಿಸಿದ ಮೋದಿಯವರು ಇಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿಲ್ಲ. ಎಲ್ಲಾ ಕಡೆ ಭ್ರಷ್ಟರಿಗೆ ಪ್ರಾಶಸ್ತ್ಯ ನೀಡುವುದು ಕಾಣುತ್ತಿದೆ ಎಂದು ಭ್ರಷ್ಟಾಚಾರದ ವಿರುದ್ಧ ಹೋರಾಡಿ ತನ್ನ ಡಿವೈಎಸ್ಪಿ ಪದವಿಯನ್ನು ತ್ಯಾಗ ಮಾಡಿದ್ದ ಅನುಪಮಾ ಶೆಣೈ ಅವರು ಹೇಳಿದ್ದಾರೆ. 

ಮಂಗಳೂರಿನ ರಥಬೀದಿಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸಂತೋಷ್ ಕಾಮತ್ ಪರವಾಗಿ ಮತಪ್ರಚಾರ ನಡೆಸಿ ಅವರು ಮಾತನಾಡಿದರು.‌ ಪುಲ್ವಾಮದಲ್ಲಿ ಉಗ್ರರ ದಾಳಿಯಲ್ಲಿ 40 ಯೋಧರು ಸಾಯಲು ಮೋದಿ ಸರಕಾರದ ನಿರ್ಲಕ್ಷವೇ ಕಾರಣ ಎಂದು ಇತ್ತೀಚೆಗೆ ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಹೇಳಿರುವುದನ್ನು ಉಲ್ಲೇಖಿಸಿದ ಅನುಪಮಾ ಶೆಣೈ, ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. 

ಅಭ್ಯರ್ಥಿ ಸಂತೋಷ ಕಾಮತ್ ಮಾತನಾಡಿ ಪ್ರಾಮಾಣಿಕ, ಸ್ವಚ್ಛ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಆಶ್ವಾಸನೆ ನೀಡಿದರು. ವೆಂಕಟೇಶ್ ಬಾಳಿಗಾ ಮತ್ತು ಜೆ.ಪಿ. ರಾವ್ ಮತ ಯಾಚಿಸಿದರು. ಪ್ರಾಸ್ತಾವಿಕ ಮಾತುಗಳನ್ನು ಆಡಿದ ಸಾಮಾಜಿಕ ಕಾರ್ಯಕರ್ತ ಜೆರಾರ್ಡ್ ಟವರ್ಸ್ ಸ್ಮಾರ್ಟ್ ಸಿಟಿಯ ಹೆಸರಿನಲ್ಲಿ ಆಗುತ್ತಿರುವ ಅನ್ಯಾಯಗಳನ್ನು ವಿವರಿಸಿದರು. ಜೇಮ್ಸ್ ಡೇಸಾ, ಪ್ರಸಾದ್ ಬಜೀಲಕೇರಿ, ನಝೀರ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಪರಿಸರದಲ್ಲಿ ಮನೆ ಮನೆ ಪ್ರಚಾರ ಜರಗಿತು.

Former DYSP Anupama Shenoy campaigns for AAP Santosh Kamat in Mangalore. BJP that was alleged congress of 10 percent government has now been busy making 40 percent using Double Engine she slammed. It may be recalled that Anupama Shenoy was in news for being shunted out of the district and later reinstated for keeping the phone call of Labour Minister P.T. Parmeshwar Naik on hold.