ಬ್ರೇಕಿಂಗ್ ನ್ಯೂಸ್
01-05-23 09:18 pm Mangalore Correspondent ಕರಾವಳಿ
ಮಂಗಳೂರು, ಮೇ 1 : ಮಂಗಳೂರು ಉತ್ತರ ಕ್ಷೇತ್ರದಲ್ಲಿ ಪೂರ್ವಗ್ರಹ ಪೀಡಿತರಾಗಿ, ದುರುದ್ದೇಶ ಇಟ್ಟುಕೊಂಡು ಮೊಯ್ದೀನ್ ಬಾವರಿಗೆ ಕಾಂಗ್ರೆಸ್ ಸೀಟು ತಪ್ಪಿಸಿದ್ದಾರೆ. ವಿಧಾನಸಭೆಗೆ ಬರದಂತೆ ತಡೆದು ಬೀದಿಪಾಲು ಮಾಡಲು ಪ್ರಯತ್ನ ಮಾಡಿದ್ದಾರೆ. ಆದರೆ ಜೆಡಿಎಸ್ ಬಾವರಿಗೆ ಶಕ್ತಿ ತುಂಬಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.
ಸುರತ್ಕಲ್ ನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಒಂದು ಕಾಲದಲ್ಲಿ ಜೆಡಿಎಸ್ ಗೆ ಐದು ಜಿಪಂ ಸ್ಥಾನ, ಮೂರು ಶಾಸಕರನ್ನು ಗೆಲ್ಲಿಸಿಕೊಟ್ಟಿದ್ದ ಜಾಗ ಮಂಗಳೂರು. ನಾವು ಕಟ್ಟಿದ ಜಾತ್ಯತೀತ ನೆಲೆಯ ಭದ್ರಕೋಟೆ ಹೇಗೆ ಸಡಿಲ ಆಯ್ತು ಅಂತ ಹೇಳಬೇಕಿಲ್ಲ. ಆದರೆ ಈ ಪ್ರದೇಶದಲ್ಲಿ ಇನ್ನೂ ಜಾತ್ಯತೀತ ಮನಸ್ಸು ಉಳಿದಿದೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಮೊಯ್ದೀನ್ ಬಾವ ಸಾಧನೆಯನ್ನು ಸಮೀಕ್ಷೆಗಳು ಹೇಳಿವೆ. ಕ್ಷೇತ್ರಕ್ಕೆ 78 ಪರ್ಸೆಂಟ್ ಅನುದಾನ ತಂದಿದ್ದಾರೆಂದು ಹಲವು ಸಂಸ್ಥೆಗಳು ಹೇಳಿವೆ. ಬಾವ ಸಾಧನೆ ಗುರುತಿಸಿ ನಾವು ಜೆಟಿಎಸ್ ಟಿಕೆಟ್ ಕೊಟ್ಟಿದ್ದೇವೆ. ಅವರಿಗಾದ ಅನ್ಯಾಯ ಸರಿಪಡಿಸಲು ನಾವು ಶಕ್ತಿ ನೀಡಿದ್ದೇವೆ.

ಇಡೀ ದೇಶದಲ್ಲಿ ರೈತರ ಸಾಲ ಮನ್ನಾ ಮಾಡಿದ್ದರೆ ಅದು ಕುಮಾರಸ್ವಾಮಿ ಮಾತ್ರ. ನುಡಿದಂತೆ ನಡೆದಿದ್ದಾರೆ ಎಂಬುದಕ್ಕೆ ಸಾಕ್ಷಿ ಇದೆ. ಜನರು ಈಗಾಗಲೇ ನಿರ್ಧರಿಸಿದ್ದಾರೆ. ಮೇ 13ರಂದು ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಆಗುತ್ತಾರೆ ಎಂದು
2018ರಲ್ಲಿ ಗುಲಾಂ ನಬಿ ಕರೆದು ಕುಮಾರಸ್ವಾಮಿ ಸಿಎಂ ಮಾಡ್ತೀವಿ ಅಂತ ಬಂದಿದ್ದರು. ನಾವೇನು ಕಾಂಗ್ರೆಸ್ ಮನೆ ಬಾಗಿಲಿಗೆ ಹೋಗಿರಲಿಲ್ಲ. ಆದರೆ ಮೈತ್ರಿ ಸರ್ಕಾರ ಕೆಡವಲು ಯಾರು ಕಾರಣ, ನಿಮ್ಮ ತೀರ್ಪಿಗೆ ಬಿಡುತ್ತೇನೆ. ಮುಂಬೈಗೆ ಶಾಸಕರನ್ನು ಕಳಿಸಿಕೊಟ್ಡಿದ್ದು ಯಾರು? ಸರ್ಕಾರ ಬೀಳಿಸಿದ್ದು ಯಾರು ? ಅದರ ದುಷ್ಪರಿಣಾಮ ಕಾಂಗ್ರೆಸ್ ಅನುಭವಿಸಬೇಕು ಎಂದು ಕಾಂಗ್ರೆಸ್ ನಾಯಕರ ಹೆಸರೆತ್ತದೆ ಟೀಕಿಸಿದರು.
ಮಂಡಲ್ ಕಮಿಷನ್ ಮಾಡಿ, ಮುಸ್ಲಿಂ ಮತ್ತು ಒಕ್ಕಲಿಗರಿಗೆ ನಾಲ್ಕು ಪರ್ಸೆಂಟ್ ಕೊಟ್ಟಿದ್ದು ನಾನು. ಆದರೆ ಈ ಮೀಸಲು ನೀತಿಯನ್ನೇ ಬಿಜೆಪಿ ಸಡಿಲ ಮಾಡಿದೆ. ಒಬ್ಬರ ಮೀಸಲಾತಿಯನ್ನು ಕಿತ್ತು ದ್ವೇಷ ಹಚ್ಚಿದ್ದಾರೆ ಎಂದು ಹೇಳಿದ ಗೌಡರು, ಸಮಾಜದಲ್ಲಿ ಬೇರೆ ಶಕ್ತಿ ಬರಬಾರದೆಂದು ಬಾವನನ್ನು ನಿಲ್ಲಿಸಿದ್ದೇವೆ. ನೀವೆಲ್ಲ ಶಕ್ತಿ ತುಂಬುತ್ತೀರಿ ಎಂಬ ಭರವಸೆ ಹೊಂದಿದ್ದೇನೆ ಎಂದರು.
ಜೆಡಿಎಸ್ ಪ್ರೈವೇಟ್ ಲಿಮಿಟೆಡ್ ಎಂಬ ಮೋದಿ ಟೀಕೆ ಬಗ್ಗೆ ಕೇಳಿದ ಪ್ರಶ್ನೆಗೆ, ಆ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಜನ ಉತ್ತರ ನೀಡುತ್ತಾರೆ. ಮೋದಿ ಪ್ರಧಾನಿ ಇದ್ದಾರೆ, ಅವರನ್ನು ಟೀಕೆ ಮಾಡಲ್ಲ ಎಂದರು.
Former prime minister H D Deve Gowda said the Janata Dal (S) party has close links with the people of Mangaluru as there were as many as five Zilla Panchayat members and three MLAs from the party who got elected from here in the past.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm