ಬ್ರೇಕಿಂಗ್ ನ್ಯೂಸ್
07-06-23 02:04 pm Mangalore Correspondent ಕರಾವಳಿ
ಮಂಗಳೂರು, ಜೂನ್ 7: ವಾಮಂಜೂರಿನ ಪಿಲಿಕುಳ ಜೈವಿಕ ಉದ್ಯಾನವನದಲ್ಲಿದ್ದ ಹುಲಿಯೊಂದು ದಿಢೀರ್ ಸಾವನ್ನಪ್ಪಿದ ಘಟನೆ ನಡೆದಿದೆ. ನೇತ್ರಾವತಿ ಹೆಸರಿನ 15 ವರ್ಷ ಪ್ರಾಯದ ಹೆಣ್ಣು ಹುಲಿ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾಗಿ ಪಿಲಿಕುಳ ಉದ್ಯಾನವನದ ನಿರ್ದೇಶಕ ಜಯಕರ ಭಂಡಾರಿ ತಿಳಿಸಿದ್ದಾರೆ.
ಪಿಲಿಕುಳದ ಅಧಿಕಾರಿಗಳ ಮಾಹಿತಿ ಪ್ರಕಾರ, ಜೂನ್ 4ರಂದು ರೇವಾ ಹೆಸರಿನ ಆರು ವರ್ಷ ಪ್ರಾಯದ ಗಂಡು ಹುಲಿ ಬೆದೆಗೆ ಬಂದು ಹೆಣ್ಣು ಹುಲಿಯೊಂದಿಗೆ ಮಿಲನಕ್ಕೆ ಮುಂದಾಗಿತ್ತು. ಇದನ್ನು ವಿರೋಧಿಸಿ ಹೆಣ್ಣು ಹುಲಿ, ಗಂಡು ಹುಲಿಯ ಮೇಲೆ ದಾಳಿ ನಡೆಸಿತ್ತು. ಈ ವೇಳೆ, ಎರಡು ಹುಲಿಗಳ ನಡುವೆ ಕಚ್ಚಾಟ ನಡೆದು ಹೆಣ್ಣು ಹುಲಿ ಗಾಯಗೊಂಡಿತ್ತು. ಆನಂತರ, ಹುಲಿಗೆ ಚಿಕಿತ್ಸೆ ನೀಡಲಾಗಿದ್ದು, ಚಿಕಿತ್ಸೆ ಫಲಿಸದೆ ಬುಧವಾರ ಬೆಳಗ್ಗೆ 9.30ರ ಸುಮಾರಿಗೆ ಸಾವು ಕಂಡಿದೆ ಎಂದು ಭಂಡಾರಿ ತಿಳಿಸಿದ್ದಾರೆ.
ನೇತ್ರಾವತಿ ಮತ್ತು ರೇವಾ ಹುಲಿಗಳು ಪಿಲಿಕುಳ ಉದ್ಯಾನವನದಲ್ಲಿಯೇ ಜನಿಸಿದ ಹುಲಿಗಳಾಗಿದ್ದು ಸದ್ಯಕ್ಕೆ ಪಿಲಿಕುಳದಲ್ಲಿ ಎಂಟು ಹುಲಿಗಳಿವೆ. ಕಚ್ಚಾಟದಿಂದ ಎರಡೂ ಹುಲಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ಹೃದಯಾಘಾತದಿಂದ ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ಅಲ್ಲಿನ ಸಿಬಂದಿ ತಿಳಿಸಿದ್ದಾರೆ. ಆಂತರಿಕ ಗಾಯ ಮತ್ತು ಕಾರಣಗಳನ್ನು ಮರಣೋತ್ತರ ಪರೀಕ್ಷೆಯಿಂದ ತಿಳಿಯಲಾಗುವುದು ಎಂದು ಜಯಕರ ಭಂಡಾರಿ ತಿಳಿಸಿದ್ದಾರೆ. ಗಂಡು ಹುಲಿ ರೇವಾನಿಗೂ ಗಾಯಗಳಾಗಿದ್ದು, ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಹುಲಿಗಳ ಕಚ್ಚಾಟದಿಂದಲೇ ಸಾವು ಆಗಿದೆಯೇ, ಬಿಸಿಲಿನ ಹೆಚ್ಚಳ ಅಥವಾ ಆಹಾರದ ಕೊರತೆಯಿಂದ ಸಾವು ಸಂಭವಿಸಿದೆಯೇ ಎನ್ನುವ ಕುರಿತಾಗಿಯೂ ಶಂಕೆಗಳಿವೆ.
Tiger killed in tiger battle at Pilikula in Mangalore.
26-09-23 05:41 pm
Bangalore Correspondent
Tumkur Car Accident: ತುಮಕೂರು ; ರಥೋತ್ಸವ ಕಾರ್ಯಕ...
26-09-23 12:37 pm
Hd Kumaraswamy, Bengaluru Bandh Cauvery: ಇದೇನ...
26-09-23 12:28 pm
Bengaluru, City police commissioner, Cauvery...
25-09-23 07:09 pm
Bengalore, Chaitra Kundapur: ಪರಪ್ಪನ ಅಗ್ರಹಾರ ಜ...
25-09-23 03:22 pm
26-09-23 07:44 pm
HK News Desk
Goa Deltin Royale Casino GST Notice, 17 thous...
26-09-23 06:32 pm
Kasaragod accident, five dead: ಬದಿಯಡ್ಕ ಬಳಿ ಭೀ...
25-09-23 11:06 pm
Delhi,AIADMK-BJP alliance: ತಮಿಳುನಾಡು ಬಿಜೆಪಿಗೆ...
25-09-23 09:32 pm
Jog falls drowning: ಜೋಗ್ ಫಾಲ್ಸ್ ಸಮೀಪ ದುರಂತ ;...
24-09-23 09:05 pm
26-09-23 02:24 pm
Mangalore Correspondent
Subramanya, illegal cattle Cow trafficking, M...
26-09-23 10:52 am
Mangalore Dinesh Gundu Rao, Janatha Darshana:...
25-09-23 09:38 pm
Mangalore Eid Milad 2023, Banner Fish Bunder:...
25-09-23 06:17 pm
Ullal Suicide, Train Mangalore; ರೈಲಿನಡಿಗೆ ಹಾರ...
25-09-23 05:22 pm
26-09-23 07:20 pm
HK News Desk
Udupi, OTP Fraud, Kapu: ಬ್ಯಾಂಕ್ ಅಧಿಕಾರಿ ಎಂದು...
24-09-23 10:27 pm
Mangalore Rowdy Sheeter Tallat arrested by CC...
20-09-23 11:43 am
ಸುಳ್ಯಕ್ಕೆ ಬಂದಿದ್ದ ಕೊಡಗಿನ ಯುವಕನಿಗೆ ಹಲ್ಲೆಗೈದು ದ...
19-09-23 09:31 pm
Bantwal Robbery: ಬಂಟ್ವಾಳ ; ಹಗಲು ವೇಳೆ ಮನೆಗೆ ನು...
18-09-23 10:59 pm