ಬ್ರೇಕಿಂಗ್ ನ್ಯೂಸ್
03-11-20 01:16 pm Mangalore Correspondent ಕರಾವಳಿ
ಉಳ್ಳಾಲ, ನವಂಬರ್ 03 : ಹೇಳುವುದೊಂದು, ಮಾಡುವುದು ಇನ್ನೊಂದು ಅಂತಾರಲ್ಲ.. ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಕೇಸ್ ಹಾಕುವ ಟ್ರಾಫಿಕ್ ಪೊಲೀಸರೇ ಕಾನೂನು ಉಲ್ಲಂಘಿಸಿದ ಪ್ರಸಂಗ ತೊಕ್ಕೊಟ್ಟಿನಲ್ಲಿ ನಡೆದಿದೆ.
ತೊಕ್ಕೊಟ್ಟು ಮೇಲ್ಸೇತುವೆ ಕೊನೆಯಲ್ಲಿ ಇತ್ತೀಚೆಗೆ ಅಪಘಾತ ನಡೆದ ಬಳಿಕ ಟ್ರಾಫಿಕ್ ಪೊಲೀಸರು ನಿಗಾ ಇಟ್ಟಿದ್ದಾರೆ. ಅಬಳಿಕ ಉಳ್ಳಾಲಕ್ಕೆ ತಿರುಗುತ್ತಿದ್ದ ಪಾಸಿಂಗ್ ಸೌಲಭ್ಯವನ್ನು ಬಂದ್ ಮಾಡಿದ್ದು ಮುಂದೆ ಹೋಗಿ ತಿರುವು ಪಡೆಯಲು ಅವಕಾಶ ಕೊಡಲಾಗಿದೆ. ಹೀಗಾಗಿ ಉಳ್ಳಾಲದತ್ತ ಹೋಗುವ - ಬರುವ ಜನರು ಸಂಕಷ್ಟ ಪಡುತ್ತಿದ್ದಾರೆ.
ಈ ಮಧ್ಯೆ, ತೊಕ್ಕೊಟ್ಟು- ಕಾಪಿಕಾಡು ಹೆದ್ದಾರಿಯಲ್ಲಿ ( ಕೊಲ್ಯದಿಂದ- ತೊಕ್ಕೊಟ್ಟಿನ ಕಡೆಗೆ) ಪೊಲೀಸರ ವಾಹನ ವಿರುದ್ಧ ದಿಕ್ಕಿನಲ್ಲಿ ಚಲಿಸಿದೆ. ಜನಸಾಮಾನ್ಯರು ಇಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಿಸಿದರೆ ಕಾನೂನು ಪಾಠ ಹೇಳುವ ಪೊಲೀಸರೇ ರೂಲ್ಸ್ ಬ್ರೇಕ್ ಮಾಡಿರುವುದನ್ನ ಕಂಡ ಜನರು ಜನರಿಗೊಂದು, ಪೊಲೀಸರಿಗೊಂದು ಕಾನೂನೇ ಎಂದು ಪ್ರಶ್ನಿಸುವಂತಾಗಿದೆ.
ತೊಕ್ಕೊಟ್ಟು ಓವರ್ ಬ್ರಿಡ್ಜ್ ಕಡೆಯಿಂದ ಎರಡನೇ ಕೊಲ್ಯದ ವರೆಗಿನ ಸುಮಾರು 2 ಕಿ.ಮೀ ರಸ್ತೆಯಲ್ಲಿ ವಾಹನಗಳು ಹೆದ್ದಾರಿ ಕ್ರಾಸ್ ಮಾಡಲು ಯಾವುದೇ ತಿರುವುಗಳಿಲ್ಲ. ಸಂಬಂಧ ಪಟ್ಟ ನವಯುಗ ಕನ್ಸ್ಟ್ರಕ್ಷನ್ ಕಂಪನಿಯವರು ಇದುವರೆಗೂ ಇಲ್ಲಿ ಸರ್ವಿಸ್ ರಸ್ತೆ ನಿರ್ಮಿಸಿಲ್ಲ. ಪರಿಣಾಮ ಕೊಲ್ಯದಿಂದ- ಓವರ್ ಬ್ರಿಡ್ಜ್ ನ ನಡುವೆ ಓಡಾಡುವ ವಾಹನ ಸವಾರರು ಸಮಯದ ಅಭಾವದಿಂದಲೋ, ದುಬಾರಿ ಇಂಧನ ಉಳಿಸುವ ಆಸೆಯಿಂದಲೋ ಇಲ್ಲಿ ನಿತ್ಯವೂ ರಾಂಗ್ ಸೈಡ್ ನಿಂದ ಸಂಚರಿಸಿ ಟ್ರಾಫಿಕ್ ಪೊಲೀಸರಿಗೆ ಸಿಕ್ಕಿಬಿದ್ದು ಫೈನ್ ಕಟ್ಟಿಸಿಕೊಳ್ತಾರೆ.
ಈ ಪ್ರದೇಶದಲ್ಲಿ ಸರ್ವಿಸ್ ರಸ್ತೆ ಇಲ್ಲದೇ ಇರುವುದೇ ವಾಹನ ಸವಾರರು ರಾಂಗ್ ಸೈಡ್ ಚಲಿಸಲು ಮುಖ್ಯ ಕಾರಣವಾಗಿದ್ದರೂ, ಪೊಲೀಸರು ಸಂಬಂಧ ಪಟ್ಟ ನವಯುಗ ಕಂಪನಿಯ ವಿರುದ್ಧ ಕೇಸ್ ಹಾಕುವ ಧೈರ್ಯ ಮಾಡದೆ ಬಡ ವಾಹನ ಸವಾರರ ಮೇಲೆ ಫೈನ್ ಹಾಕಿ ದರ್ಪ ತೋರಿಸುತ್ತಾರೆ !
ಇಂದು ಟ್ರಾಫಿಕ್ ಪೊಲೀಸರೇ ಈ ರಸ್ತೆಯಲ್ಲಿ ರಾಂಗ್ ಸೈಡಲ್ಲಿ ಸಂಚರಿಸಿ, ಟ್ರಾಫಿಕ್ ಉಲ್ಲಂಘಿಸುವ ಮಂದಿಗೆ ಮಾದರಿಯಾಗಿದ್ದಾರೆ !!
A Traffic Police Jeep violating traffic rules by going on the opposite direction at Thokottu near the bridge has gone viral on social media.
14-07-25 10:44 pm
Bangalore Correspondent
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm