ಬ್ರೇಕಿಂಗ್ ನ್ಯೂಸ್
26-07-23 10:06 pm Mangalore Correspondent ಕರಾವಳಿ
ಮಂಗಳೂರು, ಜುಲೈ 26: ಪ್ರತಿ ಬಾರಿಯಂತೆ ಎಂಆರ್ ಪಿಎಲ್ ಆಸುಪಾಸಿನಲ್ಲಿ ಕೈಗಾರಿಕೆ ತ್ಯಾಜ್ಯದ ಮಾಲಿನ್ಯ ಸ್ಥಳೀಯ ತೋಡುಗಳಲ್ಲಿ ಹರಿದು ನದಿ ಸೇರುತ್ತಿದೆ. ಸುರತ್ಕಲ್ ಸಮೀಪದ ಕುತ್ತೆತ್ತೂರು, ಆತ್ರುಕೋಡಿ ಭಾಗದಲ್ಲಿ ಮಾಲಿನ್ಯ ಮಳೆನೀರಿಗೆ ಸೇರುತ್ತಿದ್ದು, ಸ್ಥಳೀಯ ತೋಡುಗಳಲ್ಲಿ ನೀರು ನೊರೆ ಮಿಶ್ರಿತವಾಗಿರುವುದು ಎದ್ದು ಕಾಣುತ್ತಿದೆ. ಮಾಲಿನ್ಯದ ಪರಿಣಾಮ ಹಲವರು ಅಸ್ವಸ್ಥಗೊಂಡಿದ್ದಾರೆ.
ಅಪಾಯಕಾರಿ ಮಾಲಿನ್ಯ ಸೇರುತ್ತಿರುವುದರಿಂದ ತೋಡು, ನದಿಗಳಲ್ಲಿ ಮೀನುಗಳು ಸತ್ತು ಬಿದ್ದಿವೆ. ಅಲ್ಲದೆ, ಕುತ್ತೆತ್ತೂರು ಆಸುಪಾಸಿನ ಕೃಷಿ ಭೂಮಿಯೂ ಮಲಿನಗೊಂಡಿದೆ. ಕೃಷಿ ಗದ್ದೆಗಳಲ್ಲಿಯೂ ಮೀನುಗಳು ಸತ್ತು ತೇಲುತ್ತಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಮಾಹಿತಿ ಪ್ರಕಾರ, ಎಂಆರ್ ಪಿಎಲ್ ಘಟಕದ ಒಳಗಿರುವ ತ್ಯಾಜ್ಯ ಸಂಸ್ಕರಣಾ ಘಟಕ ಮಳೆಗಾಲದಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಎಂಆರ್ ಪಿಎಲ್ ಸ್ಥಾವರ ಇರುವ ಕಳವಾರು, ಪೆರ್ಮುದೆ ಭಾಗ ಹಿಂದೆ ಅತ್ಯಂತ ಫಲಭರಿತ ಮತ್ತು ಅತ್ಯಂತ ನೀರಿನ ಒರತೆ ಇರುವ ಪ್ರದೇಶ. ಹೀಗಾಗಿ ಮಳೆಗಾಲದಲ್ಲಿ ನೀರು ಉಕ್ಕಿ ಬರುತ್ತಿದ್ದು, ಅದರ ಜೊತೆಗೆ ಕೈಗಾರಿಕೆಯ ತ್ಯಾಜ್ಯವನ್ನೂ ಹೊರಗೆ ಬಿಡಲಾಗುತ್ತಿದೆಯಾ ಎನ್ನುವ ಸಂಶಯ ಉಂಟಾಗಿದೆ.





ಸ್ಥಳೀಯ ತೋಡು, ನದಿಗಳ ಮೂಲಕ ನೀರು ಸೇರುವ ತ್ಯಾಜ್ಯ ನೇರವಾಗಿ ಸಮುದ್ರ ಪಾಲಾಗುತ್ತಿದೆ. ಇದರಿಂದ ಸಮುದ್ರ ಮಾಲಿನ್ಯವೂ ಆಗುತ್ತಿದೆ. ಈ ಬಗ್ಗೆ ಸ್ಥಳೀಯರು ಪ್ರತಿ ಬಾರಿ ಎಂಆರ್ ಪಿಎಲ್ ಘಟಕದ ಅಧಿಕಾರಿಗಳಿಗೆ ಮನವಿ ಕೊಟ್ಟು ಗಂಭೀರ ಎಚ್ಚರಿಕೆ ನೀಡಿದರೂ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಪರಿಸರ ನಿಯಂತ್ರಣ ಅಧಿಕಾರಿಗಳು ಕೂಡ ನಾಮ್ಕೇವಾಸ್ತೆ ಸ್ಥಳಕ್ಕೆ ಭೇಟಿ ಕೊಟ್ಟು ಜನರ ಕಣ್ಣೊರೆಸುವ ತಂತ್ರ ಮಾಡುತ್ತಾರೆ. ಗುರುವಾರ ಸ್ಥಳೀಯರ ಆಕ್ರೋಶದ ಹಿನ್ನೆಲೆಯಲ್ಲಿ ಕುತ್ತೆತ್ತೂರು ಆಸುಪಾಸಿನಲ್ಲಿ ಪರಿಸರ ಇಲಾಖೆಯ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆಯ ನಾಟಕವಾಡಿದ್ದಾರೆ. ಸ್ಥಳೀಯ ನಿವಾಸಿಗಳಲ್ಲಿ ಆರೋಗ್ಯದಲ್ಲಿ ಏರು ಪೇರು ಉಂಟಾಗಿದ್ದು ವೈದ್ಯರು ಬಂದು ತಪಾಸಣೆ ನಡೆಸಿದ್ದಾರೆ.
ಎಂಆರ್ ಪಿಎಲ್ ಘಟಕದ ತ್ಯಾಜ್ಯವನ್ನು ಮಳೆಗಾಲ ಹೊರತುಪಡಿಸಿ ಬೇರೆ ಕಡೆಗೆ ಒಯ್ದು ವಿಲೇವಾರಿ ಮಾಡುವ ಪ್ರಕ್ರಿಯೆ ನಡೆಯುತ್ತದೆ. ಆದರೆ ಮಳೆಗಾಲದಲ್ಲಿ ಪ್ರತಿ ಬಾರಿ ನೀರಿಗೆ ಮಿಶ್ರಣಗೊಂಡು ಜಲಮಾಲಿನ್ಯ ಮಾಡುತ್ತದೆ. ಘಟಕದ ಒಳಗೆ ತ್ಯಾಜ್ಯ ಸಂಸ್ಕರಣೆ ಘಟಕ ಸರಿಯಾಗಿಲ್ಲವೋ ಅಥವಾ ಹಾಗೆಯೇ ಹೊರಗೆ ಬಿಡಲಾಗುತ್ತದೋ ಗೊತ್ತಿಲ್ಲ. ಮಳೆಗಾಲದಲ್ಲಿ ಸ್ಥಳೀಯ ತೋಡುಗಳಲ್ಲಿ ಮೀನುಗಳಿರುವುದರಿಂದ ತ್ಯಾಜ್ಯ ಹೊರಗೆ ಬಂದ ಕೂಡಲೇ ಸಾಯುತ್ತವೆ. ಮೀನು ಸತ್ತು ಬಿದ್ದುದನ್ನು ನೋಡಲು ಅಲ್ಲಿಗೆ ತೆರಳಿದವರಿಗೆ, ಕೃಷಿ ಗದ್ದೆಯಲ್ಲಿ ಶೇಖರಗೊಂಡ ನೀರಿನಲ್ಲಿ ಕಾಲು ಇಟ್ಟವರಿಗೆ ಕಾಲು ತುರಿಕೆಯಾಗುತ್ತದೆ. ಈ ಬಾರಿ ಮಾಲಿನ್ಯದ ಪರಿಣಾಮ ಅಸ್ವಸ್ಥಗೊಂಡಿದ್ದು ಚಿಕಿತ್ಸೆ ಪಡೆದಿದ್ದಾರೆ. ಘಟನೆ ಬಗ್ಗೆ ಡಿವೈಎಫ್ಐ ಕಾರ್ಯಕರ್ತರು ಹಲವು ಬಾರಿ ಪ್ರತಿಭಟನೆ ನಡೆಸಿದರೂ, ಅಧಿಕಾರಸ್ಥರು ಕಾಂಗ್ರೆಸ್- ಬಿಜೆಪಿ ಆದಿಯಾಗಿ ನಿರ್ಲಕ್ಷ್ಯ ವಹಿಸುವುದು ಇಲ್ಲಿನ ದುರವಸ್ಥೆಗೆ ಕನ್ನಡಿ ಹಿಡಿಯುತ್ತದೆ.
MRPL pollution, Kuthethur Colony witness huge dead fish, resident's fall sick, officer reach spot.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
04-09-26 08:14 pm
HK News Staffer
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
04-09-26 04:44 pm
HK News Staffer
Blinkit Raid, Mangalore: ಬ್ಲಿಂಕ್ ಇಟ್ ಆನ್ಲೈನ್...
03-09-26 10:19 pm
ಮುಂದಿನ ಬಾರಿ ಅಶೋಕ ರೈ ವಿರುದ್ಧ ತಾನೇ ಸ್ಪರ್ಧಿಸುತ್ತ...
03-09-26 09:10 pm
ಅಳಿವೆ ಬಾಗಿನಲ್ಲಿ ಹೂಳೆತ್ತದ ಕಾರಣ ಭಾರೀ ದುರಂತ ; ಮರ...
03-09-26 03:55 pm
Mangalore, Bajpe Kateel Road Closed: ಬಜ್ಪೆ -...
02-09-26 10:51 pm
04-09-26 08:16 pm
HK News Staffer
ಪಣಂಬೂರಿನಲ್ಲಿ ಚಾಲಕನ ಧಾವಂತಕ್ಕೆ ಬಸ್ ಪಲ್ಟಿ ; ಅಪಾಯ...
04-09-26 10:55 am
NITK, Mangalore, Forgery: ಎನ್ ಸಿಸಿ ಶಿಬಿರಗಳಲ್ಲ...
03-09-26 09:51 pm
ಅನ್ನಭಾಗ್ಯದ ಅಕ್ಕಿ ವಿಚಾರದಲ್ಲಿ ಕೊಲೆ, ಸುಲಿಗೆ ಬೆದರ...
03-09-26 09:36 pm
ಮುಲ್ಕಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನಕ್ಕೆ ಕನ್ನ ;...
03-09-26 09:15 pm