ಬ್ರೇಕಿಂಗ್ ನ್ಯೂಸ್
04-11-25 02:11 pm Mangalore Correspondent ಕ್ರೈಂ
ಮಂಗಳೂರು, ನ.4 : ನಕಲಿ ಷೇರು ಮಾರುಕಟ್ಟೆಯನ್ನು ನಂಬಿ ಹೂಡಿಕೆ ಮಾಡಿದ ಮಂಗಳೂರಿನ ಯುವಕನೊಬ್ಬ ಬರೋಬ್ಬರಿ 32 ಲಕ್ಷ ರೂ. ಹಣ ಕಳಕೊಂಡ ಘಟನೆ ನಡೆದಿದ್ದು, ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
35 ವರ್ಷದ ಮಂಗಳೂರಿನ ಯುವಕ ಮೊಬೈಲ್ ನಲ್ಲಿ ಫೇಸ್ಬುಕ್ ನೋಡುತ್ತಿದ್ದಾಗ ಕಾವ್ಯ ಶೆಟ್ಟಿ ಹೆಸರಲ್ಲಿ ಯುವತಿಯೊಬ್ಬಳು ಪರಿಚಯ ಆಗಿದ್ದಳು. ತಾನು ಮುಂಬೈನಲ್ಲಿ ಷೇರ್ ಟ್ರೇಡಿಂಗ್ ಕೆಲಸ ಮಾಡಿಕೊಂಡಿರುವುದಾಗಿ ತಿಳಿಸಿದ್ದು ಟ್ರೇಡಿಂಗ್ ನಲ್ಲಿ ಕೆಲಸ ಮಾಡಿದರೆ ಹೆಚ್ಚಿನ ಲಾಭಾಂಶ ಬರುವುದಾಗಿ ತಿಳಿಸಿದ್ದಾರೆ.
ಆಕೆ ಬಳಿಕ ವಾಟ್ಸಾಪ್ ನಂಬರ್ ನಿಂದ ಪಿರ್ಯಾದಿದಾರರಿಗೆ h5.capdynglobal.org ಎಂಬ ಲಿಂಕ್ ಕಳುಹಿಸಿ ಜಾಯಿನ್ ಆಗಲು ತಿಳಿಸಿದ್ದರು. ಸದ್ರಿ ಲಿಂಕ್ ಒತ್ತಿದಾಗ capdynglobal ಎಂಬ ಟ್ರೇಡಿಂಗ್ ಆ್ಯಪ್ ಓಪನ್ ಆಗಿತ್ತು. ತನ್ನ ಇ- ಮೇಲ್ ಐಡಿ ಹಾಗೂ ವೈಯಕ್ತಿಕ ವಿವರಗಳನ್ನು ನಮೂದಿಸಿ ಸದ್ರಿ ಟ್ರೇಡಿಂಗ್ ಆಪ್ ನಲ್ಲಿ ಜಾಯಿನ್ ಆಗಿದ್ದರು. ಟ್ರೇಡಿಂಗ್ ನಲ್ಲಿ ಶೇರು ಪರ್ಚೇಸ್ ಮಾಡಲು ರೂ. 40,000/- ಹಣ ಪಾವತಿ ಮಾಡುವಂತೆ ತಿಳಿಸಿದ್ದು, ಅದರಂತೆ ಸೆ.13ರಂದು ಫೋನ್ ಫೇ ಮಾಡಿರುತ್ತಾರೆ. ಇದಕ್ಕೆ ಲಾಭಾಂಶವಾಗಿ ಇವರ ಖಾತೆಗೆ ರೂ. 9,504/- ಹಣ ಜಮೆ ಆಗಿರುತ್ತದೆ. ನಂತರ 2,00,000/- ರೂ. ಹಣ ಹಾಕಿದಾಗ ಇದಕ್ಕೆ ಲಾಭಾಂಶವಾಗಿ 23,760/- ರೂ ಹಣ ಜಮೆ ಆಗಿರುತ್ತದೆ.
ಇದರಿಂದ ಸದ್ರಿ ಶೇರು ಮಾರ್ಕೆಟ್ ನಲ್ಲಿ ಪಿರ್ಯಾದಿದಾರರಿಗೆ ನಂಬಿಕೆ ಉಂಟಾಗಿ ಹೆಚ್ಚಿನ ಲಾಭಾಂಶ ಪಡೆಯುವ ಉದ್ದೇಶದಿಂದ ಅವರು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 32,06,880/-ರೂ. ಹಣವನ್ನು 13-09-2025 ರಿಂದ 24-10-2025 ರ ವರೆಗೆ ಅಪರಿಚಿತ ವ್ಯಕ್ತಿ ನೀಡಿದ ಬೇರೆ ಬೇರೆ ಹಣ ವರ್ಗಾವಣೆ ಮಾಡಿರುತ್ತಾರೆ. ಬಳಿಕ ಹಣ ವಂಚನೆಯಾದ ಬಗ್ಗೆ ಯುವಕನಿಗೆ ತಿಳಿದಿದ್ದು ಅಪರಿಚಿತರು ನಕಲಿ ಶೇರ್ ಮಾರ್ಕೆಟಿಂಗ್ ಇನ್ ವೆಸ್ಟ್ ಮೆಂಟ್ ಹೆಸರಿನಲ್ಲಿ ಆನ್ ಲೈನ್ ಮೂಲಕ ಪಿರ್ಯಾದಿದಾರರಿಂದ ಮೋಸದಿಂದ ಹಣ ವರ್ಗಾಯಿಸಿಕೊಂಡು ಆನ್ ಲೈನ್ ವಂಚನೆ ಮಾಡಿದ್ದಾರೆಂದು ದೂರು ನೀಡಿದ್ದಾರೆ.
A 35-year-old man from Mangaluru lost ₹32 lakh after falling victim to an online investment scam operated through a fake stock trading platform. The incident has been registered at the city’s Cyber Crime Police Station.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
27-07-26 09:48 pm
HK News Staffer
ಕ್ಯಾನ್ಸರ್ ವಿರುದ್ಧ ಹೋರಾಟದ ನಡುವೆಯೇ ಸೇವಾ ಕೈಂಕರ್ಯ...
27-07-26 08:24 pm
ಚಿನ್ನದ ರಿಂಗ್, ಡಾಲರ್ ಸಹಿತ ಬೆಲೆಬಾಳುವ ವಸ್ತುಗಳಿದ್...
26-07-26 09:57 pm
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
27-07-26 10:21 pm
HK News Staffer
ಸಚಿವ ಸ್ಥಾನ ಕೊಡಿಸಲು ಮೂರು ಕೋಟಿ ಬೇಡಿಕೆ ; ಕೇರಳದ ಶ...
27-07-26 09:04 pm
ಬೆಂಗಳೂರು ಗ್ಯಾರೇಜ್ ನಲ್ಲಿ ಅಗ್ನಿ ಅವಘಡ ; ಜಾಗ್ವಾರ...
27-07-26 07:35 pm
ಎಪಿಎಂಸಿ ಕಾರ್ಯದರ್ಶಿ ವಿರುದ್ಧ ಲೈಂಗಿಕ ಕಿರುಕುಳ ಆರೋ...
27-07-26 01:09 pm
ಸಮಾಜ ಸೇವೆಯ ಹೆಸರಲ್ಲಿ ಡ್ರಗ್ಸ್ ದಂಧೆ ; ಜಲೀಲ್ ಬಾಬಾ...
27-07-26 11:47 am