ಬ್ರೇಕಿಂಗ್ ನ್ಯೂಸ್
24-11-23 05:20 pm Mangalore Correspondent ಕರಾವಳಿ
ಮಂಗಳೂರು, ನ.24: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಬಗ್ಗೆ ಮೊದಲಿನಿಂದಲೂ ಅಪಸ್ವರ ಇದೆ. ಎಮ್ಮೆಕೆರೆಯಲ್ಲಿ ನಿರ್ಮಾಣಗೊಂಡ ಅಂತಾರಾಷ್ಟ್ರೀಯ ಈಜುಕೊಳ ಉದ್ಘಾಟನೆಗೆ ಆಗಮಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ತನ್ನ ಭಾಷಣದ ಆರಂಭದಲ್ಲೇ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಬಗ್ಗೆ ಅಪಸ್ವರ ಎತ್ತಿದ್ದಾರೆ.
ಮಂಗಳೂರಿನ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಜನರಿಗೆ ಲಾಭದಾಯಕ ಆಗಬಲ್ಲ ಯಾವುದೇ ಯೋಜನೆ ಮಾಡಿಲ್ಲ. ಬೇರೆ ಕಡೆ ನಾವು ಆದಾಯ ತೆಗೆಯುವ ಯೋಜನೆಗಳನ್ನು ಮಾಡಿದ್ದೇವೆ. ಒಂದು ಸಾವಿರ ಕೋಟಿ ವೆಚ್ಚ ಮಾಡಿದರೂ ಭವಿಷ್ಯದ ಆಸ್ತಿ ಆಗಬಲ್ಲ ಕೆಲಸ ಮಾಡಿಲ್ಲ. ಕನಿಷ್ಠ ಪಕ್ಷ ಪ್ರವಾಸೋದ್ಯಮಕ್ಕಾದ್ರೂ 100 ಕೋಟಿ ಇಡಬೇಕಿತ್ತು. ಆದರೆ ಇಲ್ಲಿ ಅದು ಆಗಿಲ್ಲ, ಪಾಲಿಕೆಗೆ ಲಾಭ ಬರುವ ಯೋಜನೆಯನ್ನೂ ಮಾಡಿಲ್ಲ. ಅದು ಯಾಕೆ ಆಗಿಲ್ವೋ ಗೊತ್ತಿಲ್ಲ, ಈ ಬಗ್ಗೆ ಗಮನ ಹರಿಸೋಣ ಎಂದು ಹೇಳಿದ್ದಾರೆ. \


ಮಂಗಳೂರಿನಲ್ಲಿ ಇನ್ನೂ 24 ಕಾಮಗಾರಿಗಳು ಪ್ರಗತಿಯಲ್ಲಿದೆ. ಮತ್ತೆ ಮೂರು ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ. ಸ್ಮಾರ್ಟ್ ಸಿಟಿ ಎಂಡಿಯವರು ಸಂಸದರ ಗಮನಕ್ಕೆ ತಂದು ಅವುಗಳಿಗೆ ಅನುಮತಿ ಕೊಡಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್ ಎದುರಲ್ಲೇ ಸಚಿವರು ಅಪಸ್ವರ ಎತ್ತಿದ್ದಾರೆ.

ಯಾವುದೇ ರಾಜಕೀಯ ಅಭಿವೃದ್ಧಿ ವಿಚಾರಕ್ಕೆ ಅಡ್ಡಿಯಾಗಬಾರದು. ಕಾಂಗ್ರೆಸ್ ಸರ್ಕಾರ ರಾಜಕೀಯ ಬಿಟ್ಟು ಅನುದಾನ ನೀಡಲಿದೆ. ಈಗಿನ ಶಾಸಕ ವೇದವ್ಯಾಸ ಕಾಮತ್ ಒಳ್ಳೆಯ ಕೆಲಸ ಮಾಡ್ತಾ ಇದಾರೆ. ಇದೇ ರೀತಿಯ ಕೆಲಸ ಮುಂದುವರೆಸಿ ಎನ್ನುತ್ತ ಸಂಸದ ನಳಿನ್ ಕುಮಾರ್ ಬಗ್ಗೆ ಪರೋಕ್ಷ ಅಸಮಾಧಾನ ತೋರಿದರು. ಇದೇ ಸಭೆಯಲ್ಲಿ ಸಚಿವ ಭೈರತಿ ಮಾತಿಗೆ ತಿರುಗೇಟು ನೀಡಿದ ಸಂಸದ ನಳಿನ್ ಕುಮಾರ್, ಸ್ಮಾರ್ಟ್ ಸಿಟಿ ಯೋಜನೆಯ ಪ್ರಥಮ ಹಂತದಲ್ಲಿ ಮಂಗಳೂರು ಇರಲಿಲ್ಲ. ರಾಜ್ಯದ ಏಳು ಜನರಗಳು ಇದ್ದರೂ ಮಂಗಳೂರು ಇರಲಿಲ್ಲ. ಭೈರತಿ ಸುರೇಶ್ ಇಲ್ಲಿ ಆದಾಯ ತರೋ ಯೋಜನೆಗಳಿಲ್ಲ ಅಂತ ಹೇಳಿದ್ರು. ಆಗ ಇಲ್ಲಿ ನಿಮ್ಮದೇ ಕಾಂಗ್ರೆಸ್ ಶಾಸಕ ಜೆ.ಆರ್.ಲೋಬೋ ಇದ್ದರು. ಸ್ಮಾರ್ಟ್ ಸಿಟಿಗೆ ಆಯ್ಕೆಯಾದ ಬಳಿಕ ಲೋಬೋ ಜೊತೆ ಚರ್ಚೆಯಾಗಿತ್ತು. ಆದರೆ ಆಗ ಹಾಕಿದ ಯೋಜನೆಗಳಲ್ಲಿ ಇದೆಲ್ಲ ಇರಲಿಲ್ಲ. ವೇದವ್ಯಾಸ ಕಾಮತ್ ಬಂದ ಮೇಲೆ ಅಭಿವೃದ್ಧಿ ಕೆಲಸಗಳು ಬದಲಾಗಿವೆ. ಮಾರುಕಟ್ಟೆ ಸೇರಿ ಹಲವು ಕಾಮಗಾರಿ ಸ್ಮಾರ್ಟ್ ಸಿಟಿಯಡಿ ನಡೀತಿದೆ. ಅಭಿವೃದ್ಧಿ ಜೊತೆಗೆ ನೀವು ಹೇಳಿದ ಆದಾಯ ತರೋ ಯೋಜನೆಗಳೂ ಇವೆ. ಮಾರ್ಕೆಟ್, ಪಾರ್ಕಿಂಗ್ ಜಾಗ ಸೇರಿ ಹಲವು ಕೆಲಸ ಆಗ್ತಿದೆ. ಒಮ್ಮೆ ಸಚಿವ ಭೈರತಿ ಸುರೇಶ್ ರವರು ಇದರ ಸಭೆ ನಡೆಸಬೇಕು ಎಂದರು.
ವಾಟರ್ ಫ್ರಂಟ್ ಕಾಮಗಾರಿಗೆ ಕೆಲವು ಖಾಸಗಿ ವ್ಯಕ್ತಿಗಳ ತಡೆ ಇದೆ. ಅದನ್ನು ಮಾನ್ಯ ಸಚಿವರು ಸಭೆ ನಡೆಸಿ ಸರಿಪಡಿಸಬೇಕು. ನಂತೂರು ಫ್ಲೈ ಓವರ್ ಕಾಮಗಾರಿ ಆರು ತಿಂಗಳಿನಿಂದ ಬಾಕಿ ಇದೆ. ಇಲ್ಲಿ ಮರ ಕಡಿದರೆ ಪ್ರತಿಭಟನೆ ಆಗುತ್ತೆ, ಭೂ ಸ್ವಾಧೀನ ಸಮಸ್ಯೆ ಇದೆ. ಒಂದು 28 ಕಿ.ಮೀ ಹೆದ್ದಾರಿ ಅಭಿವೃದ್ಧಿಗೆ 40 ಕಡೆ ಕೇಸ್ ಹಾಕಿದ್ದಾರೆ. ಇದರಿಂದ ಹಲವು ಕಡೆ ರಾಷ್ಟ್ರೀಯ ಹೆದ್ದಾರಿ ಕೆಲಸ ನಿಂತಿದೆ. ಇಲ್ಲಿನ ಜನರು ಅಭಿವೃದ್ಧಿ ಬಗ್ಗೆ ಮಾತನಾಡ್ತಾರೆ, ಆದರೆ ಅಭಿವೃದ್ಧಿ ಮಧ್ಯೆ ಪ್ರತಿಭಟನೆ ಕೂಡ ಆಗುತ್ತೆ ಎಂದು ಅಸಹಾಯಕತೆ ಹೇಳಿಕೊಂಡರು.
Olympic standard swimming pool inaugurated at Yemmekere in Mangalore. A community level international Olympic standard swimming pool worth Rs 24.94 crore was inaugurated by urban development minister Bairathi Suresh at Yemmekere on November 24.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
06-11-25 12:51 pm
Mangalore Correspondent
ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫ...
05-11-25 10:48 pm
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
06-11-25 02:08 pm
Mangalore Correspondent
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm