ಬ್ರೇಕಿಂಗ್ ನ್ಯೂಸ್
10-12-23 12:06 pm Mangalore Correspondent ಕರಾವಳಿ
ಉಳ್ಳಾಲ, ಡಿ.10: ಸೋಮೇಶ್ವರದಲ್ಲಿ ನಿನ್ನೆ ಮಧ್ಯಾಹ್ನ ಸಮುದ್ರ ಪಾಲಾಗಿದ್ದ ಇಬ್ಬರು ಪಿಯು ವಿದ್ಯಾರ್ಥಿಗಳ ಮೃತದೇಹಗಳು ಇಂದು ಬೆಳಗ್ಗೆ ಅದೇ ಸ್ಥಳದಲ್ಲಿ ಪತ್ತೆಯಾಗಿದೆ. ಸೋಮೇಶ್ವರದ ಪರಿಜ್ಞಾನ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಮಂಜೇಶ್ವರ, ಕುಂಜತ್ತೂರು ಅಡ್ಕ ನಿವಾಸಿ ಯಶ್ವಿತ್ (17) ಮತ್ತು ಕುಂಜತ್ತೂರು ಮಜಲ್ ನಿವಾಸಿ ಯುವರಾಜ್(17) ಮೃತರು.
ನಿನ್ನೆ ಮಧ್ಯಾಹ್ನದ ಬಳಿಕ ಕಾಲೇಜಿಗೆ ರಜೆ ಇದ್ದ ಕಾರಣ ಯಶ್ವಿತ್ ಮತ್ತು ಯುವರಾಜ್ ಸೇರಿ ಒಟ್ಟು ಆರು ವಿದ್ಯಾರ್ಥಿಗಳು ಸೋಮೇಶ್ವರದ ಸೋಮನಾಥ ದೇವಸ್ಥಾನದಲ್ಲಿ ಅನ್ನ ಪ್ರಸಾದ ಸ್ವೀಕರಿಸಿ ಪಕ್ಕದ ಸಮುದ್ರ ತೀರಕ್ಕೆ ತೆರಳಿದ್ದರು. ಈ ವೇಳೆ ಯಶ್ವಿತ್ ಮತ್ತು ಯುವರಾಜ್ ನೀರಾಟಕ್ಕಿಳಿದಿದ್ದು ದೈತ್ಯ ಅಲೆಗಳು ಅವರಿಬ್ಬರನ್ನು ಕೊಚ್ಚಿಕೊಂಡು ಹೋಗಿದೆ. ಸ್ಥಳಕ್ಕೆ ಬಂದಿದ್ದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮತ್ತು ಪರಿಣಿತ ಈಜುಗಾರರು ರಾತ್ರಿ ವರೆಗೂ ಶೋಧ ನಡೆಸಿದರೂ ನೀರುಪಾಲಾದ ಯುವರಾಜ್, ಯಶ್ವಿತ್ ಸಿಕ್ಕಿರಲಿಲ್ಲ. ಇಂದು ಬೆಳಗ್ಗೆ ಘಟನೆ ನಡೆದ ಸ್ಥಳದಲ್ಲೇ ವಿದ್ಯಾರ್ಥಿಗಳ ಮೃತದೇಹಗಳು ದೊರೆತಿದ್ದು ಉಳ್ಳಾಲ ಪೊಲೀಸರು ದೇರಳಕಟ್ಟೆ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಮೃತ ಇಬ್ಬರು ವಿದ್ಯಾರ್ಥಿಗಳು ಬಡ ಕುಟುಂಬದವರಾಗಿದ್ದು ತಂದೆ, ತಾಯಿ ಏಕೈಕ ಸಹೋದರಿಯರನ್ನ ಅಗಲಿದ್ದಾರೆ. ಸೋಮೇಶ್ವರ ಕಡಲ ಕಿನಾರೆಯಲ್ಲಿ ಪದೇ ಪದೇ ಅವಘಡಗಳು ನಡೆಯುತ್ತಿದ್ದರೂ ಪ್ರವಾಸೋದ್ಯಮ ಇಲಾಖೆ ಇಲ್ಲಿ ಖಾಯಂ ಜೀವ ರಕ್ಷಕ ಸಿಬ್ಬಂದಿಗಳನ್ನ ನೇಮಿಸಿಲ್ಲ. ಕಡಲ ತೀರಕ್ಕೆ ಭೇಟಿ ಕೊಡುವ ಜನರು ಜಾಗರೂಕರಾಗಿರಬೇಕೆಂದು ಉಳ್ಳಾಲ ಪೊಲೀಸ್ ಠಾಣಾ ನಿರೀಕ್ಷಕರಾದ ಬಾಲಕೃಷ್ಣ ಎಚ್ಚರಿಸಿದ್ದಾರೆ.
Mangalore Two students drowned at Someshwar Beach, body found. Two students had drowned into the sea while they were playing with their friends. The body had been found now
26-07-24 10:39 pm
HK News Desk
Greater Bengalore, DK Shivakumar: ರಾಮನಗರ ಇನ್ನ...
26-07-24 09:58 pm
MUDA Scam, Byrathi Suresh: ಕೇಂದ್ರ ಸಚಿವ ಕುಮಾರಸ...
26-07-24 09:27 pm
Shalini Rajneesh, Rajneesh Goyal: ಮುಖ್ಯ ಕಾರ್ಯ...
26-07-24 09:00 pm
Bangalore bike wheelie: ಬೆಂಗಳೂರಿನಲ್ಲಿ ಹೆಚ್ಚಾಯ...
26-07-24 08:50 pm
26-07-24 05:51 pm
HK News Desk
ಬಯಲು ಶೌಚಕ್ಕೆ ಹೋದವನ ಕತ್ತಿಗೆ ಸುತ್ತಿಕೊಂಡ 13 ಅಡಿ...
25-07-24 01:03 pm
ನೇಪಾಳ ; ಟೇಕಾಫ್ ವೇಳೆ ರನ್ ವೇನಲ್ಲೇ ಹೊತ್ತಿ ಉರಿದ...
24-07-24 01:48 pm
ಪ್ಯಾರಿಸ್ ಒಲಿಂಪಿಕ್ಸ್ ಗೆ ಭಯೋತ್ಪಾದಕ ದಾಳಿ ಬೆದರಿಕೆ...
24-07-24 12:25 pm
IAS Wife Suicide, Rowdy, Crime; ರೌಡಿ ಹಿಂದೆ ಓಡ...
23-07-24 08:45 pm
26-07-24 10:24 pm
Mangalore Correspondent
Mangalore rain, Uchila, Someshwara beach: ಸೋಮ...
26-07-24 09:06 pm
Mangalore Liquid Lounge News: ವಿದ್ಯಾರ್ಥಿಗಳೇ ಬ...
26-07-24 05:07 pm
Mangalore, Vinay Kulkarni, Koragajja: ತುಳುನಾಡ...
26-07-24 02:11 pm
Mangalore rain, Ullal house collapsed: ಉಳ್ಳಾಲ...
25-07-24 11:19 pm
26-07-24 03:42 pm
Bangalore Correspondent
Mangalore Jail Raid: ನಸುಕಿನಲ್ಲಿ ಮಂಗಳೂರು ಜೈಲಿಗ...
25-07-24 11:44 am
Shivamogga Murder News: ಪ್ರೀತಿಸಿದ ಯುವತಿಯನ್ನೇ...
24-07-24 06:45 pm
Bangalore PG Murder: ಬೆಂಗಳೂರು ; ಲೇಡಿಸ್ ಪಿಜಿಗೆ...
24-07-24 05:09 pm
Ramnagara rape, crime: ಐಸ್ಕ್ರೀಮ್ ಕೊಡಿಸೋ ನೆಪ...
23-07-24 03:03 pm