ಬ್ರೇಕಿಂಗ್ ನ್ಯೂಸ್
23-12-23 10:18 pm Mangalore Correspondent ಕರಾವಳಿ
ಮಂಗಳೂರು, ಡಿ.23: ಮಂಗಳೂರಿನಿಂದ ಬೆಂಗಳೂರಿಗೆ ರಾತ್ರಿ 8.15ಕ್ಕೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ಕೊನೆಕ್ಷಣದಲ್ಲಿ ರದ್ದಾದ ಕಾರಣ ಪ್ರಯಾಣಿಕರು ಆಕ್ರೋಶಿತರಾಗಿ ಏರ್ಪೋರ್ಟ್ ಸಿಬಂದಿಯನ್ನು ತರಾಟೆಗೆತ್ತಿಕೊಂಡ ಘಟನೆ ನಡೆದಿದೆ.
ಬಜ್ಪೆ ವಿಮಾನ ನಿಲ್ದಾಣದಿಂದ ರಾತ್ರಿ 8.15ಕ್ಕೆ ಏರ್ ಇಂಡಿಯಾ ವಿಮಾನ ನಿಗದಿಯಾಗಿತ್ತು. ಆದರೆ ವಿಮಾನ ಬಂದಿರಲಿಲ್ಲ. ಸಮಯ ಕಳೆದರೂ ವಿಮಾನ ಬಾರದೇ ಇದ್ದುದರಿಂದ ಪ್ರಯಾಣಿಕರು ಆಕ್ರೋಶಗೊಂಡಿದ್ದು ಏರ್ ಇಂಡಿಯಾ ಸಿಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ನಾವು ಅಮೆರಿಕಕ್ಕೆ ಹೋಗಬೇಕು. ಬೆಂಗಳೂರಿಗೆ ಸಕಾಲಕ್ಕೆ ತಲುಪದೇ ಇದ್ದಲ್ಲಿ ವಿಮಾನ ಸಿಗಲ್ಲ. ನೀವು ಕೊನೆಯ ಕ್ಷಣದಲ್ಲಿ ವಿಮಾನ ಇಲ್ಲಾಂದ್ರೆ ಏನು ಮಾಡಬೇಕೆಂದು ಪ್ರಯಾಣಿಕರೊಬ್ಬರು ತೀವ್ರ ತರಾಟೆಗೆತ್ತಿಕೊಂಡಿದ್ದಾರೆ. ಇನ್ನು ಕೆಲವರು ಬೆಂಗಳೂರಿನಲ್ಲಿ ಪರೀಕ್ಷೆ ಬರೆಯಲು ಹೊರಟವರಿದ್ದರು. ವಿಮಾನ ಇಲ್ಲಾಂದ್ರೆ ಮೊದಲೇ ಹೇಳಬೇಕಲ್ಲ. ಹೀಗೆ ಮಾಡಿದರೆ ನಾವೇನು ಮಾಡಬೇಕು. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದ್ದಾರೆ.


ಕ್ರಿಸ್ಮಸ್ ಆಗಿದ್ದರಿಂದ ತುರ್ತು ಪ್ರಯಾಣಕ್ಕೆ ಹೊರಟವರೂ ಇದ್ದರು. ವಿಮಾನ ಇಲ್ಲದೆ ಕಂಗಾಲಾಗಿದ್ದರು. ಅರ್ಜೆಂಟ್ ಹೋಗಲೇಬೇಕು, ನೀವು ಪರ್ಯಾಯ ವ್ಯವಸ್ಥೆ ಮಾಡಿ. ಬೇರೆ ವಿಮಾನ ವ್ಯವಸ್ಥೆ ಮಾಡಿ. ಈಗ ರದ್ದಾಗಿದೆ ಎಂದರೆ ಆಗೋದಿಲ್ಲ ಎಂದು ಆಕ್ರೋಶ ತೋರಿದ್ದಾರೆ. ಸಿಬಂದಿ ಪ್ರಯಾಣಿಕರನ್ನು ಸಮಾಧಾನ ಮಾಡಲೆತ್ನಿಸಿದರೂ ಕೇಳಲಿಲ್ಲ. ಕೊನೆಗೆ, ಏರ್ ಇಂಡಿಯಾ ಸಿಬಂದಿ ವಿಮಾನವು ತಾಂತ್ರಿಕ ತೊಂದರೆಗೀಡಾಗಿದ್ದು ಬೆಂಗಳೂರಿನಲ್ಲಿ ಉಳಿದಿದೆ. ಪರ್ಯಾಯ ವ್ಯವಸ್ಥೆ ಮಾಡಿದ್ದು ರಾತ್ರಿ 2.15ಕ್ಕೆ ಬೇರೊಂದು ವಿಮಾನದಲ್ಲಿ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದ್ದೇವೆ ಎಂದಿದ್ದಾರೆ. ಎಂಟು ಗಂಟೆಯ ವಿಮಾನಕ್ಕಾಗಿ ಬಂದಿದ್ದ ಪ್ರಯಾಣಿಕರು ಬದಲಿ ವ್ಯವಸ್ಥೆಗಾಗಿ ಕಾದು ಕುಳಿತಿದ್ದಾರೆ.
Mangalore Bangalore airindia flight of 8:10 cancelled at last moment, passengers go angry, fight, video viral.
07-08-26 04:18 pm
HK News Staffer
ತಂದೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿ ಸಾವಿಗೂ ಬಾರದ ಪ...
06-08-26 03:49 pm
ಕಲಬುರಗಿಯಲ್ಲಿ SIR ಪರಿಷ್ಕರಣೆ ಶಾಕ್ ; 5.36 ಲಕ್ಷ...
06-08-26 02:19 pm
'ಮಂತ್ರಿ ಸ್ಥಾನಕ್ಕೆ ಕೋಟಿ ಕೋಟಿ ಡೀಲ್?' ಮಾಜಿ ಸಚಿವರ...
05-08-26 10:56 pm
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಸಮರ್ಥ, ಛಲವಾದಿ...
04-08-26 09:12 pm
05-08-26 08:36 pm
HK News Staffer
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
06-08-26 11:03 pm
Mangaluru Staffer
ಅಯೋಧ್ಯೆ ಕಾಣಿಕೆ ಹಣ ಕಳವು ತೀವ್ರ ಆಘಾತಕಾರಿ, ಯಾವುದೇ...
06-08-26 10:22 pm
ಹಿಂದೂ ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ...
06-08-26 09:33 pm
ಹೆದ್ದಾರಿ ಬದಿ ವ್ಯಾಪಾರಿಗಳ ವಿರುದ್ಧ ಕಾರ್ಯಾಚರಣೆಗಿಳ...
06-08-26 08:09 pm
ಸುರತ್ಕಲ್ ಎನ್ಐಟಿಕೆ ಕಾಲೇಜು ಹಾಸ್ಟೆಲ್ನಲ್ಲಿ ಸ್ವಯ...
05-08-26 08:08 pm
07-08-26 08:44 pm
HK News Staffer
Udupi Murder, David Dsouza: ಕುಂದಾಪುರ ಶೂಟೌಟ್ ಮ...
07-08-26 06:00 pm
ಬಟ್ಟೆ ವಿಚಾರಕ್ಕೆ ಸಹೋದರಿಯರ ಸಣ್ಣ ಜಗಳ; ತಾಯಿ ಬೈದಿದ...
07-08-26 04:22 pm
ಒಂದೇ ಮರಕ್ಕೆ ನೇಣು ಬಿಗಿದುಕೊಂಡ ಇಬ್ಬರು ಯುವತಿಯರ ಪ್...
07-08-26 12:35 pm
ಲವ್ - ಸೆಕ್ಸ್..ದೋಖಾ ; ಬಳ್ಳಾರಿಯಲ್ಲಿ ಬೆಚ್ಚಿಬೀಳಿಸ...
06-08-26 09:31 pm