ಬ್ರೇಕಿಂಗ್ ನ್ಯೂಸ್
30-12-23 11:00 pm Mangalore Correspondent ಕರಾವಳಿ
ಮಂಗಳೂರು, ಡಿ.30: ಯುವಕರ ದೇಹ ಕಬ್ಬಿಣದ ಮಾಂಸದ ತುಂಡುಗಳಂತಿರಬೇಕು ಎಂದಿದ್ದರು ವಿವೇಕಾನಂದರು. ಅವರ ಮಾತುಗಳನ್ನು ಗ್ರಾಮೀಣ ಭಾಗದಲ್ಲಿ ಸಾಕಾರಗೊಳಿಸುತ್ತಿರುವುದು ಜನಪದ ಕ್ರೀಡೆ ಕಂಬಳ. ಇದರಲ್ಲಿ ತೊಡಗಿಸಿಕೊಂಡವರು, ಕಂಬಳದ ಓಟಗಾರರು ಜೀಮ್ ನಲ್ಲಿ ಹುರಿಗೊಳ್ಳುವ ಕ್ರೀಡಾಪಟುಗಳಿಗಿಂತ ಹೆಚ್ಚು ಕಠಿಣವಾಗಿದ್ದಾರೆ. ಸಿಕ್ಸ್ ಪ್ಯಾಕ್, ಏಯ್ಟ್ ಪ್ಯಾಕ್ ದೇಹದಾರ್ಢ್ಯವುಳ್ಳವರಿದ್ದಾರೆ. ವಿವೇಕಾನಂದರ ಮಾತು ಸಾಕಾರವಾಗುವಲ್ಲಿ ಕರಾವಳಿಯ ಕಂಬಳ, ತಮಿಳುನಾಡಿನ ಜಲ್ಲಿಕಟ್ಟಿನಂತಹ ಸ್ಪರ್ಧೆಗಳು ಸಾಕ್ಷಿಯಂತಿವೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ, ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಕುಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆಯುತ್ತಿರುವ ಮಂಗಳೂರು ಕಂಬಳ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ ಪಾಲ್ಗೊಂಡು ಮಾತನಾಡಿದರು. ಈ ರೀತಿಯ ಆಚರಣೆಯನ್ನು ನಿಲ್ಲಿಸಿ, ಗ್ರಾಮೀಣ ಭಾಗದ ಯುವಶಕ್ತಿಯನ್ನು ನಿಸ್ತೇಜಗೊಳಿಸುವುದಕ್ಕಾಗಿಯೇ ಕಂಬಳ, ಜಲ್ಲಿಕಟ್ಟು ನಿಷೇಧಕ್ಕಾಗಿ ಷಡ್ಯಂತ್ರ ನಡೆಸಲಾಗಿತ್ತು. ಆದರೆ ನಮ್ಮ ಬೃಜೇಶ್ ಚೌಟರಂತವರು ಸೇರಿಕೊಂಡು ಕಂಬಳವನ್ನು ಮಂಗಳೂರಿನಂತಹ ನಗರದಲ್ಲೇ ನಡೆಸಿ ಸೆಡ್ಡು ಹೊಡೆದಿದ್ದಾರೆ. ಅಲ್ಲದೆ, ಕಂಬಳ ಪರವಾಗಿ ಹೋರಾಟ ನಡೆಸಿ ಜಯ ಕೊಡಿಸಿದ್ದಾರೆ. ಕಂಬಳ ಗ್ರಾಮೀಣ ಭಾಗದ ಜನರಲ್ಲಿ ಯೌವನತ್ವ ಹೆಚ್ಚಿಸುವ, ಯುವಶಕ್ತಿಯನ್ನು ಉತ್ತೇಜಿಸುವ ಅತ್ಯುತ್ತಮ ಜನಪದ ಕ್ರೀಡೆಯಾಗಿದೆ. ಇದರ ಉಳಿವಿಗಾಗಿ ಹೋರಾಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.



ಕಾರ್ಯಕ್ರಮದಲ್ಲಿ ಮಂತ್ರಾಲಯ ಮಠದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅನಿರೀಕ್ಷಿತ ಅತಿಥಿಯಾಗಿ ಆಗಮಿಸಿ ಕಂಬಳಕ್ಕೆ ಶುಭ ಕೋರಿದರು. ಸಮಾಜದ ಎಲ್ಲರನ್ನೂ ಮತ ಭೇದ ಮರೆತು ಒಂದುಗೂಡಿಸುವ ಕಾರ್ಯಕ್ರಮ ಕಂಬಳ. ಜನರಲ್ಲಿ ಸಾಮರಸ್ಯ ಬಿತ್ತುವ ಜನಪದ ಉತ್ಸವ. ನಿಂತು ಹೋದ ಕಲೆಯನ್ನು ಮೇಳೈಸುವಂತೆ ಮಾಡಿದ್ದು ತಂಬು ಸಂತಸ ನೀಡಿದೆ. ಇದಕ್ಕಾಗಿ ದುಡಿದ ಎಲ್ಲರಿಗೂ ರಾಯರು ಆಶೀರ್ವದಿಸಲಿ ಎಂದು ಸ್ವಾಮೀಜಿ ಹಾರೈಸಿದರು.





ಗೋಲ್ಡ್ ಫಿಂಚ್ ಸಿಟಿ ಮಾಲೀಕ ಪ್ರಕಾಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಲ್ಲ ಜನರನ್ನೂ ಒಳಗೊಳಿಸುವ, ಮತ ಭೇದ ಇಲ್ಲದೆ ಬೆರೆಯುವಂತೆ ಮಾಡುವ ಅಪರೂಪದ ಉತ್ಸವಗಳಲ್ಲಿ ಕಂಬಳ ಒಂದು. ತುಳುನಾಡಿಗೆ ಸೀಮಿತವಾಗಿದ್ದ ಕಂಬಳ ಈಗ ಬೆಂಗಳೂರಿಗೂ ಕಾಲಿಟ್ಟಿದೆ. ಭಾರೀ ಜನಮನ್ನಣೆಯನ್ನೂ ಗಳಿಸಿತ್ತು. ನಮ್ಮ ಜನಪದ ಕ್ರೀಡೆ ಹೊರಗಿನವರಿಗೂ ತಿಳಿಯುವಂತಾಗಿತ್ತು. ಕಂಬಳ ಈಗ ಕೇವಲ ನಮ್ಮ ಗ್ರಾಮೀಣ ಕ್ರೀಡೆಯಾಗಿ ಉಳಿದಿಲ್ಲ. ಎಲ್ಲರ ಕ್ರೀಡೆಯಾಗಿ ಬೆಳೆಯುತ್ತಿದೆ ಎಂದು ಹೇಳಿದರು. ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಕ್ಯಾ. ಬೃಜೇಶ್ ಚೌಟ ಸೇರಿದಂತೆ ಕಂಬಳ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
Mangalore kambala crowded, MP Tejasvi Surya guest. The seventh edition of Mangaluru Kambala was held at Gold Finch City in Bangra Kulur on December 30.
06-11-25 07:34 pm
Bangalore Correspondent
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
06-11-25 10:22 pm
HK News Desk
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
06-11-25 10:50 pm
Mangalore Correspondent
ಜೈಲ್ ಜಾಮರ್ ನಿಂದ ಸುತ್ತಮುತ್ತ ನೆಟ್ವರ್ಕ್ ಸಮಸ್ಯೆ ;...
06-11-25 12:51 pm
ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫ...
05-11-25 10:48 pm
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
06-11-25 10:59 pm
Mangalore Correspondent
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm