ಬ್ರೇಕಿಂಗ್ ನ್ಯೂಸ್
09-01-24 10:19 pm Mangalore Correspondent ಕರಾವಳಿ
ಮಂಗಳೂರು, ಜ.9: ಸ್ಪೀಕರ್ ಯುಟಿ ಖಾದರ್ ಅವರಲ್ಲಿ ರಾಮ ಮಂದಿರ ಉದ್ಘಾಟನೆಗೆ ಹೋಗುತ್ತೀರಾ ಎಂದು ಪತ್ರಕರ್ತರು ಪ್ರಶ್ನೆ ಹಾಕಿದ್ದರು. ಬಹಳ ಜಾಣ್ಮೆಯಿಂದ ಉತ್ತರಿಸಲು ಮುಂದಾದ ಖಾದರ್ ಸಮಯ, ಸಂದರ್ಭ ಸಿಕ್ಕರೆ ಹೋಗುವುದರಲ್ಲಿ ತಪ್ಪಿಲ್ಲ ಎಂದು ಹೇಳಿಕೆ ಕೊಟ್ಟು ಜಾರಿಕೊಂಡಿದ್ದಾರೆ.
ರಾಮ ಮಂದಿರ ಬಗ್ಗೆ ಕೇಳಿದ ಪ್ರಶ್ನೆಗೆ, ನಾನು ಸ್ಪೀಕರ್ ಇದ್ದೇನೆ, ಹಾಗೆಲ್ಲ ಧರ್ಮ ಸೂಕ್ಷ್ಮಗಳ ಬಗ್ಗೆ ಮಾತಾಡಲ್ಲ ಎಂದ್ರು. ಮಂದಿರ ಉದ್ಘಾಟನೆ ಬಗ್ಗೆ ಎಂದು ಕೇಳಿದ್ದಕ್ಕೆ, ಸೌಹಾರ್ದತೆ ಪ್ರೀತಿ ವಿಶ್ವಾಸ ನೆಲೆಗೊಳಿಸುವ ಕಾರ್ಯಕ್ರಮ. ಎಲ್ಲರಿಗೂ ಪ್ರೇರಣೆ ಆಗುವ ಕೆಲಸ ಆಗುತ್ತಿದೆ. ಶುಭ ಹಾರೈಸುತ್ತೇನೆ ಎಂದರು.
ನೀವು ಕಾರ್ಯಕ್ರಮಕ್ಕೆ ಕರೆದರೆ ಹೋಗುತ್ತೀರಾ ಎಂದು ಕೇಳಿದ್ದಕ್ಕೆ, ನಮಗೆ ಸಮಯವಾಕಾಶ ಇದ್ದರೆ, ಅಂತಹ ಅವಕಾಶ, ಸಂದರ್ಭ ಬಂದಲ್ಲಿ ಹೋಗುವುದರಲ್ಲಿ ತಪ್ಪಿಲ್ಲ. ನಮ್ಮ ಪ್ರೋಗ್ರಾಮ್ ನೋಡಿಕೊಂಡು ಹೋಗಬೇಕಷ್ಟೆ. ಪ್ರತಿಯೊಂದು ಕೂಡ ಎಲ್ಲರನ್ನು ಒಗ್ಗೂಡಿಸುವ, ಸೌಹಾರ್ದತೆಯ ಕಾರ್ಯಕ್ರಮ ಆಗಬೇಕೆಂದು ಬಯಸುತ್ತೇನೆ ಎಂದು ಹೇಳಿದರು.
ಮಕ್ಕಳು ಶೌಚಾಲಯ ತೊಳೆಯುವ ಕುರಿತ ತಮ್ಮ ಮಾತಿನ ಬಗ್ಗೆ ಕೇಳಿದ್ದಕ್ಕೆ, ನಾವು ಸಣ್ಣದಿರುವಾಗ ನಮ್ಮ ಟಾಯ್ಲೆಟನ್ನು ನಾವೇ ತೊಳೆದಿದ್ದೇವೆ. ಹಾಗಂತ ಒತ್ತಾಯ ಮಾಡುವುದು ಸರಿಯಲ್ಲ. ಮಕ್ಕಳು ತಾವು ಬಳಸುವ ಟಾಯ್ಲೆಟನ್ನು ಕ್ಲೀನ್ ಮಾಡುವುದರಲ್ಲಿ ತಪ್ಪೇನಿದೆ. ತಾವಾಗಿಯೇ ಅಂತಹ ಕೆಲಸ ಮಾಡಿದರೆ, ಅರಿವು ಬರುತ್ತದೆ. ಹಾಗೆಂದು ನನ್ನ ಅಭಿಪ್ರಾಯ ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದರು. ಇತ್ತೀಚೆಗೆ ಮೂಡುಬಿದ್ರೆಯಲ್ಲಿ ಖಾದರ್ ಮಕ್ಕಳು ಟಾಯ್ಲೆಟ್ ತೊಳೆದರೆ ತಪ್ಪೇನು ಎಂದು ಹೇಳಿಕೆ ನೀಡಿದ್ದು ಚರ್ಚೆಗೆ ಗ್ರಾಸವಾಗಿತ್ತು.
A journalist asked Speaker UT Khader if he would go for the inauguration of ram temple. Khader, who tried to reply very tactfully, slipped away by saying that there was nothing wrong in going if the time and opportunity arose.
07-08-26 10:42 pm
HK News Desk
ಕಾಂಗ್ರೆಸಿನಲ್ಲಿ ತಣ್ಣಗಾಗದ ಸಂಪುಟ ಕಿಚ್ಚು ; ಅತೃಪ್ತ...
07-08-26 04:18 pm
ತಂದೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿ ಸಾವಿಗೂ ಬಾರದ ಪ...
06-08-26 03:49 pm
ಕಲಬುರಗಿಯಲ್ಲಿ SIR ಪರಿಷ್ಕರಣೆ ಶಾಕ್ ; 5.36 ಲಕ್ಷ...
06-08-26 02:19 pm
'ಮಂತ್ರಿ ಸ್ಥಾನಕ್ಕೆ ಕೋಟಿ ಕೋಟಿ ಡೀಲ್?' ಮಾಜಿ ಸಚಿವರ...
05-08-26 10:56 pm
05-08-26 08:36 pm
HK News Staffer
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
07-08-26 10:13 pm
HK News Desk
ವಿದ್ಯುತ್ ಆಘಾತದಿಂದ ಮೃತಪಟ್ಟ ಲೈನ್ಮೆನ್ ಜಮೀರ್ ಮನೆ...
07-08-26 09:26 pm
BC Road Accident, Mangalore: ಬಿಸಿ ರೋಡ್ ಬಳಿ ಟಿ...
06-08-26 11:03 pm
ಅಯೋಧ್ಯೆ ಕಾಣಿಕೆ ಹಣ ಕಳವು ತೀವ್ರ ಆಘಾತಕಾರಿ, ಯಾವುದೇ...
06-08-26 10:22 pm
ಹಿಂದೂ ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ...
06-08-26 09:33 pm
07-08-26 10:37 pm
HK News Desk
ಮುಡಿಪು ಬಳಿ ಹಾಡಹಗಲೇ ಒಂಟಿ ವೃದ್ಧೆಯ ಮೇಲೆ ಹಲ್ಲೆ ನಡ...
07-08-26 09:23 pm
ಉಡುಪಿಯ ಯುವ ಮಾಡೆಲ್ ಮನೆಯಲ್ಲೇ ಆತ್ಮಹತ್ಯೆ ; ಖಾಸಗಿ...
07-08-26 08:44 pm
Udupi Murder, David Dsouza: ಕುಂದಾಪುರ ಶೂಟೌಟ್ ಮ...
07-08-26 06:00 pm
ಬಟ್ಟೆ ವಿಚಾರಕ್ಕೆ ಸಹೋದರಿಯರ ಸಣ್ಣ ಜಗಳ; ತಾಯಿ ಬೈದಿದ...
07-08-26 04:22 pm